ಬಾಲಬ್ರೂಯಿ ಅತಿಥಿ ಗೃಹ ಕೊರೊನಾ ವಾರ್ ರೂಂ
Team Udayavani, Mar 23, 2020, 3:07 AM IST
ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳ ಕೊರೊನಾ ಕ್ರಮಗಳ ಉಸ್ತುವಾರಿ ಕೇಂದ್ರವಾಗಿ (ಕೊರೊನಾ ವಾರ್ ರೂಂ) ಬೆಂಗಳೂರಿನ ಅರಮನೆ ರಸ್ತೆಯ ಬಾಲಬ್ರೂಯಿ ಅತಿಥಿ ಗೃಹವನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವ ವಹಿಸುವರು. ಟಾಸ್ಕ್ ಫೋರ್ಸ್ ಸಭೆಗಳು, ವಿಡಿಯೋ ಕಾನ್ಫರೆನ್ಸ್ಗಳು ಇಲ್ಲಿಯೇ ನಡೆಯುತ್ತವೆ. ಈ ಕೊರೊನಾ ವಾರ್ ರೂಂ 24/7 ಕಾರ್ಯ ನಿರ್ವಹಿಸಲಿದೆ.
51 ಪ್ರತ್ಯೇಕ ನಿಗಾ ಜಾರಿ ತಂಡಗಳು: ಬೆಂಗಳೂರಿನಲ್ಲಿ ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿರುವವರು ನಿಯಮ ಪಾಲಿಸದೇ ನಗರದೊಳಗೆ ಮುಕ್ತವಾಗಿ ಸುತ್ತಾಡುತ್ತಿದ್ದಾರೆಂಬ ದೂರುಗಳು ಆರೋಗ್ಯ ಸಹಾಯವಾಣಿಗೆ ಹೆಚ್ಚಳವಾಗಿವೆ. ಈ ಹಿನ್ನೆಲೆ ಅಂಬುಲೆನ್ಸ್ , ಒಬ್ಬ ಆಯುಷ್ ವೈದ್ಯ, ವೈರ್ಲೆಸ್ ಸೆಟ್ ಹೊಂದಿರುವ ಪೊಲೀಸ್ ಸಿಬ್ಬಂದಿ ಒಳಗೊಂಡಂತೆ 51ಪ್ರತ್ಯೇಕ ನಿಗಾ ಜಾರಿ ತಂಡಗಳನ್ನು ಸಿದ್ಧಪಡಿಸಲಾಗಿದೆ.
ಈ ತಂಡವು ದೂರುಗಳನ್ನು ಆಧರಿಸಿ ಸ್ಥಳಕ್ಕೆ ತೆರಳಿ ಪ್ರತ್ಯೇಕ ನಿಗಾ ಇರದೆ ತಿರುಗಾಡುತ್ತಿರುವ ವ್ಯಕ್ತಿಯನ್ನು ಹಿಡಿಯುತ್ತಾರೆ. ಬಳಿಕ ಹತ್ತಿರದ ಪೊಲೀಸ್ ಠಾಣೆಯಲ್ಲಿ ಆಯುಷ್ ವೈದ್ಯರು ಆ ವ್ಯಕ್ತಿ ವಿರುದ್ದ ದೂರು ನೀಡಿ, ಪ್ರತ್ಯೇಕ ನಿಗಾ ಘಟಕಕ್ಕೆ ಕರೆದೊಯ್ದು, 14 ದಿನ ಪೂರೈಸುವವರೆಗೂ ಇಡಲಾಗುತ್ತದೆ.
ಹೋಟೆಲ್ನಲ್ಲಿರುವವರು ಇಲಾಖೆ ನಿಗಾ ಕೇಂದ್ರಕ್ಕೆ: ದೇಶ-ವಿದೇಶಗಳಿಂದ ಬೆಂಗಳೂರಿಗೆ ಬಂದು ಸಂಚಾರ, ವಸತಿ ಸೌಲಭ್ಯವಿಲ್ಲದೆ, ಬೇರೆಡೆ ತೆರಳಲು ಸಾಧ್ಯವಾಗದೇ ನಗರದ ಹೋಟೆಲ್, ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ಪ್ರತ್ಯೇಕ ನಿಗಾದಲ್ಲಿರುವವರನ್ನು ಭಾನುವಾರದಿಂದಲೇ ಆರೋಗ್ಯ ಇಲಾಖೆ ನಿಯೋಜಿಸಿರುವ ಸಾರ್ವಜನಿಕ ಪ್ರತ್ಯೇಕ ನಿಗಾ ಕೇಂದ್ರಗಳಿಗೆ ಸ್ಥಳಾಂತರಿಸಲು ಕ್ರಮಕೊಳ್ಳಲಾಗಿದೆ.
ಇತರೆ ಪ್ರಮುಖ ಕ್ರಮಗಳು
* ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ದೇಶಿ ವಿಮಾನ ನಿಲ್ದಾಣಗಳಿಂದ (ಡೊಮೆಸ್ಟಿಕ್) ಬರುವ ಪ್ರಯಾಣಿಕರ ತಪಾಸಣೆ.
* ಸದ್ಯ ಕಾರ್ಯನಿರ್ವಹಿಸುತ್ತಿರುವ ಕೊರೊನಾ ಸೋಂಕು ಪ್ರಯೋಗಾಲಯಗಳ ಕಾರ್ಯ ಪ್ರಮಾಣ ಹೆಚ್ಚಳ.
* ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರ (ರೋಗ ಲಕ್ಷಣ ಇರುವ/ ಇಲ್ಲದಿರುವ) ತಪಾಸಣೆ.
* ಐಸಿಎಂಆರ್ ಹಾಗೂ ಎನ್ಐವಿ ಸಹಕಾರದಿಂದ ಸರ್ಕಾರಿ ಹಾಗೂ ಸರ್ಕಾರೇತರ ಪ್ರಯೋಗಾಲಯಗಳಿಗೆ ಕೊರೊನಾ ಪರೀಕ್ಷೆ ಪರವಾನಗಿ ಕೊಡಿಸಲು ಕ್ರಮ.
* ಕೋವಿಡ್ -19 ಟಾಸ್ಕ್ ಪೊರ್ಸ್ಗೆ ಸಹಾಯವಾಗುವ ನಿಟ್ಟಿನಲ್ಲಿ ಐಎಎಸ್ ಅಧಿಕಾರಿಗಳನ್ನು ಒಳಗೊಂಡ ತೀವ್ರ ನಿಗ್ರಹ ದಳ ರಚಿಸಲಾಗಿದೆ. ಆಯಾ ಜಿಲ್ಲಾ ತಜ್ಞ ವೈದ್ಯರ ಸಲಹೆ ಸೂಚನೆಯಡಿ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಕಾರ್ಯನಿರ್ವಹಣೆಗೆ ಸೂಚನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!