ಬೆಳೆ ಪರಿಹಾರ ಸೀಮಿತ! ಲಾಕ್ಡೌನ್ ಅವಧಿಯ ಹಾನಿಗೆ ಮಾತ್ರ
Team Udayavani, May 26, 2021, 7:15 AM IST
ದಾವಣಗೆರೆ: ಕೊರೊನಾ 2ನೇ ಅಲೆಯಲ್ಲಿ ನಷ್ಟವಾಗಿರುವ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ರಾಜ್ಯ ಸರಕಾರ ಪರಿಹಾರ ಘೋಷಿಸಿದೆ. ಆದರೆ ಇದು ಕೇವಲ ಲಾಕ್ ಡೌನ್ ಅವಧಿಯಲ್ಲಿ ತೀವ್ರ ತರವಾಗಿ ಹಾನಿಗೀಡಾದ ಬೆಳೆಗೆ ಮಾತ್ರ ಸಿಗಲಿದೆ ಎಂಬ ಷರತ್ತು ವಿಧಿಸಲಾಗಿದೆ.
ಪರಿಹಾರ ವಿತರಣೆಗೆ ರಾಜ್ಯ ಸರಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಬೆಳೆ ಸಮೀಕ್ಷೆ ಯಲ್ಲಿ ದಾಖಲಾದ ರೈತರಿಗಷ್ಟೇ ಪರಿಹಾರ ನೀಡಲು ಆದೇಶಿಸಿದೆ. ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕಟಾವಿಗೆ ಬಂದಿರುವ ಫಸಲನ್ನು ಮಾತ್ರ ಪರಿಗಣಿಸಬೇಕು. ಇದರಲ್ಲಿ ಬಾಳೆ ಮತ್ತು ಈರುಳ್ಳಿ ಬೆಳೆಗೆ ಮೇಯಲ್ಲಿ ಕಟಾವಿಗೆ ಬಂದಿರುವ ಫಸಲಿಗೆ ಮಾತ್ರ ಪರಿಹಾರ ನೀಡಬೇಕೆಂದು ಸೂಚಿಸಿದೆ.
ಗರಿಷ್ಠ 1 ಹೆಕ್ಟೇರ್ಗೆ ಮಿತಗೊಳಿಸಿ ಪ್ರತೀ ಹೆಕ್ಟೇರ್ಗೆ 10 ಸಾವಿರ ರೂ. ಪರಿಹಾರ ನಿಗದಿಪಡಿಸಲಾಗಿದೆ. ಕನಿಷ್ಠ ಪರಿಹಾರ ಮೊತ್ತ 2,000 ರೂ. ಇದ್ದು, ಹೊಲದ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರ ನೀಡಲು ಸೂಚಿಸಲಾಗಿದೆ.
ಇವುಗಳಿಗೆ ಪರಿಹಾರ
ಪರಿಹಾರ ನೀಡಬಹುದಾದ ಹಣ್ಣು ಮತ್ತು ತರಕಾರಿಗಳ ಪಟ್ಟಿಯನ್ನು ಸರಕಾರವೇ ಸಿದ್ಧಪಡಿಸಿದೆ. ಹಣ್ಣುಗಳು: ಮಾವು, ಸಪೋಟಾ, ಅಂಜೂರ, ಕಲ್ಲಂಗಡಿ, ಕರಬೂಜ, ದಾಳಿಂಬೆ, ಪೇರಲೆ, ನಿಂಬೆ, ಮೂಸಂಬಿ, ದ್ರಾಕ್ಷಿ, ಅನಾನಸು, ಪಪ್ಪಾಯಿ, ಬಾಳೆ.
ತರಕಾರಿ: ಈರುಳ್ಳಿ, ಟೊಮೆಟೋ, ಮೆಣಸು, ಸೌತೆ, ಬದನೆ, ಹೂಕೋಸು, ಎಲೆ ಕೋಸು, ಬೆಂಡೆ, ಕುಂಬಳ, ಹೀರೆ, ಹಾಗಲ, ಸೋರೆ, ಕ್ಯಾರೆಟ್, ಗೆಣಸು, ಬೀನ್ಸ್, ದಪ್ಪ ಮೆಣಸಿನ ಕಾಯಿ, ಬೀಟ್ರೂಟ್, ನುಗ್ಗೆ , ನವಿಲುಕೋಸು, ತೊಂಡೆ, ಮೂಲಂಗಿ, ಸೊಪ್ಪು ತರಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
MUST WATCH
ಹೊಸ ಸೇರ್ಪಡೆ
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ