ಚಾರ್ಮಾಡಿ ಗೇಟ್: ಮುಕ್ತ ಸಂಚಾರ
Team Udayavani, May 31, 2020, 5:59 AM IST
ಮುಂಡಾಜೆ: ಬಂಟ್ವಾಳ ಮೂಡಿಗೆರೆ ರಾಜ್ಯ ಹೆದ್ದಾರಿಯ ಚಾರ್ಮಾಡಿಯಲ್ಲಿ ಕೋವಿಡ್ 19 ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ತಪಾಸಣೆಗೆ ಹಾಗೂ ಪ್ರಯಾಣಿಕರ ಆರೋಗ್ಯವನ್ನು ಪರೀಕ್ಷಿಸಲು ತೆರೆಯಲಾಗಿದ್ದ ತಾತ್ಕಾಲಿಕ ಗೇಟ್ ಅನ್ನು ತೆರವುಗೊಳಿಸಿದ್ದು, ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈಗ ಹೊರರಾಜ್ಯದ ವಾಹನಗಳ ಹಾಗೂ ಪ್ರಯಾಣಿಕರ ದಾಖಲೆಗಳನ್ನು ಮಾತ್ರ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ನಿಯೋಜಿಸಲಾಗಿದ್ದ ಸಿಬಂದಿ ಇರುವುದಿಲ್ಲ.
ಮೂರು ವರದಿ ನೆಗೆಟಿವ್
ನೀರುಮಾರ್ಗದ ಕೋವಿಡ್ 19 ಪಾಸಿಟಿವ್ ಮಹಿಳೆಯ ಪ್ರಥಮ ಸಂಪರ್ಕ ದಲ್ಲಿದ್ದ ಚಾರ್ಮಾಡಿಯ ಸಂಬಂಧಿ ಮಹಿಳೆ, ಇಬ್ಬರು ಮಕ್ಕಳ ಗಂಟಲ ದ್ರವ ಮಾದರಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದಾಗಿ ನೆರಿಯ ಪ್ರಾ.ಆ. ಕೇಂದ್ರದ ವರದಿ ತಿಳಿಸಿದೆ.