ನಾವು ನೋಡಿದ ಸಿನಿಮಾ: ಶ್ವಾನ ಜಗದೊಳಗೆಒಂದು ಸುತ್ತಾಟ


Team Udayavani, May 5, 2020, 3:02 PM IST

ಶ್ವಾನ ಜಗದೊಳಗೆಒಂದು ಸುತ್ತಾಟ

A DOG’S PURPOSE
ಭಾಷೆ- ಇಂಗ್ಲಿಷ್‌
ಅವಧಿ- 120 ನಿಮಿಷ
ಎಲ್ಲಿ ಸಿಗುತ್ತದೆ? ಯು ಟ್ಯೂಬ್‌

ನಾನ್ಯಾಕೆ ಬದುಕಿದ್ದೇನೆ? ನನ್ನೀ ಬದುಕಿನ ಉದ್ದೇಶವಾದ್ರೂ ಏನು? ಆಗಾಗ ತಳೆಯೋ ನಮ್ಮ ಹುಟ್ಟಿಗೊಂದು ನಿರ್ದಿಷ್ಟವಾದ ಧ್ಯೇಯವೇನಾದ್ರೂ ಇರಲೇ ಬೇಕಲ್ಲ, ಇರೋದು ಹೌದೇ ಆಗಿದ್ರೆ ಅದು ಏನಿರಬಹುದು? ಸಾವು- ಬದುಕಿನ ಈ ಕಣ್ಣಾಮುಚ್ಚಾಲೆಯಾಟ, ಏನೋ ಮಹತ್ತರವಾದ ಕಾರ್ಯಕ್ಕಲ್ಲದೆ ವಿನಾಕಾರಣ ಜರುಗಲು ಸಾಧ್ಯವೇ?- ಇದು ಬೈಲೀ ಎಂಬ ನಾಯಿಯೊಂದು ತನಗೆ ತಾನೇ ಕೇಳಿಕೊಳ್ಳುವ ಪ್ರಶ್ನೆ.

ಇದಕ್ಕೆ ಕಾರಣವೂ ಇದೆ. ಐವತ್ತರ ದಶಕದಲ್ಲಿ, ಟೋಬಿ ಎಂಬ ನಾಯಿಮರಿಯಾಗಿ ಜನ್ಮ ತಳೆಯುವುದರೊಂದಿಗೆ ಶುರುವಾಗಿ, ಯಾವುದೇ ಭದ್ರತೆಯಿರದ ಬದುಕಿನ ಯಾನದಲ್ಲಿ, ಹಲವಾರು ಹುಟ್ಟುಪಡೆದರೂ, ಅಕಾಲಿಕವಾಗಿ ಮರಣ ಹೊಂದುತ್ತಾ ಸಾಗುತ್ತಿದ್ದ ಜನ್ಮಾಂತರಗಳ ಬದುಕಿನ ಹಾದಿಯಲ್ಲಿ, ಅದರ ಹುಟ್ಟಿಗೊಂದು ಸಾರ್ಥಕತೆ ಸಿಕ್ಕಿದ್ದು ಮಾತ್ರ ಅರವತ್ತರ ದಶಕದಲ್ಲಿ. ಅದೂ ಅನಿರೀಕ್ಷಿತ ಘಟನೆಯೊಂದರಲ್ಲಿ ಈಥನ್‌ ಎಂಬ ಬಾಲಕನ ತೆಕ್ಕೆಗೆ ಸೇರಿದ ನಂತರ. ಈಗ ನಾಯಿಮರಿಗೆ ಹೊಸಮನೆ ಹೊಸಸಂಗಾತಿಯ ಜೊತೆಗೆ, ಬೈಲಿಯೆಂಬ ಹೊಸದೊಂದು ಹೆಸರೂ ಜೊತೆಯಾಗುತ್ತದೆ. ಇದಿಷ್ಟು ಒಂದು ಕಥೆಯಾದರೆ, ಇಲ್ಲಿಂದ ಮುಂದೆ ನಡೆಯೋದೇ ಮತ್ತೂಂದು ರೋಚಕ ಅಧ್ಯಾಯ. ಇಲ್ಲಿಂದ ಮುಂದೆಯೂ ನಾಯಿಯಾಗಿಯೇ ಹಲವಾರು
ಜನ್ಮಗಳನ್ನು ತಳೆಯುತ್ತಾ ಸಾಗುತ್ತದೆ ಬೈಲಿ. ತನ್ನೀ ಬದುಕಿನ ಯಾತ್ರೆಗೆ ಕಾರಣ ಹಾಗೂ ಅಂತ್ಯ ಏನು ಎಂಬ ಅದರ ಪ್ರಶ್ನೆಗೆ ಉತ್ತರ ಸಿಗೋದು ಮಾತ್ರ ಕ್ಲೈಮ್ಯಾಕ್ಸಿನಲ್ಲಿ.

ಹೀಗೆ, ನಾಯಿಯೊಂದರ ಬದುಕಿನ ಹಲವಾರು ಮಜಲುಗಳನ್ನು, ಅದರದೇ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸುತ್ತಾ, ನಮ್ಮೊಳಗಿನ ಹಲವಾರು ಗೊಂದಲಗಳಿಗೆ, ಶ್ವಾನವೊಂದರ ರೂಪದಲ್ಲಿ ಅದರ ಬದುಕಿನಲ್ಲಾಗೋ ಘಟನಾವಳಿಗಳ ಮೂಲಕವೇ, ಉತ್ತರಿಸುತ್ತಾ ಸಾಗುವ ಅಪರೂಪದ ಸಿನಿಮಾ, 2017ರಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ತೆರೆಕಂಡ ಅ A Dog’s purpose ನಾಯಿಯನ್ನೇ ಪ್ರಧಾನ ಪಾತ್ರವನ್ನಾಗಿಸಿ, ಹಾಲಿವುಡ್ಡಿನಲ್ಲಿ ಎ ಡಾಗ್ಸ್ ವೇ ಹೋಮ್, ಹಾಚಿಕೋ, ಎ ಡಾಗ್ಸ್‌ ಜರ್ನಿ, ಮಾರ್ಲೆ ಮಿ, ಏಯ್ಟ್ ಬಿಲೋ ನಂತಹ ಹಲವಾರು ಅದ್ಭುತ ಸಿನಿಮಾಗಳು ತೆರೆಕಂಡಿವೆಯಾದರೂ, ಬಹುತೇಕ ಎಲ್ಲಾ ಸಿನಿಮಾಗಳ ಕಥೆಯೂ, ನಾಯಿ ಹಾಗೂ ಒಡೆಯನ ಅನ್ಯೋನ್ಯತೆ- ಅಗಲಿಕೆಗಳನ್ನೇ ಕಥಾ ವಸ್ತುವಾಗಿ ಹೊಂದಿವೆ. ಆದರೆ ಈ ಚಿತ್ರದಲ್ಲಿ ಇವುಗಳಿಗೆಲ್ಲಾ ಭಿನ್ನವೆಂಬಂತೆ, ಇಡೀ ಚಿತ್ರವನ್ನು ನಾಯಿಯೊಂದು ತನ್ನ ಹಲವಾರು ರೂಪಗಳ ಮುಖಾಂತರ ಜಗತ್ತನ್ನು ನೋಡುವಂತೆ, ತನ್ನದೇ ರೀತಿಯಲ್ಲಿ ಅರ್ಥೈಸಿಕೊಳ್ಳುವಂತೆ ಚಿತ್ರಿಸಲಾಗಿದೆ. ಅದೇ ಈ ಚಿತ್ರದ ವಿಶೇಷ.

ಸುಧೀರ್‌ ಸಾಗರ್‌

ಟಾಪ್ ನ್ಯೂಸ್

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-fusion

Yugadi: ಯುಗಾದಿ

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.