ಹೊತ್ತಿ ಉರಿಯುತ್ತಿದೆ ಅಮೆರಿಕ ಸಮಾನತೆ-ಸಹೋದರತ್ವ ಮುಖ್ಯ


ಸಂಪಾದಕೀಯ, Jun 2, 2020, 6:30 AM IST

ಹೊತ್ತಿ ಉರಿಯುತ್ತಿದೆ ಅಮೆರಿಕ ಸಮಾನತೆ-ಸಹೋದರತ್ವ ಮುಖ್ಯ

ಜಾಗತಿಕ ಸೂಪರ್‌ಪವರ್‌ ಎಂದು ಕರೆಸಿಕೊಳ್ಳುವ ಅಮೆರಿಕದ ದೌರ್ಬಲ್ಯ, ಹುಳುಕುಗಳೂ ಕೆಲ ತಿಂಗಳಿಂದ ಜಗತ್ತಿನೆದುರು ಅನಾವರಣವಾಗುತ್ತಲೇ ಇವೆ. ಕೊರೊನಾದಿಂದ ಅತಿ ಹೆಚ್ಚು ಹಾನಿ ಅನುಭವಿಸಿ, ಅದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿರುವಾಗಲೇ ಈಗ ವರ್ಣ ತಾರತಮ್ಯದ-ಜನಾಂಗೀಯ ದ್ವೇಷದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಆರಂಭವಾಗಿ, ಹಿಂಸಾರೂಪ ಪಡೆದಿದೆ. 140ಕ್ಕೂ ಅಧಿಕ ನಗರಗಳಲ್ಲಿ ಪ್ರತಿಭಟನೆ ನಡೆದಿದ್ದು, ಅದೀಗ ಶ್ವೇತಭವನದವರೆಗೂ ತಲುಪಿದೆ.

ಮೇ 25ರಂದು ಜಾರ್ಜ್‌ ಫ್ಲಾಯ್ಡ ಎಂಬ ಕಪ್ಪುವರ್ಣೀಯ ವ್ಯಕ್ತಿಯನ್ನು ಬಂಧಿಸುವ ನೆಪದಲ್ಲಿ ಅಮೆರಿಕನ್‌ ಪೊಲೀಸರು ಅವರ ಸಾವಿಗೆ ಕಾರಣವಾದರು. ಜಾರ್ಜ್‌ ಫ್ಲಾಯ್ಡ ಅಂಗಡಿಯೊಂದರಲ್ಲಿ ನಕಲಿ ನೋಟು ಕೊಟ್ಟಿದ್ದಾರೆ ಎಂಬ ದೂರನ್ನು ಆಧರಿಸಿ ಪೊಲೀಸರು ಅವರನ್ನು ಬಂಧಿಸಲು ಮುಂದಾದರು. ಪೊಲೀಸ್‌ ಅಧಿಕಾರಿಯೊಬ್ಬರು ಜಾರ್ಜ್‌ ಕುತ್ತಿಗೆಯ ಮೇಲೆ 8 ನಿಮಿಷದವರೆಗೆ ಕುಳಿತು ಅವರು ಉಸಿರುಗಟ್ಟಿ ಸಾಯುವಂತೆ ಮಾಡಿದರು. ಆ ವ್ಯಕ್ತಿ ತನಗೆ ಉಸಿರಾಡಲಾಗುತ್ತಿಲ್ಲ ಎಂದು ಅಂಗಲಾಚಿದರೂ ಪೊಲೀಸ್‌ ಅಧಿಕಾರಿ ಜಾರ್ಜ್‌ ನರಳಾಟಕ್ಕೆ ಕಿವಿಗೊಡಲಿಲ್ಲ. ಜಾರ್ಜ್‌ ಅಂಥದ್ದೇನು ಮಹಾಪರಾಧ ಮಾಡಿದರೆಂದು ಪೊಲೀಸರು ಹಾಗೆ ಮಾಡಿದರು ಎಂಬ ಆಕ್ರೋಶ ಎದುರಾಗುತ್ತಿದೆ. ಈಗ ಆದಾಗ್ಯೂ, ಈಗ ತಪ್ಪೆಸಗಿದ ಪೊಲೀಸ್‌ ಅಧಿಕಾರಿಯ ಮೇಲೆ ಕೊಲೆ ಪ್ರಕರಣ ದಾಖಲಾಗಿದೆಯಾದರೂ ಜನರ ಕೋಪವೇನೂ ಇದರಿಂದ ಶಾಂತವಾಗುವಂತೆ ಕಾಣುತ್ತಿಲ್ಲ. ಏಕೆಂದರೆ, ಅಮೆರಿಕನ್‌ ಪೊಲೀಸರು ಈ ರೀತಿ ಕಪ್ಪುವರ್ಣೀಯರ ವಿರುದ್ಧ ಕ್ರೌರ್ಯ ಮೆರೆಯುತ್ತಿರುವುದು (ಕೊಲೆ ಮಾಡುತ್ತಿರುವುದು) ಇದೇ ಮೊದಲೇನೂ ಅಲ್ಲ. ಪೊಲೀಸರು ತಪ್ಪು ಮಾಡಿದರೂ, ವಿಚಾರಣೆ ನಡೆದು ಹೆಚ್ಚೆಂದರೆ ಕೇವಲ ಅಮಾನತಿನಂಥ ಚಿಕ್ಕ ಶಿಕ್ಷೆ ಅನುಭವಿಸಿ ಪಾರಾದದ್ದೇ ಅಧಿಕ. ಈ ವಿಚಾರವಾಗಿ ಅಮೆರಿಕದ ಮಾನವ ಹಕ್ಕು ಸಂಘಟನೆಗಳು, ಮಾಧ್ಯಮಗಳು ದಶಕಗಳಿಂದ ಧ್ವನಿಯೆತ್ತುತ್ತಲೇ ಬಂದರೂ ಪೊಲೀಸರ ದೌರ್ಜನ್ಯಗಳು ನಿಲ್ಲುತ್ತಲೇ ಇಲ್ಲ. ಈ ಕಾರಣಕ್ಕಾಗಿಯೇ, ಕೆಲ ವರ್ಷಗಳಿಂದ ಆ ದೇಶದಲ್ಲಿ “ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಆಂದೋಲನ ನಡೆಯುತ್ತಿದೆ.

ಈ ರೀತಿಯ ಘಟನೆಗಳು ನಡೆದಾಗಲೆಲ್ಲ, ಕಪ್ಪುವರ್ಣೀಯರಿಂದ ಅಮೆರಿಕದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ, ಅವರು ಪೊಲೀಸರಿಗೆ ಸಹಕರಿಸುವುದಿಲ್ಲ ಎಂಬೆಲ್ಲ ವಾದಗಳು ಒಂದು ವಲಯದಿಂದ ಎದುರಾಗುತ್ತವೆ. ಆದರೆ ತಪ್ಪು ಮಾಡಿದರೆ ಶಿಕ್ಷಿಸಲು ನ್ಯಾಯಾಲಯಗಳು ಇರುತ್ತವೆ. ಯಾವ ಕಾರಣಕ್ಕೂ ಪೊಲೀಸರ ವರ್ತನೆ ಸಮರ್ಥನೀಯವಲ್ಲವೇ ಅಲ್ಲ. ದುರಂತವೆಂದರೆ, ಪ್ರತಿ ಬಾರಿಯೂ ಪೊಲೀಸರ‌ ಇಂಥ ಕೃತ್ಯ ವಿರೋಧಿಸಿ ಪ್ರತಿಭಟನೆಗಳು ಆರಂಭವಾದಾಗಲೆಲ್ಲ ಇದರ ಲಾಭ ಪಡೆಯುವ ಕೆಲ ದುಷ್ಟರು ಅಂಗಡಿ-ಮಾಲ್‌ಗಳನ್ನು ಲೂಟಿ ಮಾಡಲಾರಂಭಿಸುತ್ತಾರೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಾರೆ. ಇದರಿಂದಾಗಿ, ಮುಖ್ಯ ಚರ್ಚೆಯೇ ಮೂಲೆಗುಂಪಾಗಿ, ಲೂಟಿ ಮಾಡುವವರ ವಿಷಯವೇ ಮುನ್ನೆಲೆಗೆ ಬಂದುಬಿಡುತ್ತದೆ. ಈಗಲೂ ಇದೇ ಆಗುತ್ತಿರುವುದು. ಜಾರ್ಜ್‌ ಫ್ಲಾಯ್ಡ ಸಾವಿಗೆ ನ್ಯಾಯ ಸಿಗಬೇಕೆಂದು ಆರಂಭವಾದ ಶಾಂತಿಯುತ ಪ್ರತಿಭಟನೆಯ ನಡುವೆಯೇ, ಅರಾಜಕತೆ, ಹಿಂಸಾಚಾರ, ಕಳ್ಳತನಗಳು ಅಧಿಕವಾಗಿದ್ದು, ಮಾಧ್ಯಮಗಳಲ್ಲಿ ಈ ಚರ್ಚೆಯೇ ಜೋರಾಗಿದೆ. ಎಲ್ಲಿಯವರೆಗೂ ಅಮೆರಿಕದ ಪೊಲೀಸ್‌ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ಆಗುವುದಿಲ್ಲವೋ ಪೊಲೀಸರಲ್ಲಿ ಸಮಾನತೆ-ಸಹೋದರತ್ವದ ಗುಣ ಬೆಳೆಯುವುದಿಲ್ಲವೋ ಅಲ್ಲಿಯವರೆಗೂ ಇಂಥ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ದುರಂತವೆಂದರೆ, ಈಗ ಅಮೆರಿಕದಲ್ಲಿ ಕೋವಿಡ್-19 ಹಾವಳಿಯೂ ಅಪಾಯಕಾರಿ ಮಟ್ಟ ಮುಟ್ಟಿದ್ದು, ಈ ಪ್ರತಿಭಟನೆಗಳಿಂದಾಗಿ ಸೋಂಕಿತರ ಸಂಖ್ಯೆ ನಿಸ್ಸಂಶಯವಾಗಿಯೂ ಅಧಿಕವಾಗಲಿದೆ.

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mob

OTT; ಅಸಭ್ಯ ಒಟಿಟಿ ನಿಯಂತ್ರಣ: ಶಾಶ್ವತ ಕಡಿವಾಣ ಅಗತ್ಯ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.