ದಿಲ್ಲಿ ಕ್ರಿಕೆಟಿಗ ಸಂಜಯ್ ಡೋಭಾಲ್ ಕೋವಿಡ್-19ಗೆ ಬಲಿ
Team Udayavani, Jun 30, 2020, 5:30 AM IST
ಹೊಸದಿಲ್ಲಿ: ಕೋವಿಡ್-19 ಮಾರಿ ದಿಲ್ಲಿಯ ಮಾಜಿ ಕ್ರಿಕೆಟಿಗ ಸಂಜಯ್ ಡೋಭಾಲ್ ಅವರನ್ನು ಬಲಿ ತೆಗೆದುಕೊಂಡಿದೆ.
53 ವರ್ಷದ ಅವರು ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ವಾರದ ಹಿಂದೆ ಅನಾರೋಗ್ಯಕ್ಕೆ ತುತ್ತಾದಾಗ ಸಂಜಯ್ ಡೋಭಾಲ್ ಅವರನ್ನು ಬಹದ್ದೂರ್ಗಢದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೋವಿಡ್-19 ಪಾಸಿಟಿವ್ ಕಂಡು ಬಂತು. ಬಳಿಕ ಉತ್ತಮ ಸೌಲಭ್ಯವುಳ್ಳ ದ್ವಾರಕಾ ಹಾಸ್ಪಿಟಲ್ಗೆ ಅವರನ್ನು ಸ್ಥಳಾಂತರಿಸಲಾಯಿತು.
ಇಲ್ಲಿ ಪ್ಲಾಸ್ಮಾ ಥೆರಪಿ ನಡೆಸ ಲಾಯಿತಾದರೂ ಇದು ಪ್ರಯೋ ಜನವಾಗಲಿಲ್ಲ ಎಂದು ದಿಲ್ಲಿ ಕ್ರಿಕೆಟ್ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.
ಸಂಜಯ್ ಡೋಭಾಲ್ ಅವರ ಗಂಭೀರ ಸ್ಥಿತಿಯನ್ನು ಅರಿತ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ಮಿಥುನ್ ಮನ್ಹಾಸ್ ಪ್ಲಾಸ್ಮಾ ದಾನಿಗಳ ನೆರವು ಯಾಚಿಸಿದ್ದರು. ಆಗ ಆಮ್ ಆದ್ಮಿ ಪಾರ್ಟಿ ಎಂಎಲ್ಎ ದಿಲೀಪ್ ಪಾಂಡೆ ಇದರ ವ್ಯವಸ್ಥೆ ಮಾಡಿದ್ದರು.
ಸಂಜಯ್ ಡೋಭಾಲ್ ನಿಧನಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗೌತಮ್ ಗಂಭೀರ್, ವೀರೇಂದ್ರ ಸೆಹವಾಗ್, ಮದನ್ಲಾಲ್, ಮಿಥುನ್ ಮನ್ಹಾಸ್, ಸಿ.ಕೆ. ಖನ್ನಾ ಮೊದಲಾದವರು ಶೋಕ ವ್ಯಕ್ತ ಪಡಿಸಿದ್ದಾರೆ.
ಕ್ರಿಕೆಟ್ ಕೋಚಿಂಗ್
ಸಂಜಯ್ ಡೋಭಾಲ್ ರಣಜಿ ಪಂದ್ಯ ಆಡಿಲ್ಲ. ಆದರೆ ರಾಜಸ್ಥಾನ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಹೆಸರಾಂತ ಸಾನೆಟ್ ಕ್ರಿಕೆಟ್ ಕ್ಲಬ್ ತಂಡವನ್ನೂ ಪ್ರತಿನಿಧಿಸಿದ್ದರು. ಸದಾ ದಿಲ್ಲಿ ಕ್ರೀಡಾಂಗಣದಲ್ಲಿ ಇರುತ್ತಿದ್ದ ಡೋಭಾಲ್, ಜೂನಿಯರ್ ಕ್ರಿಕೆಟಿ ಗರಿಗೆ ಕೋಚಿಂಗ್ ನೀಡುತ್ತಿದ್ದರು.
ಇವರ ಓರ್ವ ಪುತ್ರ ಸಿದ್ಧಾಂತ್ ರಾಜಸ್ಥಾನ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಕಿರಿಯ ಪುತ್ರ ಏಕಾಂಶ್ ದಿಲ್ಲಿ ಅಂಡರ್-23 ತಂಡ ವನ್ನು ಪ್ರತಿನಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ