ಕುಂದಗೋಳ : ಬನ್ನಿ ಮರಕ್ಕೆ ಆಡುಗಳು ಬಲಿಕೊಟ್ಟು ವಾಮಾಚಾರ
ಅಮವಾಸ್ಯೆಯ ರಾತ್ರಿ ಹೀಗೆ ಮಾಡಿದರೆ ಗೆಲುವು ಖಚಿತವೆ?
Team Udayavani, May 5, 2019, 2:29 PM IST
ಕುಂದಗೋಳ : ವಿಧಾನಸಭಾ ಉಪಚುನಾವಣೆ ಎದುರಾಗಿರುವ ಕುಂದಗೋಳಕ್ಷೇತ್ರ ವ್ಯಾಪ್ತಿಯ ಯರಗುಪ್ಪಿಯಲ್ಲಿ ಶನಿವಾರ ಅಮವಾಸ್ಯೆಯ ರಾತ್ರಿ ಹೊಲದಲ್ಲಿದ್ದ ಬನ್ನಿ ಮರವೊಂದಕ್ಕೆಆಡುಗಳೆರಡನ್ನು ಬಲಿಕೊಟ್ಟು ವಾಮಾಚಾರ ಮಾಡಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ಶಿವಳ್ಳಿ ಅವರ ಸ್ವಗ್ರಾಮ ಯರಗುಪ್ಪಿಯಲ್ಲಿ ಈ ಕೃತ್ಯ ಎಸಗಲಾಗಿದ್ದು, ಆಡುಗಳೆರಡನ್ನು ತಲೆಕೆಳಗಾಗಿ ಮರದ ಗೆಲ್ಲುಗಳಿಗೆ ಕಟ್ಟಿ ಬಲಿ ನೀಡಿ ವಿಕೃತಿ ತೋರಲಾಗಿದೆ.
ಚುನಾವಣೆ ಗೆಲ್ಲುವ ಸಲುವಾಗಿ ವಾಮಾಚಾರವಾಗಿ ಕುರಿಗಳನ್ನು ಬಲಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.