ಕಲಾವಿದರ ಮೇಲೆ ಕೋವಿಡ್‌-19 ದುಷ್ಪರಿಣಾಮ


Team Udayavani, May 15, 2020, 9:16 PM IST

ಕಲಾವಿದರ ಮೇಲೆ ಕೋವಿಡ್‌-19 ದುಷ್ಪರಿಣಾಮ

ಮಣಿಪಾಲ: ಕೋವಿಡ್‌ 19 ವೈರಸ್‌ ಹಿನ್ನೆಲೆ ದೇಶಾದ್ಯಂತ ಲಾಕ್‌ಡೌನ್‌ ಹೇರಲಾಗಿದೆ. ಇದರಿಂದ ಜನರು ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಕಲೆ ಮತ್ತು ಸಂಸ್ಕೃತಿಯಾದರೂ ಹೇಗೆ ಬೆಳವಣಿಗೆ ಕಂಡೀತು. ಲಾಕ್‌ಡೌನ್‌ನಿಂದ ಹೊರಗೆ ಬರಲಾಗದೆ ಅದೆಷ್ಟು ಮಂದಿ ಸಂಸ್ಕೃತಿ ಹರಿಕಾರರು ತಣ್ಣಗೆ ಮನೆಯೊಳಗೆ ಗುನುಗುತ್ತಿದ್ದಾರೋ ದೇವನೇ ಬಲ್ಲ.

ಕಲಾವಿದರಿಗೆ ಸಂಕಷ್ಟ
ಮಾಡೋಕೆ ಕೆಲಸವೇ ಇಲ್ಲ. ಇದ್ದರೂ ಹೋಗುವಂತಿಲ್ಲ. ಹೋದರೂ ಮತ್ತೆ ಮನೆ ಸೇರಬಹುದೆಂಬ ವಿಶ್ವಾಸವೂ ಇಲ್ಲ. ಕಲಾವಿದ ಬದುಕಬೇಕೆಂದರೆ ಆತ ಸದಾ ಪ್ರಚಲಿತದಲ್ಲಿರಬೇಕು. ಕಲೆಯೊಂದಿಗೆ ಉಸಿರಾಡಬೇಕು. ಅದರ ಹಿಡಿತವನ್ನೇ ಬಿಟ್ಟು ಬಿಟ್ಟರೆ ಈಜು ಮರೆತ ಮೀನಿನಂತಾಗುವ ಸ್ಥಿತಿ ಕಲಾವಿದನಿಗೂ ಬರಬಹುದು.

ಕಲೆ, ಸಂಸ್ಕೃತಿಯನ್ನು ಆರ್ಥಿಕ ಸಂಕಷ್ಟದಿಂದ ಹೇಗೆ ಪಾರು ಮಾಡಬಹುದು?
ಕಲೆ ಮತ್ತು ಸಂಸ್ಕೃತಿಯ ರಕ್ಷಣೆಯ ಜವಾಬ್ದಾರಿ ಸರಕಾರ ಮಾಡಬೇಕಾಗಿರುವುದು ಅಗತ್ಯ. ವಿವಿಧ ಕಂಪೆನಿಗಳ ಪರವಾಗಿ ಕೆಲಸ ಮಾಡುವವರಿಗಾಗಿ (ಗಿಗ್‌ ವರ್ಕರ್ಸ್‌) ಸಾಮಾಜಿಕ ಭದ್ರತೆ ಯೋಜನೆ ಜಾರಿ ಮಾಡಲಾಗುತ್ತದೆ. ಕೆಲಸದಿಂದ ಕಿತ್ತು ಹಾಕಲ್ಪಟ್ಟ ಉದ್ಯೋಗಿಗಳ ಕೌಶಲಾವೃದ್ಧಿಗೆ ನಿಧಿ ಸ್ಥಾಪನೆ ಮಾಡಲಾಗುತ್ತದೆ. ಮಹಿಳೆಯರಿಗೆ ಎಲ್ಲ ರೀತಿಯ ಕೆಲಸ ಮಾಡಲು ಅನುಮತಿಯಿದೆ. ಆದರೆ ಕಲಾವಿದರಿಗಾಗಿ ಏನು ಸೌಲಭ್ಯಗಳನ್ನು ನೀಡಿದೆ? 20 ಲಕ್ಷ ಕೋ. ರೂ.ಗಳಲ್ಲಿ ಒಂದು ಚೂರಾದರೂ ಕಲಾವಿದರ ನೆರವಿಗೆ ಒದಗಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಕಲಾವಿದರಿಗೂ ಸಿಗಲಿ ಸಹಾಯಹಸ್ತ
ದೇಶದ ಎಲ್ಲ ಕಡೆ ಸಮಾನ ಕನಿಷ್ಠ ವೇತನ ಜಾರಿ ಮಾಡಲಾಗುತ್ತದೆ. ಇನ್ನು ಉದ್ಯೋಗಿಗಳಿಗೆ ವಾರ್ಷಿಕ ಆರೋಗ್ಯ ಪರೀಕ್ಷೆ, ಔದ್ಯೋಗಿಕ ಸುರಕ್ಷತೆಯನ್ನು ನೀಡಬೇಕಾಗುತ್ತದೆ. ಕೇವಲ 10 ಮಂದಿಗಿಂತ ಕಡಿಮೆ ಕೆಲಸಗಾರರಿದ್ದರೂ ಇದು ಅನ್ವಯವಾಗುತ್ತದೆ ಎಂಬ ನಿಯಮಗಳನ್ನು ಇತರ ವರ್ಗಕ್ಕೆ ಸರಕಾರ ರೂಪಿಸಿದೆ. ಆದರೆ ಕಲೆಯನ್ನೇ ಬದುಕಾಗಿಸಿಕೊಂಡ ಕಲಾವಿದರಿಗೆ ಯಾವ ಪ್ಯಾಕೇಜ್‌ ನೀಡಲು ಬಯಸುತ್ತದೆ. ಸರಕಾರದ ಮುಂದೆ ಕಲಾವಿದರ ಅವಲತ್ತು ಹಲವಿದೆ. ಮನೆ ಬಾಡಿಗೆ, ವಿದ್ಯುತ್‌, ನೀರಿನ ಬಿಲ್‌ಗ‌ಳನ್ನು ಕಟ್ಟಲು ಕಷ್ಟವಿದೆ, ಸಾಲವೂ ಇನ್ನೂ ಹಾಗೇ ಬಾಕಿ ಇದೆ. ಏನು ಮಾಡೋದು? ಜೀವನ ಸಾಗಿಸೋದು ಆದರೂ ಹೇಗೆ? ಸರಕಾರ ಶೀಘ್ರ ಕಲಾವಿದರು, ಅದಕ್ಕೆ ಪೂರಕ ಇತರ ವೃತ್ತಿ ಸಂಬಂಧೀ ಚಟುವಟಿಕೆ ನಡೆಸುವವರಿಗೆ ಸಂದಿಗ್ಧ ಕಾಲದಲ್ಲಿ ನೆರವಾಗುವುದು ಅಗತ್ಯವಾಗಿದೆ.

ಯಾರಿಗೆಲ್ಲ ನೆರವು ಬೇಕಾಗಿದೆ?
ಯಕ್ಷಗಾನ ಕ್ಷೇತ್ರ, ನಾಟಕ ರಂಗ, ಸಿನೇಮಾ, ಗೊಂಬೆಯಾಟ ಇತರ ರಂಗ ಚಟುವಟಿಕೆಗಳನ್ನು ನಡೆಸುವ ಕಲಾವಿದರಿಗೆ ಕಲೆಯ ಪ್ರಸ್ತುತಿ ಇಲ್ಲದೆ ಆದಾಯ ಇಲ್ಲ. ಕಲಾವಿದ ಬದುಕಬೇಕೆಂದರೆ ಕಲೆಯ ಪ್ರಸ್ತುತಿಯಾಗಬೇಕು. ಎಷ್ಟೋ ದಿನಗಳಿಂದ ಕಲಾ ಪ್ರದರ್ಶನವಿಲ್ಲದೆ ಹೇಗೆ ಕುಟುಂಬವನ್ನು ಪೊರೆಯಬೇಕೆಂಬ ಸಂಕಷ್ಟ ಅವರಲ್ಲಿ ಮನೆ ಮಾಡಿದೆ. ಅನೇಕ ಮಾನವೀಯ ಹೃದಯವುಳ್ಳವರು ಆಹಾರ ವಸ್ತುಗಳ ನೆರವು ಒದಗಿಸಿದ್ದರೂ ಅದು ಎಲ್ಲ ಕಲಾವಿದರಿಗೂ ಸಿಕ್ಕಿವೆ ಹಾಗೂ ಸಾಕಾಗಿವೆ ಎಂಬ ಸ್ಪಷ್ಟ ಮಾಹಿತಿ ಇಲ್ಲ.

ಸಿನೇಮಾ ರಂಗ ತತ್ತರ
ಶೂಟಿಂಗ್‌ ಮುಗಿಸಿ ಇನ್ನೇನು ಬಿಡುಗಡೆ ಮಾಡಬೇಕು ನಿರ್ಧರಿಸಿದ್ದ ಚಿತ್ರಗಳೆಷ್ಟೋ, ಶೂಟಿಂಗ್‌ ಅರ್ಧಕ್ಕೆ ನಿಂತು ಪ್ಯಾಕಪ್‌ ಆದ ಚಿತ್ರಗಳೆಷ್ಟೋ?, ಮತ್ತೆ ಕಲಾವಿದರನ್ನು, ಸಂಪನ್ಮೂಲಗಳನ್ನು ಹೊಂದಿಸುವುದು ಸುಲಭದ ಮಾತಂತೂ ಖಂಡಿತಾ ಅಲ್ಲ. ಒಂದು ಸಿನೇಮಾ ನಿಂತರೆ ಅಸಂಖ್ಯಾತ ಜನ ಸಂಕಟ ಪಡುತ್ತಾರೆ. ಅಷ್ಟೇ ಅಲ್ಲದೆ ಸಿನೇಮಾ ರಂಗವನ್ನೇ ನಂಬಿದ ಪೂರಕ ಉದ್ಯಮಗಳಿವೆ. ಸಿನೇಮಾ ಥಿಯೇಟರ್‌ಗಳು, ಮಾಲ್‌ಗ‌ಳಲ್ಲಿ ದುಡಿಯುವವರೂ ಕೆಲಸವಿಲ್ಲದೆ ಮನೆಯಲ್ಲೇ ದಿನ ದೂಡುತ್ತಿದ್ದಾರೆ.

ಸರಕಾರ ಏನು ಮಾಡಬಹುದು?
ಕನಿಷ್ಠ ವೇತನ ವ್ಯವಸ್ಥೆ ಕಲಾವಿದರಿಗೂ ಅನ್ವಯವಾಗಬೇಕು. ಉದ್ಯೋಗ ಸುರಕ್ಷೆ, ಆಪತ್ಕಾಲದಲ್ಲಿ ನೆರವಿನ ಹಸ್ತ ಚಾಚಬೇಕು. ಸಾಮಾಜಿಕ ಭದ್ರತೆಯನ್ನು ಕಲಾವಿದನಲ್ಲಿ ಮೂಡಿಸುವ ಕಾರ್ಯ ಸರಕಾರದಿಂದ ಆಗಬೇಕು.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.