ಕುಂದಾಪುರ: ಮತ್ತೆ ಬಂತು ಲೆಕ್ಕದ್ದೇ ಲಸಿಕೆ
Team Udayavani, May 9, 2021, 6:15 AM IST
ಕುಂದಾಪುರ: ಇಲ್ಲಿನ ಬೋರ್ಡ್ ಹೈಸ್ಕೂಲ್ನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಲಸಿಕೆ ವಿತರಣೆ ಲೆಕ್ಕಾಚಾರದಲ್ಲಿ ನಡೆಯಿತು. ಇಲಾಖೆಯಿಂದ ದೊರೆತದ್ದೇ ಲೆಕ್ಕದ ಲಸಿಕೆ. ಆದರೆ ಭಾರೀ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಆದ್ದರಿಂದ ಮೊದಲು ಬಂದವರಿಗಷ್ಟೇ ಲಸಿಕೆ ನೀಡಲಾಯಿತು. ಅದರಲ್ಲೂ ಈ ಮೊದಲು ಕೋವ್ಯಾಕ್ಸಿನ್ ತೆಗೆದುಕೊಂಡವರು ಎರಡನೆಯ
ಡೋಸ್ಗೆ ಪರದಾಡುವಂತಾಗಿದೆ.
ಕೋವ್ಯಾಕ್ಸಿನ್ ಕಳೆದ ಕೆಲವು ದಿನಗಳಿಂದ ಬರುತ್ತಿಲ್ಲ. ಆದ್ದರಿಂದ ಎರಡನೇ ಲಸಿಕೆ ತೆಗೆದುಕೊಳ್ಳುವವರಿಗೆ ಪ್ರಥಮ ಆದ್ಯತೆ ನೀಡಲಾಗಿತ್ತು.
ಶನಿವಾರ ಕೋವಿಶೀಲ್ಡ್ 44 ಮಂದಿಗೆ, ಕೋವ್ಯಾಕ್ಸಿನ್ 50 ಮಂದಿಗೆ ನೀಡಲಾಯಿತು.
ರವಿವಾರ ಅಥವಾ ಸೋಮವಾರ ಬರುವವರು ಈ ನಂಬರಿಗೆ 9449012730, 9844783053 ಪೋನ್ ಮಾಡಿ ವ್ಯಾಕ್ಸಿನ್ ಇದೆಯೇ ಎಂದು ತಿಳಿದುಕೊಂಡು ಬರಬಹುದು. ಬರುವಾಗ ಆಧಾರ್ ಕಾರ್ಡ್ ತರಬೇಕಾಗುತ್ತದೆ. ಸೇವಾ ಭಾರತಿ ಕುಂದಾಪುರ, ಕಲಾಕ್ಷೇತ್ರ ಕುಂದಾಪುರ, ರೆಡ್ಕ್ರಾಸ್ ಸೊಸೈಟಿ ಕುಂದಾಪುರದ ಸದಸ್ಯರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ