ಅನರ್ಹ ಶಾಸಕರ ಬೆನ್ನಿಗೆ ನಿಂತ ಬಿಎಸ್ ವೈ
Team Udayavani, Jul 25, 2019, 11:29 PM IST
ಬೆಂಗಳೂರು : ಸ್ಪೀಕರ್ ರಿಂದ ಅನರ್ಹಗೊಂಡ ಮೂವರು ಶಾಸಕರಿಗೆ ಬಿ ಎಸ್ ಯಡಿಯೂರಪ್ಪ ಅಭಯ ನೀಡಿದ್ದಾರೆ.
ಗುರುವಾರ ಅನರ್ಹಗೊಂಡ ಮೂವರು ಶಾಸಕರಾದ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರಾಗಿರುವ ಆರ್. ಶಂಕರ್, ರಮೇಶ್ ಜಾರಕಿಹೊಳಿ ಮತ್ತು ಮಹೆಶ್ ಕುಮಟಳ್ಳಿ ಅವರ ಶಾಸಕತ್ವವನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಬೆನ್ನಿಗೆ ನಿಂತ ಬಿ ಎಸ್ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಎದೆಗುಂದದಿರಿ ನಿಮ್ಮ ಸಹಾಯಕ್ಕೆ ನಾನಿದ್ದೇನೆ ಎಂದು ಯಡಿಯೂರಪ್ಪ ಅನರ್ಹರಿಗೆ ಧೈರ್ಯ ತುಂಬುವ ಮಾಡಿದ್ದಾರೆ.
ಅನರ್ಹತೆಗೆ ಸಂಬಂಧಿಸಿ ಕಾನೂನು ಸಲಹೆಗಾರರಿಂದ ಸಲಹೆಗಳನ್ನು ಪಡೆದುಕೊಂಡಿದ್ದಾರೆ