ಬಾಗಿಲು ತೆರೆದ ಕೇದಾರನಾಥ-ಬಾದಾಮಿ ಶುಗರ್ಸ್‌: ದಶಕದಿಂದ ಸ್ತಬ್ಧಗೊಂಡ ಕಾರ್ಖಾನೆಗಳಿಗೆ ಮರುಜೀವ


Team Udayavani, Jan 10, 2021, 11:32 AM IST

ಬಾಗಿಲು ತೆರೆದ ಕೇದಾರನಾಥ-ಬಾದಾಮಿ ಶುಗರ್ಸ್‌: ದಶಕದಿಂದ ಸ್ತಬ್ಧಗೊಂಡ ಕಾರ್ಖಾನೆಗಳಿಗೆ ಮರುಜೀವ

ಬಾಗಲಕೋಟೆ: “ಸಕ್ಕರೆ ಕಾರ್ಖಾನೆ ಅಥವಾ ಯಾವುದೇ ಕಾರ್ಖಾನೆಗಳು ಬಾದಾಮಿ ತಾಲೂಕಿಗೆ ಆಗಿ ಬರಲ್ಲ’ ಎಂಬ ಶಾಪ
ಕೊನೆಗೂ ವಿಮೋಚನೆಯಾಗಿದ್ದು, ಬರೋಬ್ಬರಿ ಒಂದು ದಶಕದಿಂದ ಸ್ತಬ್ಧಗೊಂಡಿದ್ದ ಎರಡು ಕಾರ್ಖಾನೆಗಳಿಗೆ ಮರುಜೀವ ಬಂದಿದೆ. ಹೌದು. ನೀರಾವರಿ, ಉದ್ಯಮ, ಕಾರ್ಖಾನೆ ವಿಷಯದಲ್ಲಿ ಬಾದಾಮಿ ತಾಲೂಕಿನ ಜನರು ಸಾಕಷ್ಟು ಸಂಕಷ್ಟ ಎದುರಿಸಿದ್ದರು. ಈ ಭಾಗದ ರೈತರೂ ಕಬ್ಬು ಬೆಳೆದು ಕೈ ತುಂಬಾ ಹಣ ಮಾಡಿಕೊಳ್ಳಲೆಂಬ ಉದ್ದೇಶದಿಂದ ಆರಂಭಗೊಂಡ ಎರಡು ಕಾರ್ಖಾನೆಗಳು, ದಶಕದಿಂದ ಬಾಗಿಲು ಹಾಗಿದ್ದವು. ನಿರಾಣಿ ಉದ್ಯಮ ಸಮೂಹದ ಪ್ರಯತ್ನದಿಂದ ಇದೀಗ ಆ ಎರಡೂ ಕಾರ್ಖಾನೆಗಳ ಬಾಗಿಲು ತೆರೆದಿದ್ದು, ಬಾದಾಮಿ ತಾಲೂಕಿಗೂ ಸಿಹಿ ಸಿಗಲಿದೆ.

ದಶಕದ ಹಿಂದೆ ಸ್ತಬ್ಧ: ಬಾದಾಮಿ ತಾಲೂಕಿನ ಜಮ್ಮನಕಟ್ಟಿಯಲ್ಲಿ 2500 ಮೆ.ಟನ್‌ ಕಬ್ಬು ನುರಿಸುವ ಸಾಮರ್ಥ್ಯದ ಸಕ್ಕರೆ ಕಾರ್ಖಾನೆ ಬಾದಾಮಿ ಶುಗರ್ ಆರಂಭಗೊಂಡಿತ್ತು. ಆದರೆ, ಇದು ಕಳೆದ 2008ರಲ್ಲೇ ಹಲವು ಆರ್ಥಿಕ ಮುಗ್ಗಟ್ಟು, ವಿವಿಧ ಕಾರಣಗಳಿಂದ ಸ್ತಬ್ಧಗೊಂಡಿತ್ತು. ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರು 2014ರಲ್ಲಿ ಈ ಕಾರ್ಖಾನೆ ಪುನಾರಂಭಿಸುವ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಲಿಲ್ಲ. ಹೀಗಾಗಿ ಅದನ್ನು ಪುನಾರಂಭಿಸುವ ಧೈರ್ಯವನ್ನೂ ತೋರಲಿಲ್ಲ. ಆದರೆ ನಿರಾಣಿ ಉದ್ಯಮ ಸಮೂಹದ ಸಂಸ್ಥಾಪಕದ ಅಧ್ಯಕ್ಷ, ಶಾಸಕ ಮುರುಗೇಶ ನಿರಾಣಿ ಈ ಕಾರ್ಖಾನೆಯನ್ನು ತಮ್ಮ ಒಡೆತನಕ್ಕೆ ಪಡೆದು ಸುಮಾರು 20 ಕೋಟಿ ತುರ್ತು ಅನುದಾನ ಖರ್ಚು ಮಾಡಿ, ಬಾದಾಮಿ ಶುಗರ್ ಪುನಃ ಆರಂಭಿಸುವ ಧೈರ್ಯ ಮಾಡಿದ್ದಾರೆ. ಹತ್ತು ವರ್ಷದಿಂದ ತುಕ್ಕು ಹಿಡಿದ ಕಾರ್ಖಾನೆಯನ್ನು ಪುನಃ ಆರಂಭಿಸಿದ್ದಾರೆ. ಹೀಗಾಗಿ ಬಾದಾಮಿ ತಾಲೂಕಿನ ಹಲವು ಗ್ರಾಮಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಕಬ್ಬು ಬೆಳೆಯುವ ರೈತರಿಗೆ ಖುಷಿ ತಂದಿದೆ.

ಇದನ್ನೂ ಓದಿ:ನಾಪತ್ತೆಯಾಗಿದ್ದ ಇಂಡೋನೇಷ್ಯಾ ವಿಮಾನದ ಅವಶೇಷಗಳು, ಮೃತದೇಹ ಸಮುದ್ರದಲ್ಲಿ ಪತ್ತೆ!

ಕೇದಾರನಾಥ ಶುಗರ್ ಆರಂಭ: ಇನ್ನು ಹಲವು ವಿವಾದಗಳಲ್ಲಿದ್ದ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಕೇದಾರನಾಥ ಶುಗರ್ ಕೂಡ, ಕಳೆದ 2012ರಲ್ಲೇ ಸ್ಥಗಿತಗೊಂಡಿತ್ತು. ಉದ್ಯಮಿ ಮುಂಬೈನ ವಿಜಯಸಿಂಹ ಅಪರಾದ ಸ್ಥಳೀಯ ಕೆಲ ಉದ್ಯಮಿಗಳ ಸಹಕಾರದೊಂದಿಗೆ ಈ ಕಾರ್ಖಾನೆ ಆರಂಭಿಸಿದ್ದರು. ಹಣಕಾಸು ಮುಗ್ಗಟ್ಟು ಹಾಗೂ ಹಲವು ಸಮಸ್ಯೆಯಿಂದ
ಆರಂಭಗೊಂಡ ಮೊದಲ ವರ್ಷವೇ ಈ ಕಾರ್ಖಾನೆಯೂ ಬಂದ್‌ ಆಗಿತ್ತು. ಹೀಗಾಗಿ ಕಬ್ಬು ಪೂರೈಸಿದ ರೈತರು, ನಮ್ಮ ತಾಲೂಕಿಗೆ
ಕಬ್ಬಿನ ಯೋಗವಿಲ್ಲ. ಕಾರ್ಖಾನೆಗಳು ಆಗಿ ಬರಲ್ಲ. ಈ ಕಬ್ಬಿನ ಸಹವಾಸವೇ ಸಾಕೆಂಬ ತೀರ್ಮಾನಕ್ಕೆ ಬಂದಿದ್ದರು. ರೈತರ ಈ
ಮಾತಿನಂತೆ ಬಾದಾಮಿ ತಾಲೂಕಿನಲ್ಲಿ ಆರಂಭಿಸಿದ ಯಾವ ಕಾರ್ಖಾನೆಗಳೂ ಜನಪರ-ರೈತಪರವಾಗಿ ಮುಂದುವರಿಯಲಿಲ್ಲ.
ಆರಂಭಗೊಂಡ ವೇಗದಷ್ಟೇ ಸ್ಥಗಿತಗೊಂಡಿದ್ದವು. ಆದರೆ ಕೇದಾರನಾಥ ಶುಗರ್ ಕೂಡ ತಮ್ಮ ಒಡೆತನಕ್ಕೆ ಪಡೆದ ನಿರಾಣಿ ಕೇವಲ
ಎರಡೇ ತಿಂಗಳಲ್ಲಿ ಸುಮಾರು 60 ಕೋಟಿ ಖರ್ಚು ಮಾಡಿ ಇಡೀ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಿದ್ದಾರೆ.

1200 ಜನ ಸ್ಥಳೀಯರಿಗೆ ಉದ್ಯೋಗ: ಸದ್ಯ ಕೆರಕಲಮಟ್ಟಿಯ ಕೇದಾರನಾಥ ಶುಗರ್ ಹಾಗೂ ಬಾದಾಮಿಯ ಬಾದಾಮಿ ಶುಗರ್ ಅನ್ನು ನಿರಾಣಿ ಉದ್ಯಮ ಸಮೂಹದಿಂದ ಪುನಃ ಆರಂಭಿಸಿದ್ದು, ಎರಡೂ ಕಾರ್ಖಾನೆಯಲ್ಲಿ ಒಟ್ಟು ಸುಮಾರು 1200 ಜನ ಸ್ಥಳೀಯರಿಗೆ ಉದ್ಯೋಗ ದೊರೆತಿದೆ. ಅಲ್ಲದೇ 200 ಜನ ವಾಹನ ಚಾಲಕರು (ಟ್ರ್ಯಾಕ್ಟರ್‌-ಇತರೆ ವಾಹನ), 5 ಸಾವಿರ ಜನ ಕಬ್ಬು ಕಡಿಯುವ ಕಾರ್ಮಿಕರು ಸೇರಿದಂತೆ ಒಟ್ಟಾರೆ ಸ್ಥಳೀಯ ಸುಮಾರು 12 ಸಾವಿರ ಜನರಿಗೆ ಉದ್ಯೋಗ ಲಭಿಸಿದೆ. ಮುಖ್ಯವಾಗಿ ಮುಧೋಳ, ಜಮಖಂಡಿ ಭಾಗದಲ್ಲಿ 20 ವರ್ಷಗಳ ಹಿಂದೆಯೇ ವಾಣಿಜ್ಯ ಬೆಳೆಯ ಮೂಲಕ ಆರ್ಥಿಕ ಸ್ಥಿತಿಗತಿ ಸುಧಾರಿಸಿಕೊಂಡ ರೈತರ ಮಾದರಿಯಲ್ಲೇ ಇನ್ನು ಬಾದಾಮಿ ತಾಲೂಕಿನ ರೈತರೂ ಆರ್ಥಿಕ ಸುಧಾರಣೆಗೆ ಅನುಕೂಲವಾಗಲಿದೆ ಎಂಬುದು ಇಲ್ಲಿನ ಪ್ರಜ್ಞಾವಂತರ ಆಶಯ.

– ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.