

Team Udayavani, Jul 16, 2024, 11:58 PM IST
ಬೆಳ್ತಂಗಡಿ: ಚಾರ್ಮಾಡಿ-ಉಜಿರೆ ರಸ್ತೆಯಲ್ಲಿರುವ ದಿನಸಿ ಅಂಗಡಿ ಬಳಿ ಸೋಮವಾರ ಭಾರತ್ ಬ್ರಾಂಡ್ನ ಅಕ್ಕಿಯನ್ನು ಅಕ್ರಮ ಮಾರಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲೆ ಪರಿಶೀಲಿಸಿ ಅಕ್ಕಿಯನ್ನು ಹಿಂದಕ್ಕೆ ಮಾಲಕರಿಗೆ ಒಪ್ಪಿಸಿದ್ದಾರೆ.
ಹಾವೇರಿ ಮೂಲದ ಪಿ.ಕೆ. ಮಳಗಿ ಆಗ್ರೊಟೆಕ್ ಎಂಬ ಟ್ರಾನ್ಸ್ಪೊರ್ಟ್ನ ಲಾರಿಯಲ್ಲಿ 10 ಕೆ.ಜಿ.ಯ 1,000 ಮೂಟೆ ಅಕ್ಕಿ ಲಾರಿಯಲ್ಲಿತ್ತು. ಈ ವಿಚಾರವಾಗಿ ಸ್ಥಳೀಯರು ಪಡಿತರ ಅಕ್ಕಿ ಅಕ್ರಮ ಮಾರಾಟ ಎಂದು ದೂರು ನೀಡಿದ್ದರು.
ಈವಿಚಾರವಾಗಿ ತಹಶೀಲ್ದಾರ್ ಅಕ್ಕಿ ಲಾರಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಅಕ್ಕಿಯ ಬಗ್ಗೆ ವಿವರದ ಸರಕು ಸಾಗಾಟ ಬಿಲ್ ನೀಡಿದ ಬಳಿಕ ಲಾರಿಯನ್ನು ಮಾಲಕರಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
Ad
You seem to have an Ad Blocker on.
To continue reading, please turn it off or whitelist Udayavani.