ಬಾರಿ ಮಳೆಗೆ ಮನೆ ಆವರಣ ಗೋಡೆ ಕುಸಿತ, ಮಹಿಳೆ ಅಪಾಯದಿಂದ ಪಾರು!
Team Udayavani, Aug 2, 2020, 11:23 AM IST
ಈಶ್ವರಮಂಗಲ: ಮನೆಯ ಆವರಣಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಅಪಾಯದಿಂದ ಪಾರಾದ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕನೂ೯ರು ಸಮೀಪ ಅಲಬಿಮೂಲೆಯಲ್ಲಿ ರವಿವಾರ ಸಂಭವಿಸಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭಾನುವಾರ ಬೆಳಿಗ್ಗೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕನೂ೯ರು ಸಮೀಪ ಅಲಬಿಮೂಲೆ ಶೇಕ್ ಇಮಾಮು ಶಾಹೀದ್ ರವರ ಮನೆಯ ಅಡುಗೆ ಕೋಣೆಯ ಮೇಲೆ ಅವರ ಮಗನ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ.ಅಡುಗೆ ಮನೆಯಲ್ಲಿ ಇದ್ದ ಮಹಿಳೆ ಸದ್ದು ಕೇಳಿ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ಬಂದು ಅಡುಗೆ ಮನೆಗೆ ಬಿದ್ದ ಕಲ್ಲನ್ನು ತೆರವುಗೊಳಿಸಿದ್ದಾರೆ.ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ,ಮಾಜಿ ಸದಸ್ಯರಾದ ಎಂ ಬಿ ಇಬ್ರಾಹಿಂ,ಅಬ್ದುಲ್ ಖಾದರ್,ಗ್ರಾಮ ಕರಣಿಕ ರಾಧಾಕೃಷ್ಣ,ಸಹಾಯಕ ರಘುನಾಥ,ಚಾಪ೯ಟೆ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ