ವಸತಿ ಯೋಜನೆ ಅನುಷ್ಠಾನಕ್ಕೂ ಕೋವಿಡ್‌-19 ಕರಿನೆರಳು


Team Udayavani, Apr 19, 2020, 6:22 AM IST

ವಸತಿ ಯೋಜನೆ ಅನುಷ್ಠಾನಕ್ಕೂ ಕೋವಿಡ್‌-19 ಕರಿನೆರಳು

ಸಾಂದರ್ಭಿಕ ಚಿತ್ರ..

ವಿಶೇಷ ವರದಿ ಮಂಗಳೂರು: ಹಿಂದೆ ಅನುದಾನ ಬಿಡುಗಡೆಯಾಗದೆ ಬಾಕಿ ಯಾಗಿ ಬಳಿಕ ವೇಗ ಪಡೆದುಕೊಂಡಿದ್ದ ಸರಕಾರದ ವಸತಿ ಯೋಜನೆಗಳು ಪ್ರಸ್ತುತ ಸಂಪೂರ್ಣ ಸ್ತಬ್ಧಗೊಂಡಿವೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಸತಿ ನಿಗಮ ಚಟುವಟಿಕೆ ನಿಲ್ಲಿಸಿದೆ. ಅನುದಾನ ಬಿಡುಗಡೆಗೊಂಡ ಮನೆಗಳ ನಿರ್ಮಾಣವೂ ಅರ್ಧದಲ್ಲಿದೆ. ಮಳೆಗಾಲ ಹತ್ತಿರ ಬರುತ್ತಿರುವುದರಿಂದ ವಸತಿ ಅಪೇಕ್ಷಿತ ಫ‌ಲಾನುಭವಿಗಳು ಕಂಗಾಲಾಗಿದ್ದಾರೆ. ಖಾಸಗಿಯಾಗಿ ಮನೆ ನಿರ್ಮಿಸು ತ್ತಿರುವವರೂ ಸಂಕಷ್ಟದಲ್ಲಿದ್ದಾರೆ.

ಪದೇ ಪದೆ ಹಿನ್ನಡೆ
ಬಸವ ವಸತಿ, ಅಂಬೇಡ್ಕರ್‌ ವಸತಿ, ಪ್ರಧಾನ ಮಂತ್ರಿ ಆವಾಸ್‌ ಸೇರಿದಂತೆ ವಿವಿಧ ವಸತಿ ಯೋಜನೆಗಳಿಗೆ ಒಂದು ವರ್ಷದಿಂದ ಅನುದಾನ ಬಿಡುಗಡೆ ಯಾಗಿರಲಿಲ್ಲ. ಅಲ್ಪಸ್ವಲ್ಪ ಮೊತ್ತ ಬಿಡುಗಡೆಯಾದಾಗ ಮರಳಿನ ಕೊರತೆ ಉಂಟಾಯಿತು. ಅನಂತರ ಯೋಜನೆ ದುರುಪಯೋಗವಾಗಿದೆ ಎಂಬ ದೂರು ಬಂದದ್ದರಿಂದ “ವಿಜಿಲ್‌ ಆ್ಯಪ್‌’ ತರಲಾಯಿತು.

2.60 ಲಕ್ಷ ಮನೆಗಳು ಅನ್‌ಬ್ಲಾಕ್‌
ಬ್ಲಾಕ್‌ ಆಗಿದ್ದ ಮನೆಗಳನ್ನು ಒಂದು ಬಾರಿಗೆ ಅನ್‌ಬ್ಲಾಕ್‌ ಮಾಡುವ ಅವಕಾಶ ಒದಗಿಸಿದ ಬಳಿಕ ರಾಜ್ಯದಲ್ಲಿ ಸುಮಾರು 2.60 ಲಕ್ಷ ಮನೆಗಳಿಗೆ ಮೊತ್ತ ಬಿಡುಗಡೆ ಪ್ರಕ್ರಿಯೆ ಚಾಲನೆ ಪಡೆದಿತ್ತು. ಆದರೆ ಈಗ ಲಾಕ್‌ಡೌನ್‌ನಿಂದಾಗಿ ಬಹುತೇಕ ಎಲ್ಲ ಚಟುವಟಿಕೆಗಳು ನಿಂತಿವೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 1,640 ಮಂದಿ ಫ‌ಲಾನುಭವಿಗಳ ಮನೆಗಳ ಪೈಕಿ 1,557 ಮನೆಗಳ ಜಿಪಿಎಸ್‌ ಮುಗಿ ಸಲಾಗಿದ್ದು, ಅನೇಕ ಮಂದಿಗೆ ಕೆಲವು ಹಂತಗಳ ಮೊತ್ತ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ಬಾಕಿಯಾಗಿದೆ. ದ.ಕ. ಜಿಲ್ಲೆಯಲ್ಲಿ 2,000ಕ್ಕೂ ಅಧಿಕ ಮನೆಗಳ ನಿರ್ಮಾಣದ ಮೇಲೆ ಲಾಕ್‌ಡೌನ್‌ ಪರಿಣಾಮ ಉಂಟಾಗಿದೆ.

ಎ. 20ರ ಬಳಿಕ ನಿಗಮ ಕಾರ್ಯನಿರ್ವಹಣೆ ನಿರೀಕ್ಷೆ
ಎ. 20ರ ಅನಂತರ ನಿಗಮದ ಸರ್ವರ್‌ ಕಾರ್ಯ ಪುನರಾರಂಭಗೊಳಿಸುವ ನಿರೀಕ್ಷೆ ಇದೆ ಎಂದು ವಸತಿ ಯೋಜನೆ ವಿಭಾಗ ಮತ್ತು ವಸತಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಶೇ.50ರಷ್ಟು ಮಾತ್ರ ಪ್ರಗತಿ
ಬಸವ ವಸತಿ, ಅಂಬೇಡ್ಕರ್‌ ವಸತಿ ಮತ್ತು ವಾಜಪೇಯಿ ವಸತಿ ಯೋಜನೆಯಡಿ 2.24 ಲಕ್ಷ ಮನೆಗಳು ನಿರ್ಮಾಣಗೊಳ್ಳಬೇಕಿದೆ.

ಇತ್ತೀಚೆಗೆ ಅನ್‌ಬ್ಲಾಕ್‌ ಮಾಡಲಾದ 2.60 ಲಕ್ಷ ಮನೆಗಳ ಪೈಕಿ ಸುಮಾರು 60 ಸಾವಿರ ಮನೆಗಳು ಮಾತ್ರ ಪ್ರಗತಿಯಲ್ಲಿವೆ. 2.19 ಲಕ್ಷ ಮನೆಗಳ ಕಾಮಗಾರಿ ಪೂರ್ಣಗೊಂಡು ಮೊತ್ತ ಬಿಡುಗಡೆಗೆ ಬಾಕಿ ಇದೆ. ಪ್ರವಾಹ ಪೀಡಿತರಿಗಾಗಿ 60 ಸಾವಿರಕ್ಕೂ ಅಧಿಕ ಮನೆಗಳ ನಿರ್ಮಾಣ ಪೂರ್ಣಗೊಳ್ಳಬೇಕಿದೆ. ಈ ಎಲ್ಲ ಯೋಜನೆಗಳಿಗೆ ಸುಮಾರು 5 ಸಾವಿರ ಕೋ.ರೂ. ಅಂದಾಜಿಸಲಾಗಿದ್ದು, ಸದ್ಯ ನಿಗಮಕ್ಕೆ ಮಂಜೂರಾಗಿರುವ ಮೊತ್ತ ಕಡಿಮೆ. ಲಾಕ್‌ಡೌನ್‌ನಿಂದಾಗಿ ಉಳಿದ ಅನುದಾನ ಮಂಜೂರಾಗಬಹುದೇ ಎಂಬ ಆತಂಕ ಇದೆ.

ಶೀಘ್ರ ಯೋಜನೆಗಳ ಅನುಷ್ಠಾನ
ನಿಗಮದ ಚಟುವಟಿಕೆಗಳು ಆರಂಭವಾದ ಅನಂತರ ಆದಷ್ಟು ಶೀಘ್ರ ಯೋಜನೆಗಳ ಅನುಷ್ಠಾನಕ್ಕೆ ಗಮನ ನೀಡಲಾಗುವುದು.
 - ಡಾ | ಸೆಲ್ವಮಣಿ ಆರ್‌.,ಸಿಇಒ, ದ.ಕ.ಜಿ.ಪಂ.

ಟಾಪ್ ನ್ಯೂಸ್

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.