ಕೋವಿಡ್ ಅಳಿಸಲು ಬರಿಗಾಲ ಹರಕೆ!
Team Udayavani, Apr 30, 2020, 12:59 PM IST
ಮಂಗಳೂರು: ಕೋವಿಡ್ ಮಹಾಮಾರಿಯನ್ನು ದೇಶದಿಂದ ತೊಲಗಿಸು ಎಂದು ಉತ್ತರ ಕರ್ನಾಟಕದ ಮಹಿಳೆಯೊಬ್ಬರು ತುಳುನಾಡಿನ ಕಲ್ಲುರ್ಟಿ ದೈವದ ಮೊರೆ ಹೊಕ್ಕಿದ್ದಾರೆ. ರೋಗ ಕೊನೆ ಆಗುವ ವರೆಗೂ ಬರಿಗಾಲಲ್ಲೇ ನಡೆಯುವ ಹರಕೆ ಈಕೆಯದು.
ಈಕೆ ಬಾದಾಮಿ ಮೂಲದ ಬಸಮ್ಮ. ಇವರು ವಾಸವಾಗಿರುವ ಕೂಳೂರು ಗುಡ್ಡೆಯಂಗಡಿ ಯಲ್ಲಿ ಕಲ್ಲುರ್ಟಿ ದೈವಸ್ಥಾನವಿದೆ. ಪತಿ ಮದ್ಯಪಾನಿಯಾಗಿದ್ದು, ಮಕ್ಕಳು ಚಿಕ್ಕವರಿದ್ದಾಗಲೇ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಬಸಮ್ಮ ಇದ್ದ ಕೆಲಸವನ್ನೂ ಕಳೆದುಕೊಂಡಿದ್ದು, ಸಂಕಷ್ಟ ದೂರಮಾಡೆಂದು ದೈವವನ್ನು ಕೇಳಿಕೊಂಡಿದ್ದರು. ಪವಾಡವೆಂಬಂತೆ ಮರುದಿನವೇ ಕೆಲಸಕ್ಕೆ ಕರೆ ಬಂದಿತ್ತು. ಅಲ್ಲಿಂದ ನಿರಂತರವಾಗಿ ಆ ದೈವವನ್ನು ನಂಬಿಕೊಂಡಿದ್ದಾರೆ. ಬಸಮ್ಮ ಕೆಲಸಕ್ಕಾಗಿ ನಿತ್ಯ ಐದಾರು ಕಿ.ಮೀ. ತನಕ ನಡೆಯುತ್ತಿದ್ದರು. ಪ್ರಸ್ತುತ ಕೆಲಸ ಕಡಿಮೆ ಇದ್ದರೂ ಕೊರೊನಾ ಕಷ್ಟ ಕಳೆಯಲೆಂಬ ಹರಕೆ ತೀರಿಸಲು ಅಷ್ಟು ದೂರ ನಡಿಗೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ