ಸಂಘಟನಾ ಚತುರ,ಸಾರ್ವಕಾಲಿಕ ಜಾತ್ಯತೀತ ನಾಯಕ ಬಿಎಸ್‌ವೈ


Team Udayavani, Jul 27, 2019, 5:01 AM IST

BSY-RSS

ಬೆಂಗಳೂರು: ನಿರಂತರ ಜನ ಸಂಪರ್ಕ, ಜನಪರ ಹೋರಾಟ ಮತ್ತು ರಾಜ್ಯ ಸಂಚಾರದ ಮೂಲಕ ಬಿ.ಎಸ್‌.ಯಡಿಯೂರಪ್ಪ ಅವರು ಸಾರ್ವಕಾಲಿಕ ಜನನಾಯಕರಾಗಿ ಬೆಳೆದಿದ್ದಾರೆ. ಕಠಿನ ಪರಿಶ್ರಮ, ಸಂಘಟನ ಚತುರತೆ ಜತೆಗೆ ಸರ್ವಸ್ಪರ್ಶಿ ಜಾತ್ಯತೀತ ವ್ಯಕ್ತಿತ್ವವೇ ಅವರನ್ನು ಉನ್ನತ ಸ್ಥಾನಕ್ಕೇರುವಂತೆ ಮಾಡಿದಂತಿದೆ.

ರಾಜ್ಯ ಬಿಜೆಪಿಯ ಪ್ರಬಲ ನಾಯಕರಾಗಿರುವ ಬಿ.ಎಸ್‌. ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಎರಡನೇ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸುವ ಮೂಲಕ ದಕ್ಷಿಣ ಭಾರತದಲ್ಲಿ ಎರಡನೇ ಬಾರಿಗೆ ಕಮಲ ಪಕ್ಷವನ್ನು ಅರಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಯಶಸ್ಸಿಗೆ ಬಿಜೆಪಿಗಿರುವ ಜನಪ್ರಿಯತೆ ಜತೆಗೆ ಯಡಿಯೂರಪ್ಪ ಅವರ ವೈಯಕ್ತಿಕ ವರ್ಚಸ್ಸು ಮತ್ತು ಸರ್ವ ಜನಾಂಗದವರೊಂದಿಗಿನ ಸೌಹಾರ್ದ ಸಂಬಂಧವೂ ಕಾರಣ ಎನ್ನುತ್ತದೆ ಆಪ್ತ ವಲಯ.

ರಾಜ್ಯದಲ್ಲಿ ಪ್ರಭಾವಿ ನಾಯಕರಾಗಿ ರೂಪುಗೊಂಡವರ ಹಿಂದೆ ಅವರು ಬಯಸಲಿ, ಬಯಸದಿರಲಿ ಅವರು ಪ್ರತಿನಿಧಿಸುವ ಸಮುದಾಯದ ಜನರು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸುತ್ತಾ ಬಂದಿರುವುದನ್ನು ಕಾಣಬಹುದು. ಇದಕ್ಕೆ ಯಡಿಯೂರಪ್ಪ ಅವರೂ ಹೊರತಲ್ಲ. ಅವರು ಪ್ರತಿನಿಧಿಸುವ ಲಿಂಗಾಯತ ಸಮುದಾಯದ ದೊಡ್ಡ ವರ್ಗ ಅವರ ಬೆನ್ನಿಗೆ ಬೆಂಬಲವಾಗಿ ನಿಂತಿದೆ. ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಸೇರಿ ಚುನಾವಣೆ ಎದುರಿಸಿ ದಾಗಲೂ ಇದು ಸಾಬೀತಾಗಿದೆ.

ಜಾತ್ಯತೀತ ವ್ಯಕ್ತಿತ್ವ
ಯಡಿಯೂರಪ್ಪ ಅವರ ಬಗ್ಗೆ ಅನ್ಯ ಸಮುದಾಯದ ಬೆಂಬಲ ಇಲ್ಲವೆಂದಲ್ಲ. ನಾನಾ ವರ್ಗದ ಜನರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಅವರ ಮನವಿಗೆ ಸ್ಪಂದಿಸುತ್ತ ಬಂದಿರುವುದರಿಂದ ಅವರನ್ನು ಒಂದು ಸಮುದಾಯಕ್ಕೆ ಸೀಮಿತವಾಗಿ ನೋಡುವಸ್ಥಿತಿ ಇಲ್ಲ. 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಹುತೇಕ ಎಲ್ಲ ಪ್ರಮುಖ ಮತ್ತು ಹಿಂದುಳಿದ ಸಮುದಾಯಗಳ ಮಠ ಮಾನ್ಯಗಳಿಗೂ ಸಹಾಯಧನ ನೀಡಿದ್ದನ್ನು ಇಂದಿಗೂ ಸ್ಮರಿಸಲಾಗುತ್ತದೆ.

ಕಟ್ಟಾ ಹಿಂದುತ್ವವಾದಿಯಲ್ಲ
ಹಿಂದುತ್ವ ಪ್ರತಿಪಾದನೆಯೇ ಬಿಜೆಪಿಯ ಮುಖ್ಯ ಸಿದ್ಧಾಂತ. ಆ ಮೂಲಕವೇ ದೇಶದಲ್ಲಿ ಉಚ್ಛ್ರಾಯ ಸ್ಥಿತಿಗೆ ಏರಿದೆ. ಹಾಗಿದ್ದರೂ ಯಡಿಯೂರಪ್ಪ ಅವರು ಈವರೆಗೆ ಕಟ್ಟರ್‌ ಹಿಂದುತ್ವವಾದಿಯಂತೆ ಕಂಡಿಲ್ಲ.ಹಿಂದುತ್ವ ವಿಚಾರ ಬಂದಾಗ ಅದರ ಪರವಾಗಿದ್ದರೂ ಪ್ರಖರ ಹಿಂದುತ್ವ ಪ್ರತಿಪಾದಕರಂತಿಲ್ಲ. ಘಟನಾವಳಿ ಆಧರಿಸಿ ಸಂದರ್ಭ, ಸನ್ನಿವೇಶಕ್ಕೆ ಪೂರಕವಾಗಿ ಹಿಂದುತ್ವ ಪ್ರತಿಪಾದಿಸುವುದಕ್ಕೆ ಯಡಿಯೂರಪ್ಪ ಸೀಮಿತರಾಗಿದ್ದಾರೆ. ಅಲ್ಪಸಂಖ್ಯಾಕ ಸಮುದಾಯದವರು ಸಹ ಅವರನ್ನು ವಿರೋಧಿಸಿದ್ದು ವಿರಳ.

ಬಿಜೆಪಿಯ ಅದ್ವಿತೀಯ ನಾಯಕ‌

ರಾಜ್ಯ ಬಿಜೆಪಿಯಲ್ಲಿ ಸದ್ಯದ ಮಟ್ಟಿಗೆ ಬಿಜೆಪಿಯವರನ್ನು ಮೀರಿಸುವ ಮತ್ತೂಬ್ಬ ಜನನಾಯಕರು ಇದ್ದಂ ತಿಲ್ಲ. ತಮ್ಮ ಒಂದು ಕರೆಯ ಮೂಲಕವೇ ಹೋರಾಟದ ದಿಕ್ಕು ದೆಸೆ ಬದಲಾಯಿಸುವಷ್ಟರ ಮಟ್ಟಿಗೆ ಪ್ರಭಾವಿ ನಾಯಕರಾಗಿರುವ ಅವರ ಸಾಮರ್ಥಯದ ಬಗ್ಗೆ ಬಿಜೆಪಿಗೂ ಸ್ಪಷ್ಟ ಅರಿವಿದೆ. ಹಾಗಾಗಿಯೇ ವರಿಷ್ಠರು ಸಹ ಯಡಿಯೂರಪ್ಪನವರ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದಲೇ ವರ್ತಿಸುತ್ತಾ ಬಂದಿರುವುದನ್ನು ಕಾಣಬಹುದು. ಅಧಿಕಾರ ನಿರ್ವಹಣೆಗೆ ವಯೋಮಿತಿ ನಿಗದಿಪಡಿಸಿದ್ದರೂ ಯಡಿಯೂರಪ್ಪ ಅವರಿಗೆ ವಿನಾಯಿತಿ ನೀಡಿದಂತಿದೆ. ಜತೆಗೆ ಏಕಕಾಲಕ್ಕೆ ಎರಡು ಪ್ರಮುಖ ಹುದ್ದೆ ನಿರ್ವ ಹಿಸಬಾರದೆಂಬ ನಿಯಮವಿದ್ದರೂ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷ ಸ್ಥಾನದ ಜತೆಗೆ ವಿಧಾನಸಭೆ ವಿಪಕ್ಷರಾಗಿಯೂ ಮುಂದುವರಿದಿದ್ದರು. ರಾಜ್ಯ ಬಿಜೆಪಿಯಲ್ಲಿ ಸದ್ಯಕ್ಕೆ ಯಡಿ ಯೂರಪ್ಪ ಅವರಂಥ ಜನನಾಯಕರಿಲ್ಲ. ಅವರ ಸಂಘಟನ ಶಕ್ತಿ, ಸಾಮರ್ಥಯದ ಬಗ್ಗೆ ಪಕ್ಷಕ್ಕೂ ಅರಿವಿದೆ. ಒಂದೆಡೆ ಕುಳಿತು ಕಾರ್ಯತಂತ್ರ ರೂಪಿಸಿ ಅದನ್ನು ಜಾರಿಗೊಳಿಸಿ ಅದರಲ್ಲಿ ಯಶಸ್ಸು ಸಾಧಿಸುವ ಪ್ರವೃತ್ತಿ ಯಡಿಯೂರಪ್ಪ ಅವರಿಗೆ ಹೆಚ್ಚು ಒಗ್ಗುವುದಿಲ್ಲ. ಭಿನ್ನಾಭಿಪ್ರಾಯವುಳ್ಳ ನಾಯಕರನ್ನು ಒಟ್ಟಿಗೆ ಸೇರಿಸಿ ಮನವೊಲಿಸಿ ಒಗ್ಗಟ್ಟಾಗಿ ಮುಂದುವರಿಯುವಂತೆ ಮಾಡುವ ಗುರಿ ನೀಡಿದರೆ ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತಾರೆ. ಅವರ ಸಂಘಟನ ಶಕ್ತಿ, ಪ್ರವಾಸ, ಜನ ಸಂಪರ್ಕ ಕಾರಣಕ್ಕೆ ಇಂದಿಗೂ ಅವರಿಗೆ ಪಕ್ಷದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಅಧಿಕಾರದಲ್ಲಿದ್ದಾಗ ಸರ್ವ ಸಮುದಾಯದವರ ಕಲ್ಯಾಣಕ್ಕೆ ಕೊಡುಗೆ ನೀಡುವ ಮೂಲಕ ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಗಟ್ಟಿಗೊಳಿಸಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರ ಸಂಘಟನ ಶಕ್ತಿಯನ್ನು ಪಕ್ಷ ಮುಂದೆಯೂ ಪರಿಣಾಮಕಾರಿಯಾಗಿ ಬಳಸಿಕೊಂಡು ರಾಜ್ಯದಲ್ಲಿ ಇನ್ನಷ್ಟು ಗಟ್ಟಿಯಾಗಿ ಪಕ್ಷವನ್ನು ಸಂಘಟಿಸಲು ಒತ್ತು ನೀಡಲಾಗಿದೆ ಎಂದು ಹೇಳಿದರು.

ನಿರಂತರ ಪ್ರವಾಸ ಆರೋಗ್ಯದ ಗುಟ್ಟು

ಯಡಿಯೂರಪ್ಪ ಅವರು ವಿಪಕ್ಷ ಸ್ಥಾನದಲ್ಲಿದ್ದಾಗಲೆಲ್ಲ ನಾನು ಜನರ ಬಳಿಗೆ ಹೋಗಿ ಬೀದಿಗಿಳಿದು ಹೋರಾಟ ನಡೆಸುತ್ತೇನೆ ಎಂಬ ಮಾತು ನಿರಂತರವಾಗಿ ಕೇಳಿಬರುತ್ತಿತ್ತು. ಅಂದರೆ ವಿಪಕ್ಷದಲ್ಲೇ ಸುದೀರ್ಘ‌ ಕಾಲ ಕಾರ್ಯ ನಿರ್ವಹಿಸಿರುವ ಯಡಿಯೂರಪ್ಪ ಅವರಿಗೆ ಇಂದಿಗೂ ರಾಜ್ಯ ಪ್ರವಾಸ ಮತ್ತು ಹೋರಾಟಕ್ಕೆ ಮೊದಲ ಆದ್ಯತೆ. ಯಡಿಯೂರಪ್ಪ ಅವರಷ್ಟು ರಾಜ್ಯವನ್ನು ಸುತ್ತಿದ ಮತ್ತೂಬ್ಬ ನಾಯಕರಿಲ್ಲ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಕಳೆದ ಲೋಕಸಭಾ ಚುನಾವಣೆ ಮತದಾನಕ್ಕೂ ಮುನ್ನ ‘ಉದಯವಾಣಿ’ ಕಚೇರಿಯಲ್ಲಿ ಸಂವಾದದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು ತಮ್ಮ ಆರೋಗ್ಯ ಗುಟ್ಟು ಬಿಚ್ಚಿಟ್ಟರು. ನಿರಂತರ ಪ್ರವಾಸವೇ ನನ್ನ ಆರೋಗ್ಯದ ಗುಟ್ಟು. ನಾನು ಒಂದೆಡೆ ಸುಮ್ಮನೆ ಕುಳಿತರೆ ಆರೋಗ್ಯ ಕೆಡುತ್ತದೆ. ಪ್ರವಾಸ ಮಾಡುತ್ತಿದ್ದರೆ ಯಾವುದೇ ಬಳಲಿಕೆ ಕಾಣದು ಎಂದು ಹೇಳಿದ್ದರು.
-ಎಂ.ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.