ಮರದ ಮೇಲೊಂದು ಮನೆ ಕಟ್ಟಿದ ಮಕ್ಕಳು!


Team Udayavani, May 11, 2020, 6:35 AM IST

ಮರದ ಮೇಲೊಂದು ಮನೆ ಕಟ್ಟಿದ ಮಕ್ಕಳು!

ತಡಗಜೆ ದೇವರ ಕಟ್ಟೆಯ ಬಳಿ ಮರದ ಮೇಲೆ ಮಕ್ಕಳೇ ನಿರ್ಮಿಸಿದ ಮನೆ.

ವಿಶೇಷ ವರದಿ-ಸುಳ್ಯ: ಬೆಳ್ಳಾರೆ ಪೇಟೆಯಿಂದ ಕೂಗಳತೆ ದೂರದ ತಡಗಜೆ ದೇವರ ಕಟ್ಟೆಯ ಬಳಿ ಮರದ ಮೇಲೆ ಮಕ್ಕಳೇ ನಿರ್ಮಿಸಿದ ಪುಟ್ಟ ಮನೆ ಗಮನ ಸೆಳೆಯುತ್ತಿದೆ!

ತಡಗಜೆ ನಿವಾಸಿ ಬೆಳ್ಳಾರೆ ಕೆಪಿಎಸ್‌ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಾದ ಭವಿಷ್‌, ಆಕಾಶ್‌, ಎಳೆಯ ಪ್ರಾಯದ ಬಾಲಕಿ ಭಕ್ತಿ, ಬಂಟ್ವಾಳದ ಆರನೇ ತರಗತಿ ವಿದ್ಯಾರ್ಥಿ ಆತ್ಮಿಕ್‌ ಈ ಮನೆಯ ನಿರ್ಮಾತೃಗಳು. ಆತ್ಮಿಕ್‌ ಬಂಟ್ವಾಳದಿಂದ ತಡಗಜೆಯ ಅಜ್ಜಿ ಮನೆಗೆ ಬಂದವ ಲಾಕ್‌ಡೌನ್‌ ಕಾರಣ ಊರಿಗೆ ಹೋಗಲಾಗದೆ ಇಲ್ವೇ ಉಳಿದುಕೊಂಡಿದ್ದ. ಈ ನಾಲ್ವರು ಸೇರಿಕೊಂಡು ಸ್ವಂತ ಯೋಚನೆಯಲ್ಲೇ ಮನೆ ನಿರ್ಮಿಸಿದರು.

ಕಾರ್ಟೂನ್ ವೀಕ್ಷಿಸಿ ಮನೆ ನಿರ್ಮಿಸಿದರು!
ಟ್ರೀ ಹೌಸ್‌ ನಿರ್ಮಾಣಕ್ಕೆ ಯೋಚನೆ ಹೊಳೆದದ್ದು ಟಿ.ವಿ. ವೀಕ್ಷಣೆ ವೇಳೆ. ಮರದಲ್ಲಿ ಮನೆ ಎನ್ನುವ ದೃಶ್ಯವನ್ನು ಶಿವ ಕಾರ್ಟೂನ್ ಮೂಲಕ ವೀಕ್ಷಿಸಿದ ಮಕ್ಕಳು ಅದನ್ನು ಪ್ರಯೋ ಗಿಸುವ ಪ್ರಯತ್ನ ಆರಂಭಿಸಿದರು. ಅದಕ್ಕಾಗಿ ಬಳ್ಳಿ ಜಾತಿಯ ಹೆಚ್ಚು ಎತ್ತರವಿಲ್ಲದ ಮರವನ್ನು ಆಯ್ಕೆ ಮಾಡಿಕೊಂಡರು. ಸಣ್ಣ-ಸಣ್ಣ ಮರದ ತುಂಡುಗಳನ್ನು ಜೋಡಿಸಿ ಮೆಟ್ಟಲು ಮಾಡಿ, ಅನಂತರ ಮರ ಏರಿ ಗೆಲ್ಲುಗಳು ನಡುವೆ ಮರದ ತುಂಡು ಜೋಡಿಸಲಾಯಿತು. ಅದರ ಮೇಲೆ ತೆಂಗಿನ ಗರಿಯ ಛಾವಣಿ ನಿರ್ಮಿಸಲಾಯಿತು. ಕೆಳ ಭಾಗದಲ್ಲಿ ವಿಶ್ರಾಂತಿಗೆಂದು ಉಯ್ನಾಲೆ, ಆಸನ ನಿರ್ಮಿಸಿದರು. 3 ವಾರಗಳ ಶ್ರಮದಿಂದ ಮನೆ ಸಿದ್ಧವಾಗಿದೆ. ಐದಾರು ಮಂದಿ ಕುಳಿತುಕೊಳ್ಳುವಷ್ಟು ಸ್ಥಳ ಇದೆ ಎನ್ನುತ್ತಾರೆ ಭವಿಷ್‌.

ಗೃಹ ಪ್ರವೇಶದ ಸಂಭ್ರಮ
ಮನೆ ಕಟ್ಟಿದ ಮೇಲೆ ಗೃಹ ಪ್ರವೇಶ ಮಾಡಬೇಕು ಎಂಬ ಯೋಚನೆ ಮಕ್ಕಳಲ್ಲಿ ಬಂತು. ಮೇ 10ರಂದು ಮುಹೂರ್ತ ನಿಗದಿ ಮಾಡಿ, ಹತ್ತಾರು ಮಂದಿಗೆ ಆಹ್ವಾನ ಕೊಟ್ಟರು. ಮನೆಯೊಳಗೆ ಕಾಲಿಡುವ ಮೂಲಕ ಗೃಹ ಪ್ರವೇಶ ಕೂಡ ನಡೆಯಿತು. ಅತಿಥಿಗಳಿಗೆ ಅವಲಕ್ಕಿ, ಜ್ಯೂಸ್‌ ನೀಡಲಾಯಿತು. 20ಕ್ಕೂ ಅಧಿಕ ಮಂದಿ ಬಂದಿದ್ದರು. ನಮಗೆ ಖುಷಿ ಆಯಿತು ಅನ್ನುತ್ತಾರೆ ಆತ್ಮಿಕ್‌, ಆಕಾಶ್‌.

 

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.