ಬಜೆಟ್‌ ಘೋಷಣೆಗಳು ಮತ್ತು ಶಿಕ್ಷಣ


Team Udayavani, Mar 10, 2020, 7:00 AM IST

ಬಜೆಟ್‌ ಘೋಷಣೆಗಳು ಮತ್ತು ಶಿಕ್ಷಣ

ಸರಿ ತಪ್ಪು ಎನ್ನುವುದು ಒಂದು ನಿಲುವು. ಆದರೆ ವಿಚಾರಗಳೆಲ್ಲವೂ ಎಷ್ಟು ಮೊತ್ತದ ಹಣ ಘೋಷಿಸಿದ್ದಾರೆ ಎಂಬ ನೆಲೆಯಲ್ಲೇ ಬಜೆಟ್‌ ಅಭಿವೃದ್ಧಿಪರ, ದೂರದರ್ಶಿತ್ವವುಳ್ಳದ್ದೆಂದು ನಿರ್ಣಯಿಸುವಲ್ಲಿಯವರೆಗೆ ಸಾಗುತ್ತಾ ನಾವೆಲ್ಲ ಬೌದ್ಧಿಕ ನಿತ್ರಾಣಿಗಳಾಗುತ್ತೇವೆ. ಹೌದು; ಹಣ ಬೇಕೇ ಬೇಕು. ಹಣವೇ ಅಭಿವೃದ್ಧಿಗೆ ಕಾರಣ, ಹಣದ ಕಾರಣದಿಂದ ಜೀವನ ಮಟ್ಟ ಸುಧಾರಣೆ ಎಂಬುವುದನ್ನು ಒಪ್ಪಿಕೊಳ್ಳೋಣ. ಅಭಿವೃದ್ಧಿಯ ವಿಚಾರ ಕೇವಲ ಹೊಟ್ಟೆ ತುಂಬಿಸುವಲ್ಲಿಗೆ ಮುಗಿದು ಹೋಗುವುದಿಲ್ಲವೆಂಬ ಸಾಮಾನ್ಯ ಜ್ಞಾನದೊಂದಿಗೆ ಸಮಾಜ ಕಟ್ಟುವ ಚಿಂತನೆಗಳು ನಮ್ಮಲ್ಲಿ ಇರಬೇಕಾಗುತ್ತದೆ.

ಬಜೆಟನ್ನು ಕೋಟಿ ಕೋಟಿ ರೂ.ಗಳ ಲೆಕ್ಕಚಾರದಲ್ಲಿ, ಅನುದಾನದ ರೂಪದಲ್ಲಿ ನೋಡುತ್ತಾ, ತೂಗುತ್ತಾ ಹೋಗುವುದು ಮುಂದೊಂದು ದಿನದ ಅಪಾಯದ ಸೂಚನೆಯೂ ಆಗಿದೆಯೆಂಬುದನ್ನು ಮನಗಾಣಬೇಕಾಗಿದೆ. ಅಪಾಯವೆಂದರೆ ಮುಗಿದು ಹೋಗುವ ಪ್ರಾಕೃತಿಕ ಸಂಪತ್ತಿನೊಂದಿಗೆ ಉಂಟಾಗುವ ಪಾರಿಸಾರಿಕ ಅಸಮತೋಲನದೊಂದಿಗೆ ಕೌಟುಂಬಿಕ, ಸಾಮಾಜಿಕ ಸವಾಲುಗಳು ದೇಶವನ್ನು ದುರ್ಬಲಗೊಳಿಸೀತು. ಈ ಕಾರಣದಿಂದಲೇ ಶಿಕ್ಷಣ ಉಳಿದೆಲ್ಲ ಅಭಿವೃದ್ಧಿಗೆ, ವಿಕಾಸಕ್ಕೆ ದಿಕ್ಕು ತೋರುವ, ಅಡಿಗಲ್ಲು ಆಗುವ ವಿಚಾರ. ಇಲ್ಲಿ ಶಿಕ್ಷಣ ವೆಂದರೆ ಪರಿಣಾಮವೇ ಹೊರತು ಪರಿಮಾಣವಲ್ಲ.

ಈ ಬಾರಿಯ ಬಜೆಟಿನಲ್ಲಿ ಶಿಕ್ಷಣಕ್ಕಾಗಿ 29,768 ಕೋಟಿ ರೂಗಳನ್ನು ಮೀಸಲಿಟ್ಟಿದೆ. ಬಹಳಷ್ಟು ದೊಡ್ಡ ಮೊತ್ತವೇನೂ ಅಲ್ಲ, ಆದರೆ ಕಡಿಮೆ ಅನ್ನುವಂತೆಯೂ ಇಲ್ಲ (ಒಟ್ಟು ಬಜೆಟಿನ 11 ಶೇಕಡಾ). ಶಿಕ್ಷಣವೆಂಬ ವಿಷಯ ಬಂದಾಗ ಶಿಕ್ಷಕರ ಸಂಬಳ, ಕಟ್ಟಡಗಳು, ಮೂಲಭೂತ ಸೌಲಭ್ಯಗಳೆಲ್ಲವೂ ಅದರಲ್ಲಿ ಒಳಗೊಂಡಿರುತ್ತವೆ. ಅದೆಲ್ಲ ಮುಗಿಯುವ ಸಂಗತಿಗಳಲ್ಲ. ನಿರಂತರವಾಗಿ ಪೂರೈಕೆಯಾಗಬೇಕಾದ ಸಂಗತಿಗಳು. ಅದರೊಂದಿಗೆ ಉಚಿತ ವಿತರಣೆಗಳು ಹಾಗೂ ಪ್ರೇರಣೆಯ ರೂಪದಲ್ಲಿ ಘೋಷಿಸಲ್ಪಡುವ ಬಹುಮಾನಗಳೂ (ವಸ್ತುರೂಪದ ಮತ್ತು ಹಣದ ರೂಪದಲ್ಲಿ) ಸೇರುತ್ತವೆ. ಇವೆಲ್ಲ ಶಿಕ್ಷಣದ ಸುಧಾರಣೆಗಳಲ್ಲ. ಶಿಕ್ಷಣವನ್ನು ಸುಧಾರಿಸಲಿರುವ ಪೂರಕ ಅಂಶಗಳು. ಉದಾಹರಣೆಗೆ ಲ್ಯಾಪ್‌ಟಾÂಪ್‌ ನೀಡಿಕೆ, ಜಿಲ್ಲೆಗೂ, ರಾಜ್ಯಕ್ಕೂ ಫ‌ಸ್ಟ್‌ ಬಂದವರಿಗೆ ಲಕ್ಷ ರೂ.ಗಳ ಬಹುಮಾನ ನೀಡುವ ಘೋಷಣೆ ಅಂಕ ಪಡೆಯುವುದಕ್ಕೆ ಸ್ಫರ್ಧಾತ್ಮಕತೆಯನ್ನು ತಂದೀತೆ ಹೊರತು ಕಲಿಕೆಯನ್ನು ಗುಣಮಟ್ಟವನ್ನು ಎಷ್ಟರಮಟ್ಟಿಗೆ ಬದಲಾಯಿಸೀತು? ಅಂತಿಮವಾಗಿ ಶಿಕ್ಷಣದ ಮೂಲಕ ನಿರೀಕ್ಷಿಸುವುದು ಮತ್ತು ಸಾಧಿಸಲ್ಪಡಬೇಕಾದ್ದು “ಸುಖೀ’ ಕಲ್ಪನೆಯ ಸಾಮಾಜಿಕ ಆಶಯವೇ ಹೊರತು ಲ್ಯಾಪ್‌ಟಾÂಪ್‌ ಆಗಲಿ, ಲಕ್ಷ ಲಕ್ಷ ರೂ.ಗಳಾಗಲಿ ಪರಿಣಾಮಕತೆಯ ಪೂರ್ಣ ಭಾಗವಾಗುವುದಿಲ್ಲ.

ಶಿಕ್ಷಕರ ಸಮಸ್ಯೆ ನೀಗಿಸಲು ಮೊಬೈಲ್‌ ಆ್ಯಪ್‌ ಅಳವಡಿಕೆಯ ಬಗ್ಗೆ ಘೋಷಣೆಯಿದೆ. ಶಿಕ್ಷಕರ ಸಮಸ್ಯೆಗೆ ಪರಿಹಾರ ಸಿಗದೆ ಅವರು ಹೇಗೆ ಉತ್ತಮ ಶಿಕ್ಷಣ ಕೊಡಬಲ್ಲರು ಎಂಬ ಚಿಂತನೆಯ ಫ‌ಲ ಅದು. ಆದರೆ ಪ್ರಶ್ನೆ ಏನೆಂದರೆ ವಿವಿಧ ಸ್ತರಗಳ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ತಂತ್ರಜ್ಞಾನಗಳ ಅಳವಡಿಕೆ, ಸಿಬ್ಬಂದಿಗಳು, ಸೌಲಭ್ಯಗಳು ಇದ್ದರೂ ಈವರೆಗೆ ಶಿಕ್ಷಕರ ಸಮಸ್ಯೆ ಸಮಸ್ಯೆ ಯಾಗಿಯೇ ಉಳಿದಿರುವುದು ಮತ್ತು ಬೆಳೆಯುತ್ತಿರುವುದು, ಪರಿಹಾರ ಸಿಗದೆ ವಿಳಂಬವಾಗುವುದು ಇತ್ಯಾದಿಗಳೆಲ್ಲ ಏಕೆ ಬೃಹದಾಕಾರವಾಗಿದೆ? ಮೂಲಕ್ಕೆ ಚಿಕಿತ್ಸೆ ಕೊಡದೆ ಯಾವುದೇ ಬದಲಾವಣೆಗಳು ದೂರಗಾಮಿಯಾಗಿ ಪರಿಸ್ಥಿತಿಯನ್ನು ಸುಧಾರಿಸೀತು ಎಂದು ನಂಬುವುದಾದರೂ ಹೇಗೆ?
ಇನ್ನೊಂದು ವಿಷಯವೇನೆಂದರೆ ಪಬ್ಲಿಕ್‌ ಶಾಲೆಗಳು, ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಹಾಗೂ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗಗಳು ಈ ಬಗ್ಗೆ ಘೋಷಿಸಿದ ಹಣ ಮತ್ತು ಯೋಜನೆಗಳು. ಜೊತೆಗೆ ಮಾಧ್ಯಮದ ವಿಚಾರ ಬಂದಾಗ ಇನ್ನೂ ಮಾತೃಭಾಷೆ, ಕನ್ನಡ ಮಾಧ್ಯಮ, ಭಾಷೆ ಕಲಿಕೆ, ಕಲಿಕೆಯ ಗುಣಮಟ್ಟ ಎಂಬುವುದಕ್ಕಿಂತಲೂ ಶಿಕ್ಷಣ ಸುಧಾರಣೆ ಎನ್ನುವುದು ಆಂಗ್ಲ ನೆಲೆಯ ವ್ಯಾಪಾರಿ ಚಿಂತನೆಗಳಲ್ಲೇ ಶಿಕ್ಷಣ ಸುಧಾರಣೆ ಕಳೆದು ಹೋಗುತ್ತದೆ.

ಬೇರೆ ಬೇರೆ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳ ವರ್ಗೀಕರಣ, ಕಲಿಕೆಯ ಹೆಸರಿನಲ್ಲಿ ಸಾಮಾಜಿಕ ವರ್ಗೀಕರಣ ಈ ಮೂಲಕ ಅಸಮತೋಲನದ ಪೋಷಣೆಯನ್ನು ಸಮಗ್ರ ಶಿಕ್ಷಣ ಸುಧಾರಣೆಯೊಂದಿಗೆ ಸಮೀಕರಿಸಲಾಗುತ್ತಿದೆ. ಸಮಗ್ರತೆಯ ಮತ್ತು ಗುಣಾತ್ಮಕದ ಪ್ರಶ್ನೆ ಬಂದಾಗ ಬಜೆಟಿನ ಅನುದಾನಗಳು ವ್ಯವಸ್ಥೆಯ ಸುಧಾರಣೆಯಲ್ಲಿ ಅಜ್ಞಾನವನ್ನೇ ಹೊಸ ಸಾಧ್ಯತೆಗಳೆನ್ನಲಾಗುತ್ತಿದೆ. ಸಾಮಾಜಿಕ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಬೇಕಾದ್ದು ಮಾನವ ಶಕ್ತಿ, ವೈಚಾರಿಕ ಚಿಂತನೆಗಳ ಗಟ್ಟಿ ಮಿದುಳಿನ ಶಕ್ತಿಯೇ ಹೊರತು ವಸ್ತುರೂಪದ ಸಂಗ್ರಹವಲ್ಲ.

ಭಾಷಿಕ ನೆಲೆಯಲ್ಲಿ “ಕನ್ನಡ ಶಾಲೆಗಳು’ ಎಂಬ ಧ್ವನಿ ಬಲವಾಗಬೇಕು. ಸರಕಾರಿ, ಅನುದಾನಿತ ಖಾಸಗಿ, ಅನುದಾನ ರಹಿತ ಖಾಸಗಿ ಕನ್ನಡ ಶಾಲೆಗಳು ಎಂಬ ಭಿನ್ನತೆ ಕಾಣಬಾರದು. ಒಂದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾಧ್ಯಮ ಅಥವಾ ರಾಜ್ಯ ಭಾಷೆಯನ್ನು ಹೊರತು ಪಡಿಸಿ ಇನ್ನೊಂದು ಮಾಧ್ಯಮದ ಶಿಕ್ಷಣ ನೀಡಲಾಗುವುದೆಂದರೆ ಅದು ಅಭಿವೃದ್ಧಿ ಆಗುವುದು ಹೇಗೆ? ಸಂಖ್ಯಾತ್ಮಕ ದೃಷ್ಟಿಯಲ್ಲಿ ಶಾಲೆಗಳನ್ನು ಹೆಚ್ಚಿಸುವುದು ಬೇಡಿಕೆಯನ್ನು ಪೂರೈಸಿದಂತಾಗುತ್ತದೆಯೇ ಹೊರತು ಶಿಕ್ಷಣದ ನೀತಿಯಾ ಗುವುದಿಲ್ಲ. ಇರುವ ಶಾಲೆಗಳಲ್ಲಿ ಸಂಖ್ಯಾತ್ಮಕವಾಗಿ ತರಗತಿವಾರು ಶಿಕ್ಷಕರ ಲೆಕ್ಕಾಚಾರ ಬರಬೇಕು. ಶಿಕ್ಷಕರು ಶಾಲೆಯಲ್ಲೇ ಇದ್ದು ಮಕ್ಕಳಿಗೆ ಲಭ್ಯವಾಗುವಂತಾಗಬೇಕು.

ಉತ್ತಮವಾಗಿ ಭಾಷೆಯನ್ನು ಕಲಿಯುವ ಹಾಗೂ ಕಲಿಸುವ ಚಟುವಟಿಕೆಗಳು, ಬೋಧನಾ ವಿಧಾನ (ಮಾಧ್ಯಮದ ಸಂಗತಿಯಲ್ಲ) ಹಾಗೂ ಇತರ ವಿಷಯಗಳನ್ನೂ ಕಲಿಯುವಂತೆ ಮಾಡುವ “ಮಗು ಸ್ನೇಹಿ’ ಕಲಿಕಾ ವಾತಾವರಣವಿರಬೇಕು. ಮಕ್ಕಳ ಬಜೆಟ್‌ ಮಂಡಿಸಿದ ವಿಚಾರ ವೇನೋ ಒಳ್ಳೆಯದೆ. ಆದರೆ ಅದು ಒಳಗಿನ ತಿರುಳಿನ ಸಂಗತಿಗಳಿಗೆ ಇಳಿಯದೇ ಹೋದರೆ ಬಜೆಟ್‌ ಹುರುಳಿಲ್ಲದ, ಕೇವಲ ಆವರಣದ ಸಂಗತಿಯಾಗಿಯೇ ಉಳಿಯುತ್ತದೆ.

ಬಹಳ ಮುಖ್ಯವಾಗಿ ಬಜೆಟ್‌ನಲ್ಲಿ ಉಲ್ಲೇಖೀಸಿದ ಒಂದು ಸಂಗತಿಯೆಂದರೆ “ನೋ ಬ್ಯಾಗ್‌ ಡೇ’ (ಸಂಭ್ರಮದ ಶನಿವಾರ). ತಿಂಗಳಿನಲ್ಲಿ ಎರಡು ಶನಿವಾರ ಇನ್ನು ಮುಂದೆ ಮಕ್ಕಳು ಶಾಲೆಗೆ ಬ್ಯಾಗ್‌ ಕೊಂಡುಹೋಗಬೇಕಾದ್ದಿಲ್ಲ. ಆ ದಿನಗಳಲ್ಲಿ ಪಾಠದ ಬದಲಾಗಿ ಚಟುವಟಿಕೆಗಳ ಮೂಲಕ ದೇಶದ ಉತ್ತಮ ನಾಗರಿಕರಾಗಲು ಅವಶ್ಯವಿರುವ ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ಜೊತೆಗೆ ಖಾಸಗಿ ಶಾಲೆಗಳು ಇದನ್ನು ಮಾಡುತ್ತಿದ್ದು ಅದಕ್ಕೆ ಸಮವಾಗಿ ಉತ್ತಮ ಶಿಕ್ಷಣ ನೀಡುವು ದಕ್ಕಾಗಿ ಈ ವ್ಯವಸ್ಥೆಯೆಂದು ಬಿಂಬಿಸಲಾಗಿದೆ. ಹಾಗಿದ್ದರೆ ಈವರೆಗಿನ (ಮುಂದೆಯೂ) ಪಾಠಗಳು ಅದನ್ನು ಪ್ರತಿಬಿಂಬಿಸಲಿಲ್ಲವೆಂದು ಅರ್ಥವೇ? “ಸಂಭ್ರಮದ ಶನಿವಾರ’ ಯೋಜನೆಯು ಶಿಕ್ಷಣದ ಆಶಯ ಉದ್ದೇಶಗಳನ್ನು ಈಡೇರಿಸಲಾಗದ ಪಠ್ಯಕ್ರಮ, ಬೋಧನಾ ಕ್ರಮ, ಪರೀಕ್ಷೆ, ಫ‌ಲಿತಾಂಶ ವ್ಯವಸ್ಥೆ ಈಗಿನದ್ದು ಎಂದು ಹೇಳಿದಂತವಲ್ಲವೇ? ಒಟ್ಟಾರೆಯಾಗಿ ನೋ ಬ್ಯಾಗ್‌ ಡೇ ಇನ್ನಷ್ಟು ಅಧ್ವಾನಗಳನ್ನು ಮತ್ತು ಕಲಿಕಾ ಒತ್ತಡವನ್ನು ಸೃಷ್ಟಿಸುವ ಅಪಾಯವೇ ಹೆಚ್ಚು. ಕಲಿಕಾ ಹೊರೆಯನ್ನು ಕಡಿಮೆಗೊಳಿಸಲಾರದೆ, ನಿತ್ಯದ ಪಾಠಾವಧಿಯಲ್ಲಿ ಮತ್ತು ಪಾಠದೊಂದಿಗೆ ಖುಷಿ ನೀಡುವ ಕಲಿಕಾ ವ್ಯವಸ್ಥೆ ಮತ್ತು ಉತ್ತಮ ನಾಗರಿಕರಾಗಲು ಅವಶ್ಯವಿರುವ ಅಂಶಗಳಲ್ಲಿ ಅರಿವು, ಜಾಗೃತಿ ಮೂಡಿಸುವ ಶಿಕ್ಷಣ ವ್ಯವಸ್ಥೆ ಜಾರಿಗೆ ತರದೇ ಹೋದಲ್ಲಿ “ಸಂಭ್ರಮದ ಶನಿವಾರ’ ಇಡೀ ತಿಂಗಳ ಕಲಿಕಾ ಸಂಭ್ರಮವನ್ನು ಕಸಿದುಕೊಂಡೀತು. ಹಾಗಾಗಿ ಕೋಟಿ ಕೋಟಿ ರೂ.ಗಳ ಅನುದಾನದ ಮೌಲ್ಯಕ್ಕಿಂತಲೂ ಅಧಿಕ ಮೌಲ್ಯದ ಗುಣಾತ್ಮಕ ಶಿಕ್ಷಣ ವ್ಯವಸ್ಥೆಯ ಬಗೆಗಿನ ಚಿಂತನೆಗಳ ಬಜೆಟ್‌ ರೂಪುಗೊಳ್ಳಬೇಕು. ಇಲ್ಲವಾದರೆ ಶಿಕ್ಷಣ ಸುಧಾರಣೆ ಘೋಷಣೆಗಳಲ್ಲೆ ಕಳೆದುಹೋಗಿ ಎಂದಿನಂತೆಯೇ ಅಂಕ, ಫ‌ಸ್ಟ್‌-ಸೆಕೆಂಡ್‌, ಹೈಯೆಸ್ಟ್‌, ಸ್ಪರ್ಧೆ, ಬಹುಮಾನ ಇತ್ಯಾದಿಗಳ ಸುತ್ತಲೇ ಗಿರಕಿ ಹೊಡೆಯುವ ಗುಣಮಟ್ಟದ ದಾಖಲೆ ಅಷ್ಟೆ.

– ರಾಮಕೃಷ್ಣ ಭಟ್‌ ಚೊಕ್ಕಾಡಿ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.