ಕೋವಿಡ್‌: ಈಗ ವಿಶ್ವದಲ್ಲೇ ಎರಡನೇ ಸ್ಥಾನಿಯಾದ ಬ್ರಜಿಲ್‌


Team Udayavani, Jun 14, 2020, 4:52 PM IST

ಕೋವಿಡ್‌: ಈಗ ವಿಶ್ವದಲ್ಲೇ ಎರಡನೇ ಸ್ಥಾನಿಯಾದ ಬ್ರಜಿಲ್‌

ರಿಯೋ ಡಿ ಜನೈರೋ: ಕೋವಿಡ್‌ ಪ್ರಕರಣಗಳ ತೀವ್ರವಾಗಿ ಏರುತ್ತಿರುವಂತೆ ಜಗತ್ತಿನ ಎರಡನೇ ಹಾಟ್‌ಸ್ಪಾಟ್‌ ಆಗಿ ಬ್ರಜಿಲ್‌ ಬದಲಾಗಿದೆ. ಇದರೊಂದಿಗೆ ಅಮೆರಿಕ ಖಂಡವೇ ಕೋವಿಡ್‌ ಹಾವಳಿ ತೀವ್ರವಾಗಿರುವ ಪ್ರಮುಖ ತಾಣವಾಗಿ ಗುರುತಿಸಲ್ಪಟ್ಟಿದೆ.

ಶುಕ್ರವಾರ ಒಂದೇ ದಿನ ಬ್ರಜಿಲ್‌ನಲ್ಲಿ 909 ಸಾವುಗಳು ಸಂಭವಿಸಿದ್ದು, 41,828 ಪ್ರಕರಣಗಳು ವರದಿಯಾಗಿದ್ದವು. ಈ ಮೂಲಕ ಸಂಖ್ಯೆ ಲೆಕ್ಕಾಚಾರದಲ್ಲಿ ಬ್ರಿಟನ್‌ ಅನ್ನು ಬ್ರಜಿಲ್‌ ಮೀರಿಸಿದೆ. ಮೊದಲನೇ ಸ್ಥಾನಿಯಾಗಿ ಅಮೆರಿಕವಿದೆ. ಅಧಿಕೃತ ಮೂಲಗಳು ಪ್ರಕಾರ, ಕಳೆದ ಹಲವು ದಿನಗಳಿಂದ ಬ್ರಜಿಲ್‌ನಲ್ಲಿ ಕೋವಿಡ್‌ ಸೋಂಕು ಪೀಡಿತರ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಅಲ್ಲದೇ ನೈಜ ಪರಿಸ್ಥಿತಿಯು ಈಗಿನ ಅಂಕಿ ಅಂಶಕ್ಕಿಂತ 10-15 ಪಟ್ಟು ಹೆಚ್ಚಿರಬಹುದು ಎಂದು ಹೇಳಲಾಗಿದೆ. ದಕ್ಷಿಣ ಅಮೆರಿಕದ ಅತಿ ದೊಡ್ಡ ದೇಶವಾಗಿರುವ ಮತ್ತು ಆರ್ಥಿಕವಾಗಿಯೂ ಬಲಿಷ್ಠವಾಗಿರುವ ಬ್ರಜಿಲ್‌ನಲ್ಲಿ ಕೋವಿಡ್‌ ಸೋಂಕು ಲೆಕ್ಕಕ್ಕೇ ಸಿಗದಂತೆ ಹಬ್ಬುತ್ತಿರುವುದು ಅಲ್ಲಿನ ಆಡಳಿತಕ್ಕೆ ತೀವ್ರ ಆತಂಕ ತಂದಿದೆ. ಒಟ್ಟು ಸೋಂಕು ಪ್ರಕರಣಗಳು 8,28,810ಕ್ಕೇರಿವೆ.

ಬ್ರಜಿಲ್‌ನಲ್ಲಿ ಮೊದಲನೇ ಬಾರಿಗೆ ಕೋವಿಡ್‌ ಸೋಂಕು ಮೂರೂವರೆ ತಿಂಗಳ ಹಿಂದೆ ವರದಿಯಾಗಿತ್ತು. ಆಗ ಕೋವಿಡ್‌ ಸೋಂಕು ನಿಯಂತ್ರಣದಲ್ಲಿದೆ ಎಂದು ಕಂಡಿದ್ದರೆ, ಇಂದು ಕೋವಿಡ್‌ ಸೋಂಕಿಗೆ ಯಾವುದೇ ನಿಯಂತ್ರಣವೇ ಇಲ್ಲವಾಗಿದೆ. ಈ ವಿಚಾರದಲ್ಲಿ ಸರಕಾರ ವನ್ನು ದೂರುವುದಕ್ಕೂ ಬಾರದು, ದೂರದೇ ಇರುವುದಕ್ಕೂ ಬಾರದು ಎಂದು ಪರಿಣತರು ಹೇಳುತ್ತಿದ್ದಾರೆ.

ಲಾಕ್‌ಡೌನ್‌ ಸಡಿಲ
ಪ್ರಕರಣಗಳ ಸಂಖ್ಯೆ ಏರುತ್ತಿದ್ದರೂ ಬ್ರಜಿಲ್‌ ಕ್ಯಾರೇ ಅಂದಿಲ್ಲ. ಅದು ಆರ್ಥಿಕ ಹಿನ್ನಡೆಯ ಆತಂಕ ಎದುರಿಸುತ್ತಿರುವುದರಿಂದ ಒಂದೊಂದಾಗಿ ವ್ಯವಹಾರ, ಉದ್ಯಮ ವಲಯಗಳನ್ನು ತೆರೆಯುತ್ತಿದೆ. ಪ್ರಮುಖ ನಗರಗಳಾದ ರಿಯೋ ಡಿ ಜನೈರೋ ಮತ್ತು ಸಾವೋ ಪೌಲೋ ನಗರದಲ್ಲಿ ಆರ್ಥಿಕತೆ ಪುನರಾರಂಭಿಸುವ ಎಲ್ಲ ಕ್ರಮಗಳನ್ನು ಮುಕ್ತವಾಗಿರಿಸಲಾಗಿದೆ. ಇನ್ನು ಇದೇ ನಗರಗಳಲ್ಲಿ ಕೋವಿಡ್‌ ಸೋಂಕಿನ ಪ್ರಮಾಣವೂ ಅತಿ ಹೆಚ್ಚಾಗಿದ್ದು, ಸರಕಾರ ಲಾಕ್‌ಡೌನ್‌ ಸಡಿಲಗೊಳಿಸಿದ ಕ್ರಮಗಳು ತೀವ್ರ ಆತಂಕವನ್ನೂ ಸೃಷ್ಟಿಸಿವೆ. ಸಾವೋ ಪೌಲೋದಲ್ಲಿ 46 ಲಕ್ಷ ನಿವಾಸಿಗಳಿದ್ದು, ಇವರಲ್ಲಿ 1.67 ಲಕ್ಷ ಮಂದಿಗೆ ಕೋವಿಡ್‌ ತಗುಲಿದೆ. ಈ ನಗರದಲ್ಲಿ ಈವರೆಗೆ 10,368 ಮಂದಿ ಮೃತಪಟ್ಟಿದ್ದಾರೆ. ರಿಯೋ ಡಿ ಜನೈರೋದಲ್ಲಿ 78 ಸಾವಿರ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 7,417 ಸಾವುಗಳು ಸಂಭವಿಸಿವೆ.

ಆ ದೇಶದಲ್ಲಿ ಲಾಕ್‌ಡೌನ್‌ ಸಡಿಲಿಕೆ ಬಗ್ಗೆ ಪರ ವಿರೋಧ ಅಭಿಪ್ರಾಯಗಳಿದ್ದರೂ, ಅಲ್ಲಿನ ಹೂಡಿಕೆ ಕಂಪೆನಿಯೊಂದು ನಡೆಸಿದ ಸಮೀಕ್ಷೆ ಪ್ರಕಾರ ಲಾಕ್‌ಡೌನ್‌ ತೆರವಿಗೆ ಶೇ.52 ಮಂದಿ ಬೆಂಬಲಿಸಿದ್ದಾರಂತೆ. ಶೇ.44ರಷ್ಟು ಮಂದಿ ಲಾಕ್‌ಡೌನ್‌ ತೆರೆಯುವುದು ಬೇಡ ಎಂದು ಹೇಳಿದ್ದಾರಂತೆ. ಕಳೆದ ವಾರ ಇದೇ ಕಂಪೆನಿ ಸಮೀಕ್ಷೆ ನಡೆಸಿದ್ದಾಗ ಕೋವಿಡ್‌ ಅನ್ನು ದೂರ ಮಾಡಲು ಸಾಮಾಜಿಕ ಅಂತರ ಅಗತ್ಯ ಎಂದು ಶೇ.76ರಷ್ಟು ಮಂದಿ ಹೇಳಿದ್ದರಂತೆ.

ಟಾಪ್ ನ್ಯೂಸ್

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.