ಅಂಬೇವಾಡಿ-ಮೌಳಂಗಿ ರಸ್ತೆ ದುರಸ್ತಿಗೆ ಆಗ್ರಹ
Team Udayavani, Nov 25, 2021, 10:13 AM IST
ದಾಂಡೇಲಿ: ದಾಂಡೇಲಿ-ಜೋಯಿಡಾ ತಾಲೂಕಿನ ಪ್ರವಾಸೋದ್ಯಮಕ್ಕೆ ಮಹ್ವತದ ಕೊಡುಗೆ ನೀಡುತ್ತಿರುವ ಮೌಳಂಗಿ ಇಕೋ ಪಾರ್ಕಿಗೆ ಹೋಗುವ ಅಂಬೇವಾಡಿ-ಮೌಳಂಗಿ ರಸ್ತೆ ಹದಗೆಟ್ಟು ವರ್ಷ ಮೂರು ಸಂದರೂ ಊರಿನ ರಸ್ತೆ ದುರಸ್ತಿಯಾಗದಿರುವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯ ಅಂಬೇವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸಹಿತ ಸ್ಥಳೀಯರು ಸೇರಿ ಶಾಸಕ ರಸ್ತೆ ದುರಸ್ತಿಗೆ ಮನವಿ ಮಾಡಿದ್ದರು. ಸ್ಥಳೀಯ ಗ್ರಾಮಸ್ಥರು ಸೇರಿ ಪ್ರತಿಭಟನೆಯನ್ನು ನಡೆಸಿ ರಸ್ತೆ ದುರಸ್ತಿಗಾಗಿ ಆಗ್ರಹಿಸಿದ್ದರು. ಆದರೆ ಇದು ಪರಿಗಣನೆಗೆ ಬರದಿರುವುದರಿಂದ ರಸ್ತೆ ಮತ್ತೆ ಮತ್ತೆ ಹದಗೆಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೌಳಂಗಿ ಇಕೋ ಪಾರ್ಕ್ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಬರುವಾಗ ಹೊಂಡ ಗುಂಡಿಗಳಿಂದ ಕೂಡಿದ ಈ ರಸ್ತೆಯನ್ನು ನೋಡಿ ಹಿಡಿಶಾಪ ಹಾಕುತ್ತಿರುವುದು ಮಾಮುಲಿ ಎಂಬಂತಾಗಿದೆ. ಈ ರಸ್ತೆ ನೋಡಿ ಇಕೋ ಪಾರ್ಕಿಗೆ ಯಾಕೆ ಹೋಗಬೇಕೆಂಬ ಮಾತು ಕೇಳಿ ಬರತೊಡಗಿದೆ. ಈ ರಸ್ತೆ ದುರಸ್ತಿಗೆ ಇನ್ನಾದರೂ ಕ್ರಮ ಕೈಗೊಂಡು ಸ್ಥಳೀಯರ ನೋವಿಗೆ ಸ್ಪಂದಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ