ಕೋವಿಡ್-19 ಕಾರಣಕ್ಕೆ ಮೇಳಗಳ ಕೊನೆಯ ದೇವರ ಸೇವೆಗೆ ಅಡ್ಡಿ

ಗೆಜ್ಜೆ ಸೇವೆ ಎಂಬ ಹೊಸ ಪರಿಕಲ್ಪನೆಯೊಂದಿಗೆ ತಿರುಗಾಟಕ್ಕೆ ಅಂತ್ಯ ಹಾಡುತ್ತಿರುವ ಮೇಳಗಳು

Team Udayavani, May 26, 2020, 6:17 AM IST

ಕೋವಿಡ್-19 ಕಾರಣಕ್ಕೆ ಮೇಳಗಳ ಕೊನೆಯ ದೇವರ ಸೇವೆಗೆ ಅಡ್ಡಿ

ಕೋಟ: ಕೋವಿಡ್-19 ಸಮಸ್ಯೆಯ ಕಾರಣಕ್ಕೆ ದೇಶದಲ್ಲಿ ವಿಧಿಸಲಾದ ಲಾಕ್‌ ಡೌನ್‌ನಿಂದಾಗಿ ಅವಿಭಜಿತ ದ.ಕ. ಜಿಲ್ಲೆಗಳ ತೆಂಕು ಹಾಗೂ ಬಡಗಿನ ಯಕ್ಷಗಾನ ಮೇಳಗಳ ತಿರುಗಾಟ ಸುಮಾರು 60-65ದಿನಗಳಿಂದ ಸ್ಥಗಿತಗೊಂಡಿದ್ದು ಇದೀಗ ವಾಡಿಕೆಯಂತೆ ಈ ಋತುವಿನ ತಿರುಗಾಟ ಅಂತ್ಯಗೊಳಿಸುವ ಸಮಯ ಸಮೀಪಿಸಿದೆ.

ಪ್ರತಿ ಮೇಳಗಳ ಕಲಾವಿದರು ತಮ್ಮ ಕೃಪಾಪೋಷಿತ ದೇಗುಲಗಳಲ್ಲಿ ಗೆಜ್ಜೆಕಟ್ಟಿ ದೇವರ ಸೇವೆಯೊಂದಿಗೆ ತಿರುಗಾಟ ಆರಂಭಿಸುವುದು ಹಾಗೂ ಅದೇ ಸ್ಥಳದಲ್ಲಿ ಕೊನೆಯ ದೇವರ ಸೇವೆ ಆಟದೊಂದಿಗೆ ಗೆಜ್ಜೆಬಿಚ್ಚಿ ತಿರುಗಾಟ ಮುಕ್ತಾಯಗೊಳಿಸುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಲಾಕ್‌ ಡೌನ್‌ನಿಂದಾಗಿ ಕೊನೆಯ ದೇವರ ಸೇವೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೆಜ್ಜೆ ಸೇವೆ ಎನ್ನುವ ಪರಿಕಲ್ಪನೆಯೊಂದಿಗೆ ಮೇಳಗಳು ತಮ್ಮ ಪ್ರದರ್ಶನ ಅಂತ್ಯಗೊಳಿಸುತ್ತಿವೆ.

ಈ ಹಿಂದೆ ಕೊನೆಯ ದೇವರ ಸೇವೆಯಂದು ಕ್ಷೇತ್ರದ ದೇವರುಗಳಿಗೆ ವಿಶೇಷ ಪೂಜೆ ಹಾಗೂ ಮೇಳದ ಗಣಪತಿಗೆ ವಿಶೇಷ ಪೂಜೆ, ಇಡೀ ರಾತ್ರಿ ಪ್ರದರ್ಶನ ನಡೆಸುವ ಮೂಲಕ ತಿರುಗಾಟ ಕೊನೆಗೊಳ್ಳುತಿತ್ತು. ಆದರೆ ಈ ಬಾರಿ ಕೋವಿಡ್-19 ಕಾರಣದಿಂದಾಗಿ ಪ್ರದರ್ಶನಗಳನ್ನು ನಡೆಸುವಂತಿಲ್ಲ ಹಾಗೂ ಮೇಳದ ಎಲ್ಲಾ ಕಲಾವಿದರನ್ನು ಒಂದೆಡೆ ಗುಂಪು ಸೇರಿಸುವಂತಿಲ್ಲ. ಹೀಗಾಗಿ ವಾಡಿಕೆಯಂತೆ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ, ಮೇಳದ ಗಣಪತಿಗೆ ಪೂಜೆ ಸಲ್ಲಿಸಿ, ಎರಡುಪುರುಷ ವೇಷ ಹಾಗೂ ಎರಡು ಸ್ತ್ರೀವೇಷಗಳನ್ನು ದೇವರ ಎದುರಿಗೆ ಕುಣಿಸುವುದರ ಮೂಲಕ ಗೆಜ್ಜೆ ಸೇವೆ ನೀಡಿ ಪ್ರದರ್ಶನ ಕೊನೆಗೊಳಿಸುವ ಪರಿಕಲ್ಪನೆ ಅಳವಡಿಸಿಕೊಳ್ಳಲಾಗಿದೆ. ಈ ಸಂದರ್ಭ ಕಲಾವಿದರು, ಹಿಮ್ಮೇಳ ಹಾಗೂ ದೇಗುಲದ ಆಡಳಿತ ಸಮಿತಿಯವರು ಒಳಗೊಂಡಂತೆ ಕೇವಲ 10-15ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಕೊನೆಯ ಸೇವೆಯಲ್ಲಿ
ಭಾಗವಹಿಸಲಾಗದ ನೋವು
ಕಲಾವಿದನಾದವನು ಒಂದು ಮೇಳದಲ್ಲಿ ತಿರುಗಾಟ ಆರಂಭಿಸಿದ ಮೇಲೆ ಕೊನೆಯ ದೇವರ ಸೇವೆಯ ಪ್ರದರ್ಶನದಲ್ಲಿ ಭಾಗವಹಿಸಿ ಪ್ರದರ್ಶನವನ್ನು ಅಂತ್ಯಗೊಳಿಸಬೇಕು ಎನ್ನುವಂತದ್ದು ನಂಬಿಕೆಯಾಗಿದೆ. ಆದರೆ ಈ ಬಾರಿ ಎಲ್ಲಾ ಕಲಾವಿದರಿಗೆ ಕೊನೆಯ ದೇವರ ಸೇವೆಯಲ್ಲಿ ಗೆಜ್ಜೆಕಟ್ಟುವ ಅವಕಾಶ ಸಿಗುತ್ತಿಲ್ಲವಾದ್ದರಿಂದ ಮನಸ್ಸಲ್ಲಿ ಬೇಸರವಿದೆ. ಆದರೆ ಬೇರೆ ಸಂದರ್ಭದಲ್ಲಿ ಒಬ್ಬೊಬ್ಬರಾಗಿ ಸಾನಿಧ್ಯಕ್ಕೆ ಭೇಟಿ ನೀಡಿ ದೇವರಿಗೆ ಕೈಮುಗಿದು ಈ ವರ್ಷದ ತಿರುಗಾಟ ಅಂತ್ಯಗೊಳಿಸುವುದಾಗಿ ನಿವೇದಿಸಿಕೊಳ್ಳುತ್ತಿದ್ದಾರೆ.

ಸಂಪ್ರದಾಯಕ್ಕೆ ಸೀಮಿತ
ಮೇಳಗಳು ಕೊನೆಯ ದೇವರ ಸೇವೆ ಪ್ರದರ್ಶನದೊಂದಿಗೆ ಮುಕ್ತಾಯಗೊಳ್ಳುವುದು ಸಂಪ್ರದಾಯ. ಆದರೆ ಈ ಬಾರಿ ಕೋವಿಡ್-19 ಕಾರಣದಿಂದ ಕೊನೆಯ ಪ್ರದರ್ಶನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎರಡು ಸ್ತ್ರೀವೇಷ, ಪುರುಷವೇಷ, ಹಿಮ್ಮೇಳದೊಂದಿಗೆ 10ನಿಮಿಷದ ಗೆಜ್ಜೆ ಸೇವೆ ನಡೆಸಿ ಪ್ರದರ್ಶನ ಅಂತ್ಯಗೊಳಿಸಲಾಗುತ್ತಿದೆ
-ಪಳ್ಳಿ ಕಿಶನ್‌ ಹೆಗ್ಡೆ, ನಾಲ್ಕು ಯಕ್ಷಮೇಳಗಳ ಯಜಮಾನರು

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.