ದೀಪದ ತೆರದ ಬೆಳಗಲಿ ಭಾರತ..
Team Udayavani, Nov 14, 2020, 3:18 PM IST
ಹಚ್ಚೋಣ ಹರುಷದಿಂದ ದೀಪವ
ಓಡಿಸೋಣ ಸಂಕಷ್ಟವೆಂಬ ಕತ್ತಲನ್ನು
ಪ್ರಖರವಾದ ಜ್ಯೋತಿಯ ಪ್ರಭೆಯಲ್ಲಿ
ಹುಡುಕೋಣ ಸಮಾಜದ ಸ್ವಾಸ್ಥ್ಯವನ್ನು
ದೀಪ ಹಚ್ಚಿ ಬೆಳಗಿಸೋಣ ಭವ್ಯ ಭಾರತವನ್ನು
ವಿಜೃಂಭಿಸಲಿ ವಿಶ್ವ ಗುರು ಭಾರತ
ನಿಶ್ಕಲ್ಮಶ ಮನದಿ ಹಚ್ಚಿ ದೀಪವ
ಜಗಕ್ಕೆ ಸಾರುವ ವಿವಿಧತೆಯಲ್ಲಿ ಏಕತೆಯ
ಪ್ರಬಲವಾಗಿ ಪ್ರಚುರಪಡಿಸುವ
ಮನುಕುಲವನ್ನು ಬೆಳಗುವ ದಿವ್ಯ ಜ್ಯೋತಿ ಭಾರತವೆಂದು
ರಚನೆ : ರಾಘವೇಂದ್ರ ಬಿಲ್ಲವ. ಶಿರೂರು