ಬಿಜೆಪಿ ನಾಯಕನಿಂದ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ
Team Udayavani, May 21, 2019, 10:57 AM IST
ಬಾಗಲಕೋಟೆ: ಬಿಜೆಪಿ ಮುಖಂಡರೊಬ್ಬರು ತನ್ನದೇ ಪಕ್ಷದ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಸೋಮವಾರ ತಡರಾತ್ರಿ ಜಮಖಂಡಿಯಲ್ಲಿ ನಡೆದಿದೆ.
ಉಮೇಶ್ ಅಲಮೇಲಕರ್ ಎನ್ನುವ ಬಿಜೆಪಿ ಕಾರ್ಯಕರ್ತನ ಮೇಲೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀಧರ ಕೊಣ್ಣೂರ ಮತ್ತು ಬೆಂಬಲಿಗರು ರಾಡ್ ಮತ್ತು ಸೋಡಾ ಬಾಟಲ್ನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದಲಾಗಿ ಉಮೇಶ್ ಅಲಮೇಲಕರ್ ತಲೆಗೆ ಮತ್ತು ಎಡಗಣ್ಣಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಜಮಖಂಡಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.