ಹೊತ್ತಿ ಉರಿದ ಮತ್ತೊಂದು ಬಸ್; 40 ಮಂದಿ ಪಾರು
Team Udayavani, May 11, 2019, 11:41 AM IST
ತುಮಕೂರು: ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುತ್ತಿದ್ದ ಬಸ್ಸೊಂದು ಚಲಿಸುತ್ತಿದ್ದಾಗಲೆ ಬೆಂಕಿಗೆ ಆಹುತಿಯಾದ ಬೆನ್ನಲ್ಲೇ ಇನ್ನೊಂದು ಬಸ್ ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿಗೆ ಆಹುತಿಯಾಗಿದೆ.
ಬೆಳಗ್ಗೆ 5 ಗಂಟೆಯ ವೇಳೆಗೆ ಯಾದಗಿರಿಯ ಸುರಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದೆ.
ಪ್ರಯಾಣಿಕರೊಬ್ಬರು ಬೆಂಕಿಯನ್ನು ಕಂಡು ತಕ್ಷಣ ಬಸ್ನೊಳಗೆ ಪ್ರಯಾಣಿಸುತ್ತಿದ್ದ 40 ಮಂದಿ ಸಹಪ್ರಯಾಣಿಕರನ್ನುಎಬ್ಬಿಸಿದ್ದಾರೆ.ಚಾಲಕ ತಕ್ಷಣ ಬಸ್ ನಿಲ್ಲಿಸಿದ್ದು, ಎಲ್ಲರೂ ಕೆಳಗಿಳಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಗ್ನಿ ಶಾಮಕ ದಳದ ಸಿಬಂದಿಗಳು ವಿಷಯ ತಿಳಿದು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು.