ಸೌತ್‌ ಬ್ರಾಂಕ್ಸ್‌ನಲ್ಲೀಗ ಪ್ರತಿದಿನವೂ ಸರದಿ ಸಾಲು


Team Udayavani, May 1, 2020, 2:38 PM IST

ಸೌತ್‌ ಬ್ರಾಂಕ್ಸ್‌ನಲ್ಲೀಗ ಪ್ರತಿದಿನವೂ ಸರದಿ ಸಾಲು

ಮಣಿಪಾಲ: ಕೋವಿಡ್‌ 19ರಿಂದ ನಲುಗಿ ಹೋಗಿರುವ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕದಲ್ಲಿ ಹೆಚ್ಚು ಸಾವುನೋವು ಸಂಭವಿಸಿದ ನಗರ ನ್ಯೂಯಾರ್ಕ್‌. ಇಲ್ಲಿನ ಸೌತ್‌ ಬ್ರಾಂಕ್ಸ್‌ನಲ್ಲಿ ಈಗ ಕಣ್ಣು ಹಾಯಿಸಿದಲ್ಲೆಲ್ಲ ಜನರು ಕಿ.ಮೀ. ಗಟ್ಟಲೆ ಉದ್ದದ ಸಾಲಿನಲ್ಲಿ ನಿಂತಂತೆ ಕಂಡು ಬರುತ್ತಿದೆ. ಸೂರ್ಯ ಉದಯಿಸುವ ಮೊದಲೇ ಈ ಸಾಲುಗಳು ರೂಪುಗೊಂಡಿರುತ್ತವೆ. ಪ್ರತಿ ಸೇವೆಗೂ ತಾಸುಗಟ್ಟಲೆ ಕಾಯಬೇಕಿದೆ.

ಅಮೆರಿಕದಲ್ಲಿ ಈ ಸ್ಥಿತಿ ಬರುತ್ತದೆಂದು ಅವರ್ಯಾರೂ ಭಾವಿಸಿರಲಿಕ್ಕಿಲ್ಲ. ತಾವು ಮುಂದುವರಿದ ರಾಷ್ಟ್ರದ ಪ್ರಜೆಗಳು ಎಂಬ ಅಹಂ ಹಾಗೆ ಯೋಚಿಸುವುದನ್ನು ತಡೆದಿರಲೂ ಬಹುದು. ಈಗಿನ ವಾಸ್ತವ ಮತ್ತೆ ಆಲೋಚಿಸುವತ್ತ ಪ್ರೇರೇಪಿಸಿದೆ.

ಸೌತ್‌ ಬ್ರಾಂಕ್ಸ್‌ನ ಸ್ಟ್ರೀಟ್‌ ನಂಬರ್‌ 149ರಲ್ಲಿ 70ರ ಹರೆಯದ ಎಡ್ವರ್ಡ್‌ ಹಾಲ್ಸ್‌ ಎಂಬವರು ಅಗತ್ಯ ಕೆಲಸಕ್ಕಾಗಿ ಬಂದಿದ್ದರು. ಹಿಂದಿನ ದಿನ ಕಂಡಿದ್ದ ಸರತಿ ಸಾಲು ಅವರನ್ನು ಮುಂಜಾನೆಯೇ ಬಂದು ನಿಲ್ಲುವಂತೆ ಮಾಡಿತ್ತು. ಅವರು 7.30ಕ್ಕೆ ಬರಲು ಯೋಚಿಸಿದ್ದರು. ಆದರೆ ಸಹೋದರಿ 7 ಗಂಟೆಗೇ ಕಳುಹಿಸಿದ್ದರು. ಇದು ಅನಿವಾರ್ಯತೆಯನ್ನು ಹೇಳುತ್ತಿರುವಂಥ ಪ್ರಸಂಗ.
“ಸಾಲಲ್ಲೇ ಬನ್ನಿ, ಸರತಿ ಸಾಲನ್ನು ತಪ್ಪಿಸಬೇಡಿ, ಸಾವಧಾನ’ ಇಂಥ ಮಾತುಗಳು ಅಮೆರಿಕದಲ್ಲೂ ಕೇಳಿ ಬರುತ್ತಿದೆ. ಜನರು ನೀರನ್ನೂ ಕುಡಿಯಲು ಸಾಲಿನಿಂದ ಹೊರ ಹೋಗುತ್ತಿಲ್ಲ. ಈ ಪೈಕಿ 70, 80ರ ಹರೆಯದ ವೃದ್ಧರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿ ಮಾಡಿದೆ ದಿ ವಾಷಿಂಗ್ಟನ್‌ ಪೋಸ್ಟ್‌.

ಔಷಧ ಅಂಗಡಿ, ಎಟಿಎಂ, ಅಗತ್ಯ ವಸ್ತುಗಳ ಅಂಗಡಿ, ಬ್ಯಾಂಕ್‌, ಅಂಚೆ ಕಚೇರಿ, ವಿವಿಧ ಬಿಲ್‌ ಪಾವತಿ ಹೀಗೆ ಪ್ರತಿ ಸೇವೆಗೂ ತಾಸುಗಟ್ಟಲೆ ಕಾಯ ಬೇಕಾದುದು ಅನಿವಾರ್ಯತೆ.

ಇಬ್ರಾಹಿಂ ಸನೋಗಾ ಎಂಬ ಟ್ಯಾಕ್ಸಿ ಡ್ರೈವರ್‌ ನ ಮಾತು ಕೇಳಿ. ತಾನು ಒಂದು ಬಾಡಿಗೆಗಾಗಿ ವಿಮಾನ ನಿಲ್ದಾಣದ ಟ್ಯಾಕ್ಸಿ ಸಾಲಲ್ಲಿ ಸುಮಾರು 6 ತಾಸು ಕಾಯಬೇಕಾಗಿದೆ. ಇಂಥ ಅನುಭವ ಎಲ್ಲರಿಗೂ ಆಗಿದೆಯಂತೆ. ನಿರುದ್ಯೋಗ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ದೂರವಾಣಿಯಲ್ಲಿ ಓರ್ವನಿಗೆ ಸುಮಾರು 4 ತಾಸು ಬೇಕಾಗುತ್ತಂತೆ.

ಪಟಾಪಟ್‌ ಬದುಕಿಗೆ ಒಗ್ಗಿಕೊಂಡಿದ್ದ ಜೀವಗಳು ಈಗ ನಿಧಾನಗತಿಗೆ ಹೊಂದಿಕೊಳ್ಳಬೇಕಿದೆ. ತಾಳ್ಮೆಯನ್ನೇ ಅಸ್ತ್ರವಾಗಿಟ್ಟುಕೊಳ್ಳಬೇಕಿದೆ. ಬದಲಾಗಿ ಆಕ್ರೋಶ ವ್ಯಕ್ತಪಡಿಸುವುದರಿಂದ ಲಾಭವಿಲ್ಲ ಎಂಬುದೂ ಅರ್ಥವಾಗುತ್ತಿದೆ. ಧ್ವನಿವರ್ಧಕದಲ್ಲಿ ಪ್ರಕಟನೆ ಕೇಳಿ ಬರುತ್ತಿದ್ದಂತೆ ಜನರೆಲ್ಲ ಸಮುಚ್ಚಯಗಳಿಂದ ಹೊರಗೆ ಬಂದು ಸಮುದಾಯದ ವತಿಯಿಂದ ನೀಡಲಾಗುವ ಊಟಕ್ಕೆ ಸಾಲು ನಿಲ್ಲುತ್ತಿದ್ದಾರೆ. ಜನರು ತಮ್ಮ ತಮ್ಮ ಅನುಭವ ವಿನಿಮಯಕ್ಕೆ ತೊಡಗಿದ್ದಾರೆ. ಒಬ್ಬೊಬ್ಬರದೂ ಒಂದೊಂದು ರೀತಿ. ಆದರೆ ಎಲ್ಲರದೂ ಕಷ್ಟದ ಸ್ಥಿತಿಯೇ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.