ಚುನಾವಣಾ ಮತ ಎಣಿಕೆ ಕರ್ತವ್ಯಕ್ಕೆ ತೆರಳುತ್ತಿದ್ದ ಪೇದೆ ಮೇಲೆ ಕರಡಿ ದಾಳಿ
Team Udayavani, Dec 31, 2020, 12:56 PM IST
ಚನ್ನಪಟ್ಟಣ: ಗ್ರಾಪಂ ಚುನಾವಣೆ ಮತ ಎಣಿಕೆಗೆ ತೆರಳುತ್ತಿದ್ದ ಗೃಹರಕ್ಷಕ ಪೇದೆಯೋರ್ವರ ಮೇಲೆ ಎರಡು ಕರಡಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ತಾಲೂಕಿನ ಯಲಚಿಪಾಳ್ಯದಲ್ಲಿ ಬುಧವಾರ ಮುಂಜಾನೆ 4ರ ಸುಮಾರಿನಲ್ಲಿ ನಡೆದಿದೆ.
ಕರಡಿ ದಾಳಿಗೆ ಒಳಗಾದ ಗೃಹ ರಕ್ಷಕ ಪೇದೆ ನಾಗರಾಜು ಎಂದು ಹೇಳಲಾಗಿದ್ದು, ಗ್ರಾಮದ ಸಿದ್ದಬೋವಿ ಎಂಬವರ ಪುತ್ರರು. ಕನಕಪುರಕ್ಕೆ ಚುನಾವಣಾ ಫಲಿತಾಂಶದ ಕರ್ತವ್ಯ ನಿಯೋಜನೆಗೆ ತೆರಳಲು ಸಿದ್ಧತೆ ಮಾಡಿಕೊಂಡು, ಮುಂಜಾನೆ 4 ರ
ಸುಮಾರಿನಲ್ಲಿ ನಡೆದು ತೆರಳುವಾಗ ಮನೆ ಪಕ್ಕದ ಬೇಲಿಯಲ್ಲಿದ್ದ ಜೋಡಿ ಕರಡಿಗಳು ಏಕಾಏಕಿ ದಾಳಿ ಮಾಡಿವೆ.
ತಲೆ ಹಾಗೂ ಮುಖಕ್ಕೆ ಭಾರೀ ಗಾಯವಾಗಿದ್ದು, ಕರಡಿಗಳ ದಾಳಿಯಿಂದ ರಕ್ಷಣೆಗಾಗಿ ಕೂಗಿದ ಆತ, ಸ್ಥಳದಲ್ಲೇ ಇದ್ದ ಮರದ ಕಟ್ಟಿಗೆಯಿಂದ ಕರಡಿಗಳನ್ನು ಓಡಿಸಲು ಯತ್ನ ಮಾಡಿದ್ದಾನೆ. ಈ ವೇಳೆ ಕರಡಿಗಳು ಸ್ವಲ್ಪ ದೂರ ಓಡಿದರೂ ಮತ್ತೆ ಹಿಂತಿರುಗಿ
ದಾಳಿ ಮಾಡಿ ಗಾಯಗೊಳಿಸಿವೆ. ಗಲಾಟೆ ಹೆಚ್ಚಾಗಿದ್ದರಿಂದ ಸ್ಥಳೀಯರು ಆಗಮಿಸುತ್ತಿದ್ದನ್ನು ಗಮನಿಸಿ ಕರಡಿಗಳು
ಓಡಿಹೋಗಿವೆ. ಗಂಭೀರವಾಗಿ ಗಾಯ ಗೊಂಡ ನಾಗರಾಜು ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ:ಮುಂದಿನ ಎರಡೂವರೆ ವರ್ಷ ನಾನೇ ಸಿಎಂ:’ಸಂಕ್ರಾಂತಿ ನಂತರದ ಬದಲಾವಣೆ’ ಹೇಳಿಕೆಗೆ ಬಿಎಸ್ ವೈ ಉತ್ತರ
ಈ ಭಾಗದಲ್ಲಿ ಕರಡಿಗಳ ಕಾಟ ವಿಪರೀತವಾಗಿದ್ದು, 2 ದಿನಗಳ ಹಿಂದೆ ಯಲಚಿಪಾಳ್ಯದ ಶನಿದೇವರ ದೇವಾಲಯದ ಅರ್ಚಕರೊಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಮಾರನೇಯ ದಿನ ಅದೇ ಕರಡಿಗಳ ಗುಂಪು ಈತನ ಮೇಲೆ ದಾಳಿ ಮಾಡಿರುವುದರಿಂದ, ಗ್ರಾಮದ ಜನತೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ, ಕರಡಿಗಳ ಹಾವಳಿ ನಿಯಂತ್ರಿಸಿ, ಗ್ರಾಮದ ಜನತೆಯ ಭಯ ಹೋಗಲಾಡಿಸಬೇಕೆಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
MUST WATCH
ಹೊಸ ಸೇರ್ಪಡೆ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?