ಸಾಗರ: ಕೋವಿಡ್ ಲಸಿಕೆ ಹಾಕಿಸಿಕೊಂಡ ವಿಶೇಷ ಚೇತನ ಮಕ್ಕಳು
Team Udayavani, Jan 13, 2022, 8:22 PM IST
ಸಾಗರ: ಸರ್ಕಾರ 15 ವರ್ಷ ದಾಟಿದ ಮಕ್ಕಳಿಗೆ ಕೋವಿಡ್ ಪ್ರತಿಬಂಧಕ ಲಸಿಕೆ ಹಾಕಲು ನಿರ್ಧರಿಸಿದ ಬೆನ್ನಲ್ಲಿ ತಾಲೂಕಿನಲ್ಲಿ ಗುರುವಾರ ಗಮನಿಸಲೇಬೇಕಾದ ಪ್ರಸಂಗವೊಂದು ನಡೆಯಿತು.
ತಾಲೂಕಿನ ಲಸಿಕಾ ಕಾರ್ಯಕ್ರಮ ಭೀಮನಕೋಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಂಗರವಳ್ಳಿ ಗ್ರಾಮದ ಚೈತನ್ಯ ವಿಶೇಷ ಶಿಕ್ಷಣ ಶಾಲೆಗೆ ತೆರಳಿದೆ. ಅಲ್ಲಿನ ಲಸಿಕೆಗೆ ಅರ್ಹತೆ ಪಡೆದ ಮಕ್ಕಳಿಗೆ ಡಾ. ವಾಸುದೇವ್, ಡಾ. ಆದಿತ್ಯ, ಅಖಿಲ, ಶೋಭಾ ಅವರ ತಂಡ ಕೊವ್ಯಾಕ್ಸಿನ್ ಲಸಿಕೆ ನೀಡಿತು.
ಮಕ್ಕಳು ಬೆದರದೆ, ಕಿರಿಕಿರಿ ಮಾಡದೆ ಸಮಾಧಾನದಿಂದ ಲಸಿಕೆ ಪಡೆದರು ಎಂದು ಲಸಿಕಾ ಕಾರ್ಯಕ್ರಮದ ನಿರ್ವಹಣೆ ನಡೆಸುತ್ತಿರುವ ಮ.ಸ. ನಂಜುಂಡಸ್ವಾಮಿ ಪತ್ರಿಕೆಗೆ ತಿಳಿಸಿದರು. ಈ ವೇಳೆ ಸಂಸ್ಥೆಯ ಮುಖ್ಯಸ್ಥರಾದ ಶಾಂತಲಾ ಸುರೇಶ್, ಮಲ್ಲಿಕಾರ್ಜುನ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ