ಕೋವಿಡ್ ನ ಸುದೀರ್ಘ ಲಾಕ್ ಡೌನ್ ಪ್ರೀತಿಸಲು ಕಲಿಸಿದೆ…

ಹಸಿರ ಪರಿಸರದ ನಡುವೆ ಹೂಗಿಡ, ತೋಟದ ಕೆಲಸ ಮಾಡುತ್ತಾ ಪ್ರಕೃತಿಯ ಜೊತೆ ಅವಿನಾಭಾವ ಸಂಬಂಧ ರೂಪಿಸಿಕೊಂಡಿದ್ದೇನೆ.

Team Udayavani, May 4, 2020, 3:38 PM IST

ಕೋವಿಡ್ ನ ಸುದೀರ್ಘ ಲಾಕ್ ಡೌನ್ ಪ್ರೀತಿಸಲು ಕಲಿಸಿದೆ…

Representative Image

ವಿಶ್ವಕ್ಕೆ ಕಾಣದ ವಿಷಜಂತುವಿನ ಆಗಮನವಾಗಿದೆ. ಬದುಕಲು ಹೊರಗೆ ಹೋಗಿ ದುಡಿಯುತ್ತಿದ್ದವರು ಇಂದು ಬದುಕುಳಿಯಲು ಮನೆಯ ಒಳಗೆ ಕುಳಿತುಕೊಳ್ಳುವ ಪ್ರಮೇಯ ಒದಗಿ ಬಂದಿದೆ. ಕಾಲೇಜು ನಡೆಯುತ್ತಿದ್ದ ಸಂದರ್ಭದಲ್ಲಿ ನಾವಾಗಿಯೇ ರಜೆ ಮಾಡಿ ಮನೆಯಲ್ಲಿ ಕುಳಿತುಕೊಳ್ಳೋಣ ಎನ್ನುವಷ್ಟರ ಮಟ್ಟಿಗೆ ಕೆಲಸದ ಒತ್ತಡಗಳು ಅಂದಾಜು ಮಾಡಿಸಿಬಿಟ್ಟಿದ್ದವು. ಆದರೆ ಇಂದು ಸಾಕಪ್ಪ ಸಾಕು ಅನ್ನುವಂತಿದ್ದರೂ ಎಲ್ಲಾ ದಿನಗಳು ರಜೆಯಾಗಿಯೇ ಉಳಿದುಬಿಟ್ಟಿದೆ.

ಸಮಯ ಹಾಗೂ ಸಮುದ್ರದ ಅಲೆಗಳನ್ನು ಯಾರಿಂದಲೂ ತಡೆ ಹಿಡಿಯಲು ಸಾಧ್ಯವಿಲ್ಲ. ಸಮಯವನ್ನು ನಾವು ಯಾವ ರೀತಿ ಸದುಪಯೋಗಪಡಿಸಿಕೊಳ್ಳುತ್ತೇವೆ ಎಂಬುವುದರ ಮೇಲೆ ನಮ್ಮ ಭವಿಷ್ಯದ ಯಶಸ್ಸು ನಿಂತಿದೆ. ಕೋವಿಡ್ ವೈರಸ್ ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ದೇಶವ್ಯಾಪಿ ಲಾಕ್ ಡೌನ್ ಸಂದರ್ಭವು ನನಗೆ ಅನೇಕ ರೀತಿಯ ಹೊಸ ವಿಚಾರಗಳನ್ನು ಕಲಿಯಲು ಪೂರಕವಾಯಿತು.

ಮೂಕ ಪ್ರಾಣಿಗಳೂ ಮಾತಾಡುತ್ತವೆ. ಆದರೆ ಅದನ್ನು ಕೇಳುವ ಕಿವಿ ನಮ್ಮದಾಗಬೇಕು ಅನ್ನುತ್ತಾರೆ ಹಿರಿಯರು. ಅದೇ ರೀತಿ ಮನೆಯಲ್ಲಿರುವ ಬೆಕ್ಕು, ನಾಯಿ, ದನಗಳ ಜೊತೆ ಉತ್ತಮ ರೀತಿಯಲ್ಲಿ ಸಮಯವನ್ನು ವ್ಯಯ ಮಾಡುವ ಭಾಗ್ಯವು ಒದಗಿದೆ. ಅದೇ ರೀತಿ ಮನದ ಭಾವನೆಗೆ ಪ್ರಕೃತಿಯೂ ಕೆಲವೊಮ್ಮೆ ಸ್ಪಂದಿಸುತ್ತದೆಯಂತೆ. ಹಾಗಿರುವಾಗ ಹಸಿರ ಪರಿಸರದ ನಡುವೆ ಹೂಗಿಡ, ತೋಟದ ಕೆಲಸ ಮಾಡುತ್ತಾ ಪ್ರಕೃತಿಯ ಜೊತೆ ಅವಿನಾಭಾವ ಸಂಬಂಧ ರೂಪಿಸಿಕೊಂಡಿದ್ದೇನೆ.

ಹೆಣ್ಣು ಮಕ್ಕಳು ಅಂದ ಮೇಲೆ ಅಡುಗೆ ಕೆಲಸದಲ್ಲಿ ನಿಪುಣರಿರಬೇಕು ಎನ್ನುವ ಅಜ್ಜಿಯ ಸಲಹೆಯಂತೆ ಈ ರಜೆಯಲ್ಲಿ ಹೆಸರಿಲ್ಲದ ಅನೇಕ ಅನಾಮಧೇಯ ರೆಸಿಪಿಗಳನ್ನು ಕೂಡ ಕಲಿತು ಅದಕ್ಕೆ ನಾವಾಗಿಯೇ ನಾಮಕರಣ ಮಾಡಿಕೊಂಡ ತೃಪ್ತಿಯ ಭಾವ ನಮ್ಮಲ್ಲಿದೆ. ಅಷ್ಟೇ ಏಕೆ ಮನೆಯ ಸುತ್ತಮುತ್ತ ಸ್ವಚ್ಛಗೊಳಿಸುವುದರಲ್ಲಿ ಈಗ ಸಮಯ ಕಳೆಯುವುದೇ ತಿಳಿಯುವುದಿಲ್ಲ.

ನಾನು ಸಾಹಿತ್ಯಾಸಕ್ತರಾಗಿರುವುದರಿಂದ ಬರವಣಿಗೆ ಮತ್ತು ಓದುವಿಕೆಯ ಮೇಲೆ ಒಲವು ಹೆಚ್ಚು. ಈ ಸಂದರ್ಭದಲ್ಲಿ ನೆಚ್ಚಿನ ಲೇಖಕ ಎ.ಆರ್. ಮಣಿಕಾಂತ್ ಅವರ ನವಿಲುಗರಿ ಪುಸ್ತಕ ಮತ್ತು ನಾಗೇಶ್ ಶೆಟ್ಟಿಯವರ ಡೇಂಜರ್ ಝೋನ್ ಕೃತಿಯು ಮನಸ್ಸಿಗೆ ಅತ್ಯಂತ ಮುದ ನೀಡಿತು. ಈ ರಜೆಯು ನನ್ನೊಳಗಿನ ಅನೇಕ ಭಾವನೆಗಳಿಗೆ ಲೇಖನದ ಮುಖಾಂತರ ರೂಪ ಕೊಡುವಲ್ಲಿ ಪ್ರೋತ್ಸಾಹ ನೀಡಿತು.ದಿನನಿತ್ಯದ ಕೆಲಸಗಳನ್ನು ಮನೆಯಲ್ಲೇ ಕೂತು ನಿರ್ವಹಿಸುವ ನಮಗೆ ಮನೆಯೇ ಶ್ರೀ ರಕ್ಷೆಯಾಗಿರಲಿ ಎಂಬ ಆಶಯ.

ಅರ್ಪಿತಾ ಕುಂದರ್
ಪ್ರಥಮ ಎಮ್.ಸಿ.ಜೆ ವಿಭಾಗ
ವಿವೇಕಾನಂದ ಕಾಲೇಜು
ನೆಹರುನಗರ ಪುತ್ತೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.