ಬೆಂಗಳೂರಿಗೆ ಸಂಚರಿಸಲು ಬಸ್‌ಗಳ ಹಿಂದೇಟು

ಕೋವಿಡ್‌ ಭೀತಿ - ಪ್ರಯಾಣಿಕರ ಸಂಖ್ಯೆ ಇಳಿಮುಖ

Team Udayavani, Jul 10, 2020, 5:50 AM IST

ಬೆಂಗಳೂರಿಗೆ ಸಂಚರಿಸಲು ಬಸ್‌ಗಳ ಹಿಂದೇಟು

ಸಾಂದರ್ಭಿಕ ಚಿತ್ರ

ಕುಂದಾಪುರ: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರುತ್ತಿದ್ದು, ಇದರಿಂದ ಕರಾವಳಿಯಿಂದ ಬೆಂಗಳೂರಿಗೆ ಸಂಚರಿಸಲು ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಹಿಂದೇಟು ಹಾಕುತ್ತಿದೆ. ಸರಕಾರಿ ಬಸ್‌ಗಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಇಳಿಮುಖಗೊಂಡಿದೆ.

ಲಾಕ್‌ಡೌನ್‌ಗಿಂತ ಮೊದಲು ಕುಂದಾಪುರ, ಬೈಂದೂರು ಕಡೆಯಿಂದ 50-60 ಖಾಸಗಿ ಬಸ್‌ಗಳು ಪ್ರತಿ ನಿತ್ಯ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದವು. ಲಾಕ್‌ಡೌನ್‌ ಸಡಿಲಿಕೆ ಆದ ಆರಂಭದಲ್ಲಿ 10-12 ಖಾಸಗಿ ಬಸ್‌ಗಳು ಆದರೆ ಈಗ ದಿನಕ್ಕೆ 4-5 ಬಸ್‌ಗಳಷ್ಟೇ ಸಂಚರಿಸುತ್ತಿದೆ. ಇದು ಕುಂದಾಪುರ ಮಾತ್ರವಲ್ಲ ಉಡುಪಿ, ಕಾರ್ಕಳ, ಮಂಗಳೂರಿನಿಂದ ಹೊರಡುವ ಬಸ್‌ಗಳ ಸ್ಥಿತಿಯೂ ಬಹುತೇಕ ಹೀಗೆ ಇದೆ. ಕೆಲ ಸಂಸ್ಥೆಗಳು ಸಂಪೂರ್ಣ ಸ್ಥಗಿತಗೊಳಿಸಿದ್ದರೆ, ಮತ್ತೆ ಕೆಲವು ಸಂಸೆ§ಗಳ ಒಂದೆರಡು ಬಸ್‌ಗಳಷ್ಟೇ ಸಂಚರಿಸುತ್ತಿದೆ. ಮತ್ತೆ ಕೆಲವು ಇದುವರೆಗೂ ಸಂಚಾರವನ್ನೇ ಆರಂಭಿಸಿಲ್ಲ.

ಕೆಎಸ್‌ಆರ್‌ಟಿಸಿಯೂ ಇಳಿಕೆ
ಖಾಸಗಿ ಮಾತ್ರವಲ್ಲ ಬೆಂಗಳೂರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆಯೂ ಕಡಿಮೆಯಾಗಿದೆ. ಮೊದಲು ಕುಂದಾಪುರದಿಂದ ರಾಜಧಾನಿಗೆ ನಿತ್ಯ ರಾತ್ರಿ 10 ಬಸ್‌ಗಳು ಸಂಚರಿಸುತ್ತಿದ್ದವು. ಲಾಕ್‌ಡೌನ್‌ ಸಡಿಲಿಕೆಯಾದ ಅನಂತರ 5 -6 ಬಸ್‌ ಸಂಚರಿಸುತ್ತಿದ್ದರೆ ಈಗ ಕೇವಲ 3 ಬಸ್‌ಗಳು ಮಾತ್ರ ಸಂಚರಿಸುತ್ತಿವೆ.

ಯಾಕೆ?
ಬೆಂಗಳೂರಿನಲ್ಲಿ ಕೋವಿಡ್‌ ಜಾಸ್ತಿಯಾಗುತ್ತಿದ್ದು, ಇದರಿಂದ ಅಲ್ಲಿಗೆ ಹೋಗಲು ಚಾಲಕ – ನಿರ್ವಾಹಕರು ಹಿಂದೇಟು ಹಾಕ ು ತ್ತಿ ದ್ದಾರೆ. ಹೋದರೂ ಅಲ್ಲಿ ಊಟ, ತಿಂಡಿಗೆಲ್ಲ ಸರಿಯಾದ ವ್ಯವಸ್ಥೆ ಇರುವುದಿಲ್ಲ ಎನ್ನುವ ಅಳಲು ಇವರದ್ದಾಗಿದೆ. ಇದ ಲ್ಲದೆ ಲಾಕ್‌ಡೌನ್‌ ಸಡಿಲಿಕೆಯಾದ ಆರಂಭ ದಲ್ಲಿ ಕುಂದಾಪುರ, ಬೈಂದೂರು, ಉಡುಪಿ, ಮಂಗಳೂರು ಕಡೆ ಯಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾ ಣಿಕರ ಸಂಖ್ಯೆ ಜಾಸ್ತಿಯಾಗಿತ್ತು. ಆದರೆ ಈಗ ಇಲ್ಲಿಂದ ಆ ಕಡೆಗೆ ತೆರಳುವವರ ಸಂಖ್ಯೆ ಇಳಿಮುಖಗೊಂಡಿದೆ.

ಬರುವ ಬಸ್‌ಗೆ ಬೇಡಿಕೆ
ಕೋವಿಡ್ ‌ಭೀತಿಯಿಂದಾಗಿ ಬೆಂಗಳೂರಿ ನಲ್ಲಿರುವವರು ಬಹುತೇಕ ಮಂದಿ ಊರಿಗೆ ತೆರಳುತ್ತಿದ್ದು, ಹಾಗಾಗಿ ಅಲ್ಲಿಂದ ಕರಾವಳಿ ಕಡೆಗೆ ಬರುವ ಬಸ್‌ಗಳಲ್ಲಿ ಬೇಡಿಕೆಯಿದೆ. ಆನ್‌ಲೈನ್‌ ಬುಕ್ಕಿಂಗ್‌ನಲ್ಲಿಯೇ ಟಿಕೇಟುಗಳು ಬಹುತೇಕ ಖಾಲಿಯಾಗುತ್ತವೆ.

ನಷ್ಟದ ಸಂಚಾರ
ಈಗ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಇಳಿಮುಖಗೊಂಡಿದ್ದು, ಇದರಿಂದ ಬಹುತೇಕ ಬಸ್‌ಗಳು ನಷ್ಟದಲ್ಲಿಯೇ ಸಂಚರಿಸುತ್ತಿವೆ. ಒಂದು ಬಸ್‌ಗೆ ಕುಂದಾಪುರದಿಂದ ಬೆಂಗಳೂರಿಗೆ ಹೋಗಿ ಬರಲು ಕನಿಷ್ಠ 16 ಸಾವಿರ ರೂ. ಖರ್ಚಾಗುತ್ತದೆ. ಬೆರಳೆಣಿಕೆಯ ಪ್ರಯಾಣಿಕರಿದ್ದರೆ ಹೇಗೆ ಹೋಗುವುದು ಎಂದು ಪ್ರಶ್ನಿಸುತ್ತಾರೆ ಖಾಸಗಿ ಬಸ್‌ನ ಮಾಲಕರೊಬ್ಬರು.

8 ಬಸ್‌ ಕೆಎಸ್‌ಆರ್‌ಟಿಸಿ ಬಸ್‌
ಕೋವಿಡ್‌ಗಿಂತ ಮುಂಚೆ ಉಡುಪಿ, ಕುಂದಾಪುರ ಭಾಗದಿಂದ ದಿನಕ್ಕೆ 40 ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಂಗಳೂರಿಗೆ ಸಂಚರಿಸುತ್ತಿದ್ದವು. ಸಡಿಲಿಕೆ ಆದ ಅನಂತರ 25 ಬಸ್‌ಗಳು ಸಂಚಾರವನ್ನು ಆರಂಭಿಸಿದವು. ಆದರೆ ಕಳೆದ ವಾರದಿಂದ ಕೋವಿಡ್‌ ಜಾಸ್ತಿಯಾಗುತ್ತಿದ್ದು, ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿದೆ. ಇದರಿಂದ ಪ್ರಸ್ತುತ 7-8 ಬಸ್‌ಗಳಷ್ಟೇ ಸಂಚರಿಸುತ್ತಿವೆ.
-ಉದಯ ಕುಮಾರ್‌ ಶೆಟ್ಟಿ, ,
ಘಟಕ ವ್ಯವಸ್ಥಾಪಕರು ಉಡುಪಿ ವಿಭಾಗ, ಕೆಎಸ್‌ಆರ್‌ಟಿಸಿ

ಸೀಮಿತ ಬಸ್‌ ಸಂಚಾರ
ನಾವು ಜನರ ಪ್ರಯೋಜನಕ್ಕಾಗಿ ಲಾಕ್‌ಡೌನ್‌ ಸಡಿಲಿಕೆಯಾದಾಗ ಬಸ್‌ ಸಂಚಾರ ಆರಂಭಿಸಿದ್ದೆವು. ಆದರೆ ಜನರೇ ಸಂಚರಿಸಲು ಹಿಂದೇಟು ಹಾಕುತ್ತಿರುವುದರಿಂದ, ಕೆಲ ಬಸ್‌ಗಳು ನಷ್ಟದಲ್ಲಿಯೇ ಸಂಚರಿಸಬೇಕಾಗುವುದರಿಂದ ಕೆಲವು ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದೇವೆ. ಆದರೆ ಸಂಪೂರ್ಣ ಬಸ್‌ ಸಂಚಾರ ಸ್ಥಗಿತ ಮಾಡಿಲ್ಲ. ಸೀಮಿತ ಸಂಖ್ಯೆ ಬಸ್‌ಗಳು ಪ್ರತಿ ನಿತ್ಯ ಸಂಚರಿಸುತ್ತವೆ.
-ಅನಿಲ್‌ ಚಾತ್ರ,
ಮಾಲಕರು ಶ್ರೀ ದುರ್ಗಾಂಬಾ ಬಸ್‌, ಕುಂದಾಪುರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.