ಫ್ರಾನ್ಸ್ : ಡಿಸೆಂಬರ್ ವೇಳೆಗೆ ಮೊದಲ ಪ್ರಕರಣ
Team Udayavani, May 6, 2020, 11:39 AM IST
ಮಣಿಪಾಲ: ಕೋವಿಡ್-19 ಸೋಂಕು ಪ್ರಸರಣ ಕುರಿತಾಗಿ ದಿನ ಕಳೆದಂತೆ ಹೊಸ ಸಂಗತಿಗಳು ಬಯಲಾಗುತ್ತಿದ್ದು, ಕೆಲವು ದೇಶಗಳಲ್ಲಿ ಮೊದಲ ಪ್ರಕರಣ ದಾಖಲಾಗುವ ಮುನ್ನವೇ ಸೋಂಕು ಹರಡುವಿಕೆ ಪ್ರಾರಂಭವಾಗಿತ್ತು ಎನ್ನಲಾಗುತ್ತಿದೆ. ಈ ಹಿಂದೆ ಇದೇ ಅಭಿಪ್ರಾಯವನ್ನು ಜಪಾನ್ ಹೇಳಿದ್ದು, ಇದೀಗ ಫ್ರಾನ್ಸ್ ಸಹ ದೇಶದ ಮೊದಲ ಸೋಂಕಿತ ವ್ಯಕ್ತಿ ಬೇರೆಯೇ ಇದ್ದಾನೆ ಎಂದಿದೆ.
ಹೌದು ಈ ಕುರಿತು ಫ್ರೆಂಚ್ ವಿಜ್ಞಾನಿಗಳೇ ಸ್ವತಃ ಮಾಹಿತಿ ಹಂಚಿಕೊಂಡಿದ್ದು, ದೇಶದಲ್ಲಿ ಡಿಸೆಂಬರ್ 27ರಂದೇ ವ್ಯಕ್ತಿಯೊರ್ವನಿಗೆ ಸೋಂಕು ಪತ್ತೆಯಾಗಿದ್ದು, ಪ್ಯಾರಿಸ್ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುತೇಕ ರಾಷ್ಟ್ರಗಳು ತಾವು ಭಾವಿಸಿದಕ್ಕಿಂತ ಮೊದಲೇ ಸೋಂಕಿಗೆ ತುತ್ತಾಗಿವೆ ಎಂಬ ಶಂಕೆ ವ್ಯಕ್ತವಾಗಿದೆ.
ಪ್ಯಾರಿಸ್ನ ಆಸ್ಪತ್ರೆಗೆ ಡಿಸೆಂಬರ್ 27ರಂದು ಫಿಶ್ಮಾಂಗರ್ (42) ಎಂಬ ವ್ಯಕ್ತಿ ದಾಖಲಾಗಿದ್ದು, ಆತ ತೀವ್ರವಾದ ಕೆಮ್ಮು, ತಲೆನೋವು ಮತ್ತು ಜ್ವರವನ್ನು ಹೊಂದಿದ್ದ . ಆತನನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ್ದು, ವೇಗವಾಗಿ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಡಿಸೆಂಬರ್ 29ರಂದೇ ಡಿಸ್ಟಾರ್ಜ್ ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಆತ ಬಿಡುಗಡೆಗೊಂಡ ಕೆಲ ದಿನಗಳ ನಂತರ ಪರೀಕ್ಷೆ ವರದಿ ಬಂದಿದ್ದು, ಆತನಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿತ್ತು ಎನ್ನಲಾಗಿದೆ.
ಅಮೆರಿಕದಲ್ಲೂ ಮೊದಲ ಪ್ರಕರಣ ದಾಖಲಾಗುವುದಕ್ಕಿಂತ ಬಹಳ ಹಿಂದೆಯೇ ಸೋಂಕು ಪ್ರಸರಣ ಆರಂಭವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾಂಟಾ ಕ್ಲಾರಾ, ಕ್ಯಾಲಿಫೋರ್ನಿಯಾ ರಾಜ್ಯಗಳು ಇದಕ್ಕೆ ಹೊರತಾಗಿಲ್ಲ ಎಂದು ಸಂಶೋಧಕರು ತಿಳಿಸಿದ್ದು, ಸೋಂಕಿನಿಂದ ಫೆಬ್ರವರಿ ಆರಂಭದಲ್ಲೇ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಎಂದು ಇಲ್ಲಿನ ವೈದ್ಯಕೀಯ ಪರೀಕ್ಷಕರ ಕಚೇರಿ ಇತ್ತೀಚೆಗಷ್ಟೇ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ