ನೆರೆ ಪರಿಹಾರಕ್ಕೆ ಆಗ್ರಹಿಸಿ ದಂಪತಿ ಧರಣಿ
Team Udayavani, Nov 6, 2020, 10:30 PM IST
ಹಾನಗಲ್ಲ: ನೆರೆ ಹಾವಳಿಗೆ ಬಿದ್ದುಹೋದ ಮನೆಗೆ ಸರಕಾರದಿಂದ ಪರಿಹಾರ ಬರುವ ಭರವಸೆ ಮೇಲೆ ಮನೆ ನಿರ್ಮಾಣಕ್ಕೆ
ಮುಂದಾದ ತಾಲೂಕಿನ ಮಾಸನಕಟ್ಟಿ ಗ್ರಾಮದ ಫಲಾನುಭವಿ ದಂಪತಿ, ಪರಿಹಾರಕ್ಕಾಗಿ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು. ಗುರುವಾರ ತಹಶೀಲ್ದಾರ ಕಚೇರಿ ಎದುರು ತಾಲೂಕಿನ ಮಾಸನಕಟ್ಟಿ ಗ್ರಾಮದ ದ್ಯಾಮವ್ವ ಬಾರಿಗಿಡದ ಹಾಗೂ ದೇವೇಂದ್ರಪ್ಪ ಬಾರಿಗಿಡದ ಧರಣಿ ನಡೆಸಿದರು. ಈ ಮೊದಲು ಹತ್ತಾರು ಬಾರಿ ತಾಲೂಕು ತಹಶೀಲ್ದಾರ್ ಹಾಗೂ ಗ್ರಾಮ ಪಂಚಾಯತಿಗೆ ಮನವಿ ನೀಡಿದ್ದರೂ ಯಾವುದೇ ಫಲ ನೀಡದ ಕಾರಣ ಅನಿವಾರ್ಯವಾಗಿ ಧರಣಿ ನಡೆಸುತ್ತಿರುವುದಾಗಿ ಹೇಳಿದರು.
ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಗೆ ಬಿದ್ದುಹೋದ ಮನೆಗೆ 5 ಲಕ್ಷ ರೂ. ಕೊಡುವುದಾಗಿ ಸರಕಾರ ಘೋಷಿಸಿತ್ತು. ಈ ದಂಪತಿ ಅದರ ಫಲಾನುಭವಿಯಾಗಿದ್ದರು. ಆದರೆ ಇದರಲ್ಲಿ ಕೇವಲ ಒಂದು ಲಕ್ಷ ನೀಡಿ ಕಂದಾಯ ಇಲಾಖೆ ಕೈತೊಳೆದುಕೊಂಡಿತ್ತು.
ತಾಂತ್ರಿಕ ದೋಷಗಳಿಂದ ಪರಿಹಾರ ನೀಡಲಾಗದು ಎಂದು ಅಧಿ ಕಾರಿಗಳು ಹೇಳಿದ್ದರಿಂದ ನ್ಯಾಯಕ್ಕಾಗಿ ಧರಣಿ
ಕುಳಿತಿರುವುದಾಗಿ ದೇವೆಂದ್ರಪ್ಪ ಬಾರಿಗಿಡದ ಹಾಗೂ ಪತ್ನಿ ದ್ಯಾಮವ್ವ ಬಾರಿಗಿಡದ ತಿಳಿಸಿದರು.
ಧರಣಿಗೆ ಸ್ಪಂದಿಸಿದ ತಹಶೀಲ್ದಾರ್ ಪಿ.ಎಸ್.ಎರ್ರಿಸ್ವಾಮಿ, ಅವರು ಕಟ್ಟಿಕೊಳ್ಳುತ್ತಿರುವ ಮನೆಯ ಜಾಗದ ಬಗೆಗೆ ದಾಖಲಾತಿ ಗೊಂದಲಗಳಿರುವುದರಿಂದ ಪರಿಹಾರ ಧನ ನೀಡಲಾಗಿಲ್ಲ. ಅವರೇ ನೀಡಿದ ದಾಖಲೆಗಳು ಪರಿಹಾರ ನೀಡಲು ಅನಾನುಕೂಲವಾಗಿವೆ. ಇನ್ನೂ ಪರಿಶೀಲಿಸಿ ನ್ಯಾಯ ಒದಗಿಸಿಕೊಡಲು ಮುಂದಾಗುತ್ತೇವೆ. ಈ ಪ್ರಕರಣವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗುತ್ತದೆ. ಹಾಗಾಗಿ, ಧರಣಿ ಕೈಬಿಡುವಂತೆ ಮನವಿ ಮಾಡಿದರು. ತಹಶೀಲ್ದಾರ್ ಆಶ್ವಾಸನೆಗೆ ಒಪ್ಪಿದ ದಂಪತಿ ತಾತ್ಕಾಲಿಕವಾಗಿ ಧರಣಿ ಹಿಂಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!