ಬ್ಯಾಡ್ಮಿಂಟನ್: ಪ್ರಣಯ್, ಆಕರ್ಷಿ ಗೆಲುವಿನ ಆರಂಭ
Team Udayavani, Jan 18, 2022, 11:30 PM IST
ಲಕ್ನೋ: ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಎಚ್.ಎಸ್. ಪ್ರಣಯ್, ಆಕರ್ಷಿ ಕಶ್ಯಪ್ ಗೆಲುವಿನ ಶುಭಾರಂಭ ಮಾಡಿದ್ದಾರೆ. ಆದರೆ ಸಮೀರ್ ವರ್ಮ ಗಾಯದ ಸಮಸ್ಯೆಯಿಂದ ಕೂಟದಿಂದ ಹೊರನಡೆದರು.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ನಲ್ಲಿ ಎಚ್.ಎಸ್. ಪ್ರಣಯ್ ಉಕ್ರೇನಿನ ಡ್ಯಾನಿಲೊ ಬೋಸ್ನಿಯುಕ್ ಅವರನ್ನು 21-14, 21-18 ನೇರ ಗೇಮ್ಗಳಿಂದ ಹಿಮ್ಮೆಟ್ಟಿಸಿದರು. ಸಮೀರ್ ವರ್ಮ ಐರ್ಲೆಂಡ್ನ ನಾತ್ ಎನ್ಗುಯೆನ್ ವಿರುದ್ಧ 7-2 ಹಿನ್ನಡೆಯಲ್ಲಿ ದ್ದಾಗ ಕಾಲಿನ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ಹಿಂದೆ ಸರಿದರು.
ಇದನ್ನೂ ಓದಿ:ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್ ನೀಡಿದ ದಬಾಂಗ್ ದಿಲ್ಲಿ
ಆಕರ್ಷಿ, ಅನುಪಮಾ ಮುನ್ನಡೆ
ವನಿತಾ ಸಿಂಗಲ್ಸ್ನಲ್ಲಿ ಆಕರ್ಷಿ ಕಶ್ಯಪ್ ಮತ್ತು ಅನುಪಮಾ ಉಪಾ ಧ್ಯಾಯ ಕೂಡ ದ್ವಿತೀಯ ಸುತ್ತು ತಲುಪಿದ್ದಾರೆ. ಇಬ್ಬರೂ ಭಾರತದ ಪ್ರತಿಸ್ಪರ್ಧಿಗಳ ವಿರುದ್ಧ ಜಯ ಸಾಧಿಸಿದರು. ಆಕರ್ಷಿ 21-13, 21-14 ನೇರ ಗೇಮ್ಗಳಿಂದ ಮುಗಾœ ಅಗ್ರೆ ಅವರನ್ನು ಮಣಿಸಿದರೆ. ಅನುಪಮಾ ಉಪಾಧ್ಯಾಯ ಅವರು ಋತುಪರ್ಣ ದಾಸ್ ವಿರುದ್ಧ 21-7, 21-10 ಅಂತರದ ಗೆಲುವು ದಾಖಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SS Rajamouli: ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್ನಲ್ಲಿ ಸುಳಿವು ಕೊಟ್ಟ ರಾಜಮೌಳಿ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!