ದೋಟಿಹಾಳ : ಆಶ್ರಯ ಮನೆ ಹಂಚಿಕೆ ವೇಳೆ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿತು
Team Udayavani, Jan 24, 2022, 8:10 PM IST
ದೋಟಿಹಾಳ: ಸಮೀಪದ ಶಿರಗುಂಪಿ ಗ್ರಾಮ ಪಂಚಾಯತಿ ಸೋಮವಾರ ಗ್ರಾಮಸಭೆ ನಡೆಯಿತು. ಈ ವೇಳೆ ಆಶ್ರಯ ಮನೆಗಳ ಫಲಾನುಭವಿಗಳ ಮನೆ ಹಂಚಿಕೆ ವೇಳೆ ಜಗಳ ನಡೆದಿದೆ. ಈ ಜಗಳ ಸದ್ಯ ಕುಷ್ಟಗಿ ಪೋಲಿಸ್ ಠಾಣೆ ಮೆಟ್ಟಿಲೇರಿದೆ.
ಬಳೂಟಗಿ ಗ್ರಾಮಸ್ಥರು ಉಪಾಧ್ಯಕ್ಷ ಶಿವಮ್ಮ ಎಲಿಗಾರ್ ಅವರು ಗ್ರಾಮ ಸಭೆ ಬಂದಿಲ್ಲ. ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ ಎಂದು ದೂರು ನೀಡಿದಾರೆ ಎಂದು ಪಿಎಸ್ಐ ತಿಮ್ಮಣ್ಣ ನಾಯಕ ಅವರು ಹೇಳಿದ್ದಾರೆ.
ಪಿಡಿಒ ವೆಂಕಟೇಶ ಪವಾರ ಅವರನ್ನು ವಿಚಾರಿಸಿದಾಗ ಉಪಾಧ್ಯಕ್ಷರು ಗ್ರಾಮಸಭೆ ಬಂದಿದ್ದರು ಅಲ್ಲದೆ ಈ ಗ್ರಾಮಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಯಲ್ಲಾಪುರ: ಇದೇನು ಪಾಳುಬಿದ್ದ ಕಟ್ಟಡವೇ? ಯಾರೂ ದಾತಾರರು ಇಲ್ಲವೇ?