ಸಿಎಂ ಯೋಗಿ ಹೆಸರಿನಲ್ಲಿ ಜಾಹೀರಾತು ಪಡೆಯುತ್ತಿದ್ದ ಪತ್ರಕರ್ತನ ಬಂಧನ!
Team Udayavani, Jan 31, 2022, 6:25 AM IST
ಭುವನೇಶ್ವರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರಿನಲ್ಲಿ ತನ್ನ ಸಾಪ್ರಾಹಿಕ ಪತ್ರಿಕೆಗೆ ಜಾಹೀರಾತು ಪಡೆಯುತ್ತಿದ್ದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ 2016ರಲ್ಲಿಯೇ ಎಫ್ಐಆರ್ ದಾಖಲಾಗಿತ್ತು.
ಒಡಿಶಾದ ಭುವನೇಶ್ವರದಲ್ಲಿನ ಮನೋಜ್ ಕುಮಾರ್ ಹೆಸರಿನ ಪತ್ರಕರ್ತ [email protected] ಎಂದು ನಕಲಿ ಇ-ಮೇಲ್ ಐಡಿ ಮಾಡಿಕೊಂಡಿದ್ದು, ಅದರಿಂದ ಪವರ್ ಗ್ರಿಡ್ ಕಾರ್ಪೋರೇಷನ್, ಗ್ಯಾಸ್ ಅಥಾರಿಟಿ ಸೇರಿ ಅನೇಕ ಸಂಸ್ಥೆಗಳಿಗೆ ಜಾಹೀರಾತು ನೀಡುವಂತೆ ಮೇಲ್ ಕಳುಹಿಸುತ್ತಿದ್ದ. ಆತ ಯೋಗಿ ಅವರ ನಕಲಿ ಸಹಿಯನ್ನೂ ಬಳಸಿಕೊಳ್ಳುತ್ತಿದ್ದ.
ಈ ಬಗ್ಗೆ ಆಗ ಸಂಸದರಾಗಿದ್ದ ಯೋಗಿ ಅವರ ಆಪ್ತ ಸಹಾಯಕರು ಪೊಲೀಸ್ ದೂರು ನೀಡಿದ್ದರು. 2016ರಲ್ಲೇ ಎಫ್ಐಆರ್ ದಾಖಲಾಗಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.