ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ
Team Udayavani, Sep 19, 2021, 1:14 PM IST
ದಾಂಡೇಲಿ : ಗಣೇಶನನ್ನು ಹೀಗೂ ಆರಾಧಿಸಬಹುದಲ್ವೆ ಎಂದೆನಿಸುತ್ತೆ ಇಲ್ಲಿಯ ಗಣಪತಿ ಆರಾಧನೆ. ಗಣೇಶನ ಆರಾಧನೆಯ ಜೊತೆಗೆ ಬಾಲಗಂಗಾಧರ ತಿಲಕರ ಆಶಯದಂತೆ ಜನಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ, ದಾಂಡೇಲಿಯ ಮಾರುತಿ ನಗರದ ನಿವಾಸಿಗಳಾದ ಅಶ್ವಿನಿ ಬಸವರಾಜ ಡಗ್ಗೆನ್ನವರ ಅವರ ಕುಟುಂಬ.
ಸದಾ ಕ್ರೀಯಾಶೀಲ ಕಾರ್ಯಚಟುವಟಿಕೆಯ ಮೂಲಕ ಗಮನ ಸೆಳೆದಿರುವ ಅಶ್ವಿನಿಯವರು ಈ ಬಾರಿ ಅವರ ಪತಿ ಬಸವರಾಜ ಹಾಗೂ ಮನೆ ಮಂದಿಯ ಸಹಕಾರದಲ್ಲಿ ಗಣೇಶನ ಆರಾಧನೆಯ ಜೊತೆಗೆ ಕೊರೊನಾದ ಬಗ್ಗೆ ಹಾಗೂ ಕೋವಿಡ್ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದ ವಿಭಿನ್ನ ಪ್ರಯತ್ನವನ್ನು ಮಾಡಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ :ಸಿಖ್ ನಾಯಕರೇ ಪಂಜಾಬ್ ಮುಖ್ಯಮಂತ್ರಿಯಾಬೇಕು: ಸಿಎಂ ರೇಸ್ ನಿಂದ ಹಿಂದೆ ಸರಿದ ಅಂಬಿಕಾ ಸೋನಿ
ಅವರ ಈ ಜಾಗೃತಿಯ ಕಾರ್ಯವನ್ನು ನೋಡಲು ಸಾರ್ವಜನಿಕರೂ ಅಶ್ವಿನಿಯವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಹನ್ನೊಂದು ದಿನಗಳವರೆಗೆ ಆಚರಿಸಲ್ಪಡುವ ಗಣೇಶನನ್ನು ಭಾನುವಾರ ವಿಸರ್ಜನೆ ಮಾಡಲಿದ್ದಾರೆ. ಒಟ್ಟಿನಲ್ಲಿ ಕೊರೊನಾ ಮತ್ತು ಕೋವಿಡ್ ಲಸಿಕೆಯ ಬಗ್ಗೆ ಜಾಗೃತಿಯ ವೈಭವನ್ನೊಮ್ಮೆ ನೋಡ ಬನ್ನಿ ಎಂಬಂತಿದೆ ಈ ದೃಶ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್ನದ್ದು: ಮೀನಾಕ್ಷಿ ಲೇಖಿ