ಸೋಂಕು ತಡೆಗಾಗಿ ಮಾರ್ಗಸೂಚಿ; ಚೌತಿ ಸಂಭ್ರಮಕ್ಕೆ ಕೋವಿಡ್ ಛಾಯೆ

 ಕಲಾವಿದರ ಆದಾಯಕ್ಕೆ ಮುಳುವು; ಸರಕಾರದ ನಿರ್ಧಾರಗಳಿಂದ ಗೊಂದಲ

Team Udayavani, Aug 21, 2020, 5:48 AM IST

ಸೋಂಕು ತಡೆಗಾಗಿ ಮಾರ್ಗಸೂಚಿ; ಚೌತಿ ಸಂಭ್ರಮಕ್ಕೆ ಕೋವಿಡ್ ಛಾಯೆ

ಕಾರ್ಕಳ: ಗಣೇಶ ಹಬ್ಬ ಬಂತೆಂದರೆ, ತಿಂಗಳುಗಳ ಕಾಲ ಹಳ್ಳಿ, ನಗರಗಳ ಗಲ್ಲಿ, ಓಣಿಗಳಲ್ಲಿ ನಿತ್ಯ ಸದ್ದು ಗದ್ದಲ. ಸಾಂಸ್ಕೃತಿಕ ಕಾರ್ಯಕ್ರಮ, ಆರ್ಕೆಸ್ಟ್ರಾಕ್ಕೆ ಹೆಚ್ಚಿನ ಬೇಡಿಕೆ. ಆದರೆ ಇದಕ್ಕೆಲ್ಲ ಕೊರೊನಾ ಹೊಡೆತ ಬಾಧಿಸಿದೆ. ಸರಕಾರದ ಕೊನೆ ಕ್ಷಣದ ಆದೇಶದಿಂದಲೂ ಗೊಂದಲಗಳು ಏರ್ಪಟ್ಟಿವೆ.

ಭಕ್ತಿ ಇರುವಲ್ಲಿ ಭಯ!
ಸರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದರೂ ಮೂರ್ತಿ ಸ್ಥಾಪನೆ, ಧಾರ್ಮಿಕ ವಿಧಾನಗಳಿಗಷ್ಟೇ ಸೀಮಿತ. ಮೆರವಣಿಗೆ, ಆರ್ಕೆಸ್ಟ್ರಾಗಳಿಗೆ ಈ ಬಾರಿ ಅವಕಾಶವಿಲ್ಲ. ಸೋಂಕು ತಡೆಗಾಗಿ ಮಾರ್ಗ ಸೂಚಿಗಳನ್ನು ಆಯೋಜಕರು, ಭಕ್ತರು ಅಳವಡಿಸಿಕೊಳ್ಳುವುದು ಅನಿವಾರ್ಯ ವಾಗಿದೆ. ಕೊರೊನಾದಿಂದಾಗಿ ಭಕ್ತಿ ಇರು ವಲ್ಲಿ ಈಗ ಭಯದ ವಾತಾವರಣವಿದೆ.

ಗಣೇಶ ಮೂರ್ತಿಗೆ ದಿಢೀರ್‌ ಬೇಡಿಕೆ
ಸಾರ್ವಜನಿಕ ಮೂರ್ತಿ ಸ್ಥಾಪನೆಗೆ ಕೊನೆ ಕ್ಷಣದಲ್ಲಿ ಸರಕಾರ ಅವಕಾಶ ನೀಡಿದ್ದರಿಂದ ಮೂರ್ತಿ ತಯಾರಕರು ಮತ್ತು ಆಯೋಜಕರು ಗೊಂದಲಕ್ಕೆ ಒಳಗಾಗಿದ್ದಾರೆ. ಪರಿಷ್ಕೃತ ಆದೇಶ ಹೊರಬಿದ್ದ ಮೇಲೆ 2 ದಿನಗಳಿಂದ ಮೂರ್ತಿಗಳಿಗೆ ಬೇಡಿಕೆ ಬರಲಾರಂಭಿಸಿದೆ. ಇನ್ನು ಕೆಲವರು ಫೆಬ್ರವರಿ ಮಾಘ ಮಾಸ ಹಾಗೂ ನವರಾತ್ರಿ ಉತ್ಸವದ ಚೌತಿಯಂದು ಹಬ್ಬ ಆಚರಿಸಲು ಉದ್ದೇಶಿಸಿದ್ದಾರೆ.

ಮನೆಗಳಿಂದ ಬೇಡಿಕೆ
ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ದೊಡ್ಡ ಗಾತ್ರದ ಗಣಪತಿ ಹಾಗೂ ಮನೆಗಳಲ್ಲಿ ಪೂಜಿಸುವವರು ಸಣ್ಣ ಗಾತ್ರದ ಮೂರ್ತಿಗೆ ಬೇಡಿಕೆ ಇಡುತ್ತಿದ್ದರು. ಈ ಬಾರಿ ಸಾರ್ವಜನಿಕರಿಂದ ಬೇಡಿಕೆ ಕಡಿಮೆ, ಮನೆಗಳಲ್ಲಿ ಪೂಜಿಸುವವರಿಂದ ಬೇಡಿಕೆ ಕಮ್ಮಿಯಾಗಿಲ್ಲ. ಕಳೆದ ವರ್ಷ 240 ಮೂರ್ತಿಗಳಿಗೆ ಬೇಡಿಕೆಯಿತ್ತು. ದೊಡ್ಡ ಗಾತ್ರದ್ದೂ ಅದರಲ್ಲಿ ಸೇರಿತ್ತು. ಈ ಬಾರಿ 180ರಿಂದ 190ಕ್ಕೆ ಇಳಿದಿದೆ. -ಪ್ರೇಮಾನಂದ ಎಣ್ಣೆಹೊಳೆ, ಮೂರ್ತಿ ತಯಾರಕರು

ಬೆಳ್ಮಣ್‌: ಕೋವಿಡ್ ಆತಂಕದಿಂದಾಗಿ ಸಾರ್ವಜನಿಕ ಗಣೇಶೋತ್ಸವಗಳು ಅನಿಶ್ಚಿತ‌ತೆಯಲ್ಲಿದ್ದರೂ ಬೆಳ್ಮಣ್‌ನಲ್ಲಿ ಮೂರ್ತಿ ತಯಾರಿಕೆ ಅಂಗಡಿ ಹೊಂದಿರುವ ಕಲಾವಿದ ಬೋಳ ಸುಧಾಕರ ಆಚಾರ್ಯ ಅವರು ಈಗಾಗಲೇ 20 ವಿಗ್ರಹಗಳನ್ನು ತಯಾರಿಸಿದ್ದಾರೆ. ಕಳೆದ ವರ್ಷ 23 ವಿಗ್ರಹಗಳನ್ನು ತಯಾರಿಸಿದ್ದ ಸುಧಾಕರ ಆಚಾರ್ಯ ಅವರು ಈ ಬಾರಿ 19 ವಿಗ್ರಹಗಳನ್ನು ಬೆಳ್ಮಣ್‌ನಲ್ಲಿ ತಯಾರಿಸುತ್ತಿದ್ದಾರೆ. ಹುಟ್ಟೂರು ಬೋಳ ವಂಜಾರಕಟ್ಟೆಯ ವಿಗ್ರಹ ಅಲ್ಲೇ ಸಹೋದರ ತಯಾರಿಸುತ್ತಿದ್ದಾರೆ. ಈ ವರ್ಷ ಕೇವಲ ವಿಗ್ರಹ ಅಳತೆಯ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸಗಳು ಆಗಿಲ್ಲ ಎಂದಿದ್ದಾರೆ ಸುಧಾಕರ್‌.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.