ಕಟ್ಟಲು ಬೇಕು ಹತ್ತು ವರ್ಷ ಕೆಡವಲು ಒಂದೇ ದಿವಸ!


Team Udayavani, May 11, 2020, 3:09 PM IST

ಕಟ್ಟಲು ಬೇಕು ಹತ್ತು ವರ್ಷ ಕೆಡವಲು ಒಂದೇ ದಿವಸ!

ಸಾಂದರ್ಭಿಕ ಚಿತ್ರ

ಒಳ್ಳೆಯ ವಸ್ತು ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ, 15 ನಿಮಿಷ ಕಾದು ನಿಲ್ಲಲು ಜನ ತಯಾರಿರುವುದಿಲ್ಲ. ಬ್ಯುಸಿನೆಸ್‌ ಆರಂಭಿಸಿದವರಿಗೆ ಇದು ಗೊತ್ತಿರಬೇಕು…

ಅದು ಹೋಟೆಲ್‌ ಇರಬಹುದು, ಬೇಕರಿ ಆಗಿರಬಹುದು ಅಥವಾ ಪ್ರಾವಿಶನ್‌ ಸ್ಟೋರ್‌, ಹೇರ್‌ ಸಲೂನ್‌, ಸ್ಟುಡಿಯೋ… ಹೀಗೆ ಯಾವುದೇ ಒಂದು ಉದ್ಯಮ ಆರಂಭವಾದಾಗ, ಗ್ರಾಹಕರಿಗೂ ಕುತೂಹಲ ಉಂಟಾಗುತ್ತದೆ. ಈ ಹೊಸ ಅಂಗಡಿ ಹೇಗಿರಬಹುದು, ಇಲ್ಲಿ ವ್ಯವಹಾರ ಮಾಡಿದರೆ ಏನೆಲ್ಲಾ ಅನುಕೂಲ ಇದೆ ಎಂದೆಲ್ಲಾ ಜನ ಖಂಡಿತ ಯೋಚನೆ ಮಾಡುತ್ತಾರೆ. ಯಾವುದೇ ಕೆಲಸ, ಗ್ರಾಹಕರು ಹೇಳಿದ ಕೆಲವೇ ಕ್ಷಣದಲ್ಲಿ ಆಗಿಬಿಟ್ಟರೆ- ಈ ಶಾಪ್‌ಲಿ ಸರ್ವಿಸ್‌ ತುಂಬಾ ಚೆನ್ನಾಗಿದೆ, ಎರಡೇ ನಿಮಿಷದಲ್ಲಿ ಸಪ್ಲೈ ಆಗುತ್ತೆ ಎಂದು ಮೆಚ್ಚುಗೆಯ ಮಾತಾಡುತ್ತಾರೆ. ಇಷ್ಟಾದರೆ, ಮೌತ್‌ ಪಬ್ಲಿಸಿಟಿ ಸಿಕ್ಕಿತು, ಆ ಮೂಲಕ ಲಾಭದ ಹಾದಿ ತೆರೆದುಕೊಂಡಿತು, ಎಂದೇ ಅರ್ಥ. ಸಂತೋಷ ಇರುವ ಕಡೆಯೇ ದುಃಖವೂ  ಇರುತ್ತದೆ. ಹಾಗೆಯೇ, ಗೆಲುವು ಎಂಬುದರಿಂದ ಕೆಲವೇ ಹೆಜ್ಜೆ ದೂರದಲ್ಲೇ ಸೋಲು ಎಂಬುದೂ ಅಡಗಿ ಕುಳಿತಿರುತ್ತದೆ. ಬ್ಯುಸಿನೆಸ್‌ಗೆ ಹೊರಟವರು, ದುಡ್ಡು ಮಾಡಬೇಕು ಅಂದುಕೊಂಡವರು ಇದನ್ನು ನೆನಪಲ್ಲಿ ಇಟ್ಟುಕೊಳ್ಳಬೇಕು. ಕೆಲಸ ಬೇಗ ಆಗುತ್ತೆ ಎಂದು ಗೊತ್ತಾದರೆ, ಗ್ರಾಹಕರೂ ಜಾಸ್ತಿ ಆಗುತ್ತಾರೆ. ಆ ಮೂಲಕ ಸಂಪಾದನೆ ಕೂಡಾ ಹೆಚ್ಚುತ್ತದೆ. ಅದು ಸಹಜ ಕೂಡ.

ಎಷ್ಟೋ ಜನ ಮೈ ಮರೆಯುವುದೇ ಈ ಸಮಯದಲ್ಲಿ. ಜನ ನಮ್ಮ ಅಂಗಡಿಯನ್ನು ಇಷ್ಟ ಪಡುತ್ತಿದ್ದಾರೆ ಅಂತ ಗೊತ್ತಾದ ನಂತರ, ಎಷ್ಟೋ ಜನರಿಗೆ ಹೆಗಲ ಮೇಲೆ ತಲೆ ನಿಲ್ಲುವುದಿಲ್ಲ. ನಮ್ಮ ಶಾಪ್‌ಲಿ ಉತ್ತಮ ಗುಣಮಟ್ಟದ ವಸ್ತು ಕೊಡ್ತಾ ಇದ್ದೇವೆ. ಹಾಗಾಗಿ, ಜನ ಬಂದೇ ಬರ್ತಾರೆ ಎಂದು ಭಾವಿಸುತ್ತಾರೆ. ಜೊತೆಗೆ, ಒಳ್ಳೆಯ ವಸ್ತು ಬೇಕಾದರೆ ಸ್ವಲ್ಪ ಹೊತ್ತು ಕಾಯಲಿ ಎಂದೂ ಯೋಚಿಸುತ್ತಾರೆ. ಸೋಲು ಎಂಬುದು ಒಳಮನೆಗೆ ಬಂದು ಕೂರುವುದೇ ಆಗ! ಕೇಳಿದ ತಕ್ಷಣ ಸಪ್ಲೈ ಆಗುತ್ತದೆ ಅಂದಾಗ ಸಹಜವಾಗಿಯೇ ರಶ್‌ ಕೂಡ ಜಾಸ್ತಿ ಆಗುತ್ತದೆ. ಉದ್ಯಮ ಆರಂಭಿಸಿದವನಿಗೆ ಇದು ಗೊತ್ತಿರಬೇಕು. ಒಳ್ಳೆಯ ವಸ್ತು ಸಿಗುತ್ತದೆ ಎಂಬ ಕಾರಣಕ್ಕೆ 15 ನಿಮಿಷ ಕಾದು ನಿಲ್ಲಲು ಜನ ತಯಾರಿರುವುದಿಲ್ಲ. ರಶ್‌ ಹೆಚ್ಚಾಗುತ್ತಿದೆ ಎಂದು ಗೊತ್ತಾದ ತಕ್ಷಣ, ಕೆಲಸಗಾರರನ್ನು ಹೆಚ್ಚಿಸಿಕೊಳ್ಳುವ, ರಶ್‌ ತಗ್ಗಿಸಲು 3-4 ಕೌಂಟರ್‌ ಮಾಡುವ ಕೆಲಸ ಆಗಬೇಕು. ಹೋಟೆಲ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಕ್ಯೂ ಹೆಚ್ಚುತ್ತಿದೆ ಅನಿಸಿದರೆ, ಕಾಯಲಿ ಬಿಡಿ ಅನ್ನಬಾರದು. ಮಧ್ಯಾಹ್ನ 12.30 ರಿಂದ 1 ಗಂಟೆಯ ಒಳಗೆ ಬಂದರೆ, ಒಂದು ಐಸ್‌ ಕ್ರೀಮ್/ ಬಾಳೆಹಣ್ಣು ಉಚಿತ ಎಂದೋ ನಿಯಮ ಮಾಡಬೇಕು. ಆಗ, ಎರಡು ಗಂಟೆಗೆ ಬರುತ್ತಿದ್ದವರು ಒಂದು ಗಂಟೆಗೆ, ಮೂರು ಗಂಟೆಗೆ ಬರುತ್ತಿದ್ದವರು ಎರಡು ಗಂಟೆಗೆ ಬರಲು ಶುರು ಮಾಡುತ್ತಾರೆ! ರಶ್‌ ತಂತಾನೇ ಕಡಿಮೆ ಆಗುತ್ತದೆ. ಲಾಭದ ಹಣ ಹೆಚ್ಚುತ್ತಾ ಹೋಗುತ್ತದೆ.

ಇಂಥವೇ ಜಾಣತನದ ಟ್ರಿಕ್‌ ಗಳನ್ನು ಮಾಡಿದರೆ, ಆಯಾ ಉದ್ಯಮಕ್ಕೆ ಅನುಗುಣವಾಗಿ ಮಾಡಿದರೆ ಮಾತ್ರ, ವ್ಯವಹಾರದಲ್ಲಿ ದೀರ್ಘ‌ ಅವಧಿಯವರೆಗೆ ಗೆಲುವು ಕಾಣಬಹುದು. ಇಲ್ಲವಾದರೆ, ಏರಿದಷ್ಟೇ ಬೇಗನೆ ಕೆಳಕ್ಕೂ ಇಳಿಯಬಹುದು!

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.