ಕೋವಿಡ್ ಸೋಂಕು : ಎರಡನೇ ಅಲೆ ಬಂದರೆ ಏನು?
Team Udayavani, Apr 30, 2020, 6:13 PM IST
ನ್ಯೂಯಾರ್ಕ್: ಈಗಾಗಲೇ ಕೋವಿಡ್-19ನಿಂದಾಗಿ ಸಂಪೂರ್ಣವಾಗಿ ಕುಸಿದು ಹೋಗಿರುವ ಅಮೆರಿಕ, ಅದನ್ನು ಮಣಿಸಲು ಎಲ್ಲ ಪ್ರಯತ್ನ ನಡೆಸುತ್ತಿದೆ. ಆದರೆ, ಯಾವ ಕಾರ್ಯತಂತ್ರಗಳೂ ಸಫಲವಾಗುತ್ತಿಲ್ಲ. ಈ ಮಧ್ಯೆಯೇ ಮತ್ತೂಂದು ಆಘಾತಕಾರಿ ವಿಷಯ ಬಹಿರಂಗವಾಗಿದ್ದು, ಸೋಕಿನಿಂದಾಗಿ ತೀವ್ರ ಆತಂಕದಲ್ಲಿರುವ ಅಮೆರಿಕಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸೋಂಕು ಎರಡನೇ ಹಂತಕ್ಕೆ ಕಾಲಿಟ್ಟರೆ ಮುಂದೇನು ಎಂಬ ಚಿಂತೆ ಈಗಾಗಲೇ ದೊಡ್ಡಣ್ಣನನ್ನು ಕಾಡತೊಡಗಿದೆ. ಆದರೆ ಈ ಚಿಂತೆಯನ್ನು ಹೆಚ್ಚುಗೊಳಿಸುವಂತೆ ಸಂಶೋಧನೆಯ ವರದಿಯೊಂದು ಹೊರ ಬಿದ್ದಿದ್ದು, ಎರಡನೇ ಹಂತದಲ್ಲಿ ಕೋವಿಡ್ ಆಕ್ರಮಿಸಿದರೆ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗ್ರತ ಕ್ರಮವಾಗಿ ಯಾವ ಯೋಜನೆಗಳನ್ನು ರೂಪಿಸಿಲ್ಲ ಎನ್ನಲಾಗಿದೆ.
ಶೇ.42 ರಷ್ಟು ಮುಖ್ಯ ಸಿಎಫ್ಒಗಳು ಸೋಂಕಿನ ಎರಡನೇ ಘಟ್ಟವನ್ನು ಎದುರಿಸಲು ಸಿದ್ಧರಾಗಿಲ್ಲ ಎಂಬ ಆತಂಕಕಾರಿ ವಿಷಯವೊಂದನ್ನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ ಎಂದು ಔಟ್ಲುಕ್ ಇಂಡಿಯಾ ವರದಿ ಮಾಡಿದೆ.
ಜಾಗ್ರತೆ ವಹಿಸುವಲ್ಲಿ ನಿರ್ಲಕ್ಷ್ಯ
ಕೇವಲ ಶೇ.22ರಷ್ಟು ಸಿಎಫ್ಒಗಳು ಮಾತ್ರ ಎರಡನೇ ಹಂತದ ಕೋವಿಡ್-19 ಬಿಕ್ಕಟ್ಟಿನ ಸನ್ನಿವೇಶವನ್ನು ನಿಯಂತ್ರಿಸುವ ಯೋಜನೆಗಳನ್ನು ಹೊಂದಿದ್ದಾರೆ. ಆದರೆ, ಆಕಸ್ಮಿಕವಾಗಿ ಸೋಂಕು ಪ್ರಸರಣ ತೀವ್ರಗೊಂಡರೆ ಅದನ್ನು ತಡೆಹಿಡಿಯಲು ಯಾವ ಯೋಜನೆಗಳೂ ಸಹ ಇನ್ನೂ ಸಿದ್ದವಾಗಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಮುನ್ನೆಚ್ಚರ ವಹಿಸುವಲ್ಲಿ ನಿರ್ಲಕ್ಷé ತೋರಿರುವ ಸಿಎಫ್ಒಗಳು ತಮ್ಮ ಕಾರ್ಯಾಚರಣೆಯನ್ನು ಯಾವಾಗ ಪ್ರಾರಂಭಿ ಸಲಿದ್ದಾರೆ ಹಾಗೂ ನೌಕರರ ಸ್ಥಿತಿಗತಿಗಳ ಬಗ್ಗೆ ಏನೆಲ್ಲ ಸುರಕ್ಷತೆಯ ವಿಧಾನವನ್ನು ಕೈಗೊಂಡಿದ್ದಾರೆ ಎಂಬುದನ್ನೂ ಇದುವರೆಗೆ ಬಹಿರಂಗಗೊಳಿಸಿಲ್ಲ ಎಂದಿದೆ ವರದಿ.
ಆದಾಯ-ಲಾಭದ ಬಗ್ಗೆ ಚಿಂತನೆ
2020ಕ್ಕೆ ಅನುಗುಣವಾಗುವಂತೆ ಆದಾಯ ಮತ್ತು ಲಾಭದ ಬಗ್ಗೆ ಚಿಂತಿಸಿರುವ ಸಿಎಫ್ಒಗಳು ಹಣಕಾಸು ಯೋಜನೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಆದಕಾರಣ ವ್ಯಾವಹಾರಿಕ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿರುವ ಸುಮಾರು ಶೇ.42ರಷ್ಟು ಅಧಿಕಾರಿಗಳು ಕೋವಿಡ್-19ರ ಎರಡನೇ ಹಂತದಲ್ಲಿ ಎದುರಾಗಲಿರುವ ಯಾವುದೇ ಸನ್ನಿವೇಶಗಳಿಗೆ ತಯಾರಾಗಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ ಎಂದಿದೆ ಸಮೀಕ್ಷಾ ವರದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ