ಆರ್ಥಿಕ ಲೆಕ್ಕಾಚಾರದ ಆಸೆಯಲ್ಲಿ ಎಡವಿ ಮುಳುಗಿದ ಬ್ರಿಟನ್‌


Team Udayavani, Apr 26, 2020, 5:07 PM IST

ಆರ್ಥಿಕ ಲೆಕ್ಕಾಚಾರದ ಆಸೆಯಲ್ಲಿ ಎಡವಿ ಮುಳುಗಿದ ಬ್ರಿಟನ್‌

ಮಣಿಪಾಲ: ಜಗತ್ತಿನಾದ್ಯಂತ ರುದ್ರತಾಂಡವ ಮಾಡುತ್ತಿರುವ ಕೋವಿಡ್‌-19 ಬ್ರಿಟನ್‌ ದೇಶದಲ್ಲೂ ರಣಕೇಕೆ ಹಾಕಿದೆ. ಇಲ್ಲಿಯವರೆಗೆ 1.48 ಲಕ್ಷ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 20 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಜನವರಿಯಿಂದಲೇ ಲಾಕ್‌ಡೌನ್‌ ನಿಯಮದ ಮೊರೆಹೋದ ಯುಕೆ ಪ್ರಾಂತ್ಯ ಈ ಬಿಕ್ಕಟ್ಟಿನಿಂದ ಹೊರಬರಲು ಪರದಾಡುತ್ತಿದೆ. ಹಾಗಾದರೆ ಈ ಬ್ರಿಟನ್‌ ಎಡವಿದ್ದೆಲ್ಲಿ ? ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

ಜನವರಿ ತಿಂಗಳ ಪ್ರಾರಂಭದ ವೇಳೆಗೆ ಕೋವಿಡ್‌-19 ಕುರಿತಾದ ಕಳವಳದ ಸುದ್ದಿಗಳು ಬಿತ್ತರವಾಗಲು ಶುರುವಾಗಿತ್ತು. ಚೀನದಲ್ಲಿನ ಸಾವು-ನೋವಿನ ಸುದ್ದಿಗಳು ಕಿವಿಗೆ ಬಂದು ಅಪ್ಪಳಿಸಿದ್ದವು. ವಿಶ್ವದಲ್ಲಿ ಮಾರಣಾಂತಿಕ ಪಿಡುಗು ಕುರಿತಾದ ಚರ್ಚೆಗಳು ಪ್ರಾರಂಭಗೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವತ್ತ ಇತರೆ ದೇಶಗಳು ದಾಪುಗಾಲಿಡುತ್ತಿದ್ದರೆ, ಬ್ರಿಟನ್‌ ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ.

ಬ್ರೆಕ್ಸಿಟ್‌ ಒಕ್ಕೂಟದ ಮೋಜಿನ ಪಾರ್ಟಿ ಆಯೋಜನೆಯಲ್ಲಿ ಮುಳುಗಿದ್ದ ಬ್ರಿಟನ್‌, ದೇಶದ ಸ್ಥಿತಿಗತಿಗಳನ್ನು ಅವಲೋಕಿಸಿ, ಬಿಕ್ಕಟ್ಟಿನ ಪರಿಹಾರಕ್ಕಾಗಿ ರೂಪುರೇಷೆ ಮಾಡಲೇ ಇಲ್ಲ. ಸಾಮಾಜಿಕ ಆರೋಗ್ಯಕ್ಕಿಂತ ರಾಜಕೀಯ ಬೆಳವಣಿಗೆಯತ್ತ ಮನಸ್ಸು ಹರಿದಿತ್ತು. ಆಗ ಕೊಂಚ ವಿಳಂಬ ಮಾಡಿದ ಪರಿಣಾಮ ಈಗ ಸಮಸ್ಯೆ ಮುಗಿಲೆತ್ತರಕ್ಕೆ ಬೆಳೆದಿದೆ.

ಕೂಗಿ ಹೇಳಿದರೂ ಕೇಳಲಿಲ್ಲ
ಲಂಡನ್‌ನ ಇಂಪೀರಿಯಲ್‌ ಕಾಲೇಜಿನ ಜಾಗತಿಕ ಆರೋಗ್ಯ ಪ್ರಾಧ್ಯಾಪಕ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ರಾಯಭಾರಿ ಡೇವಿಡ್‌ ನಬರೋ ಹೇಳಿರುವ ಪ್ರಕಾರ ಎಲ್ಲ ದೇಶದ ಸರಕಾರಗಳಿಗೆ ಜನವರಿ ಅಂತ್ಯದ ವೇಳೆಗೆ ಕೋವಿಡ್‌-19 ಮುಂದಿನ ದಿನಗಳಲ್ಲಿ ಗಂಭೀರವಾದ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿತ್ತು. ಜತೆಗೆ ಜನವರಿ 30ರಂದು ಕೋವಿಡ್‌-19 ಅನ್ನು ಜಾಗತಿಕ ಪಿಡುಗು ಎಂದು ಘೋಷಿಸಿತು. ಆದರೆ ವಿಶ್ವಸಂಸ್ಥೆ ಎಚ್ಚರಿಕೆ ಕೂಗು ಬ್ರಿಟನ್‌ ಕಿವಿಗೆ ಕೇಳಲೇ ಇಲ್ಲ . ಪ್ರಧಾನಿ ಜಾನ್ಸನ್‌ ಬ್ರೆಕ್ಸಿಟ್‌ ಒಕ್ಕೂಟ ಮತ್ತು ಆರ್ಥಿಕತೆಯ ಕುರಿತಾದ ಚರ್ಚೆಗಳಲ್ಲಿ ಮುಳುಗಿದ್ದರು. ಮುಕ್ತ ವ್ಯಾಪಾರದತ್ತ ಒಲವು ತೋರುತ್ತಿದ್ದ ಅವರಿಗೆ ಸೋಂಕಿನ ತೀವ್ರತೆ ಅರಿವಾಗಲೇ ಇಲ್ಲ.

ನಿಯಮಗಳನ್ನು ಗೌರವಿಸಲೇ ಇಲ್ಲ
ಮಾರ್ಚ್‌ ಆರಂಭದ ವೇಳೆಗೆ ಅನೇಕ ದೇಶಗಳಲ್ಲಿ ಕೋವಿಡ್‌-19ನ ಭೀಕರತೆ ಅರಿವಾಗ ತೊಡಗಿತ್ತು. ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತ ದಕ್ಷಿಣ ಕೊರಿಯಾ, ಸಿಂಗಾಪುರ, ಜರ್ಮನಿ ಮುಂತಾದ ಕೆಲ ರಾಷ್ಟ್ರಗಳು ಸೋಂಕು ನಿಯಂತ್ರಿಸಲು ತೊಡಗಿದವು. ಆದರೆ ಆ ವೇಳೆಗಾಗಲೇ ಅಮೆರಿಕ, ಇಟಲಿ, ಸ್ಪೇನ್‌, ದೇಶಗಳಲ್ಲಿ ಸೋಂಕಿನ ಆರ್ಭಟ ಮುಗಿಲು ಮಟ್ಟಿತ್ತು. ಇದನ್ನೂ ಕಂಡೂ ಬ್ರಿಟನ್‌ನಲ್ಲಿ ಯಾವುದೇ ಪರಿಣಾಮಕಾರಿ ನಿಯಮಗಳನ್ನು ಜಾರಿ ಮಾಡಲೇ ಇಲ್ಲ. ಲಾಕ್‌ಡೌನ್‌ ನಿಯಮಗಳನ್ನು ಜನರು ಪಾಲಿಸುವುದಿಲ್ಲ ಎಂದು ತನ್ನಷ್ಟಕ್ಕೆ ತಾನೇ ನಿರ್ಧರಿಸಿದ ಸರಕಾರವು, ಸಾಮೂಹಿಕ ಕೂಟಗಳನ್ನು , ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲೇ ಇಲ್ಲ. ಆ ಮೂಲಕ ಸಾಮಾಜಿಕ ಅಂತರ, ಲಾಕ್‌ಡೌನ್‌ ಮುಂತಾದ ನಿಯಮಗಳನ್ನು ಗಾಳಿಗೆ ತೂರಿದ ಬ್ರಿಟನ್‌ ಮಾರ್ಚ್‌ ಮಧ್ಯಾಂತರದಲ್ಲಿ ಲಾಕ್‌ಡೌನ್‌ ನಿರ್ಧಾರ ತಳೆಯಿತು. ಸೋಂಕು ತಡೆಯುವಲ್ಲಿ ಬ್ರಿಟನ್‌ ಟ್ರಯಲ್‌ ಆ್ಯಂಡ್‌ ಎರರ್‌ ಪದ್ಧತಿ ಅನುಸರಿಸಿತು. ಜಾಗತಿಕವಾಗಿ ಆಗುತ್ತಿರುವ ಬೆಳವಣಿಗೆಗಳಿಂದ ಕಲಿತು, ತನ್ನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಲೋಚಿಸಲಿಲ್ಲ. ಬದಲಾಗಿ ತನ್ನದೇ ರೀತಿಯಲ್ಲಿ ಬಿಕ್ಕಟ್ಟು ಪರಿಹರಿಸಲು ಹೋಗಿ, ಜಾಗತಿಕ ಮಟ್ಟದ ಪರಿಣಿತರ ಸಲಹೆಗಳನ್ನು ತಳ್ಳಿ ಹಾಕಿತು. ಆ ಪರಿಣಾಮ ಈಗ ಅನುಭವಿಸುವಂತಾಗಿದೆ.

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.