ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ
Team Udayavani, Jun 6, 2020, 8:19 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಟ್ಟು 24 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಸೋಂಕಿತರ ಪೈಕಿ ಬಹುತೇಕರು ಹೊರರಾಜ್ಯ ಮತ್ತು ವಿದೇಶಗಳಿಂದ ಆಗಮಿಸಿದವರು.
ಕೋವಿಡ್-19 ದೃಢಪಟ್ಟ 30 ವರ್ಷದ ವ್ಯಕ್ತಿ ಮುಂಬಯಿಯಿಂದ ಮೇ 17ರಂದು ಆಗಮಿಸಿ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ನಲ್ಲಿದ್ದರು. ಅವರ ಕ್ವಾರಂಟೈನ್ ಅವಧಿ ಮುಕ್ತಾಯಗೊಂಡ ಬಳಿ ಬಂಟ್ವಾಳಕ್ಕೆ ಆಗಮಿಸಿದ್ದರು. ಗುಜರಾತ್ನಿಂದ ಆಗಮಿಸಿದ್ದ 38 ವರ್ಷದ ವ್ಯಕ್ತಿಗೂ ಕೋವಿಡ್-19 ದೃಢಪಟ್ಟಿದೆ. 44 ವರ್ಷದ ಮಹಿಳೆ ಮತ್ತು 43 ವರ್ಷದ ವ್ಯಕ್ತಿ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಆಗಮಿಸಿದ್ದ ಸಂದರ್ಭದಲ್ಲಿ ಅವರ ಗಂಟಲು ದ್ರವ ಮಾದರಿ ತೆಗೆಯಲಾಗಿತ್ತು. 27 ವರ್ಷದ ಯುವಕ ಪಣಂಬೂರು ಎನ್ಎಂಪಿಟಿ ಹಡಗು ನಿರ್ಮಾಣ ಸಿಬಂದಿ. 36 ವರ್ಷದ ವ್ಯಕ್ತಿ, 37 ವರ್ಷದ ವ್ಯಕ್ತಿ, 31 ವರ್ಷದ ಯುವಕ, 35 ವರ್ಷದ ಮಹಿಳೆ, 33 ವರ್ಷದ ಯುವಕ, 24 ವರ್ಷದ ಯುವಕ ವಿಮಾನಯಾನದ ಸಿಬಂದಿಗಳಾಗಿದ್ದು, ಜೂ. 3ರಂದು ದುಬಾಯಿಯಿಂದ ಕೇರಳದ ಕಣ್ಣೂರಿಗೆ ಆಗಮಿಸಿ ನಂತರ ಮಂಗಳೂರಿಗೆ ಆಗಮಿಸಿ ಖಾಸಗಿ ಹೊಟೇಲ್ನಲ್ಲಿ ಕ್ವಾರಂಟೈನ್ನಲ್ಲಿದ್ದರು.
24 ವರ್ಷದ ಯುವಕ ಜೂ. 2ರಂದು ಯುಕ್ರೈನ್-ಟರ್ಕಿಯಿಂದ ಆಗಮಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿದ್ದರು. 42 ವರ್ಷದ ಮಹಿಳೆ ಮೇ 26ರಂದು ಉಡುಪಿ ಕುಂದಾಪುರದಿಂದ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದು ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಲಾಗಿತ್ತು. 13 ವರ್ಷದ ಬಾಲಕಿ, 53 ವರ್ಷದ ವ್ಯಕ್ತಿ, 42 ವರ್ಷದ ಮಹಿಳೆ, 16 ವರ್ಷದ ಯುವಕ, 29 ವರ್ಷದ ಯುವಕ, 15 ವರ್ಷದ ಬಾಲಕ, 38 ವರ್ಷದ ಮಹಿಳೆ ಹಾಗೂ 32 ವರ್ಷದ ಮಹಿಳೆ ಮಹಾರಾಷ್ಟ್ರದಿಂದ ಆಗಮಿಸಿ ಉಡುಪಿಯಲ್ಲಿ ಕ್ವಾರಂಟೈನ್ನಲ್ಲಿದ್ದು, ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮೂಡುಬಿದಿರೆಗೆ ಆಗಮಿಸಿದ್ದರು. 30 ವರ್ಷದ ಯುವಕ ಮುಂಬಯಿಯಿಂದ ಆಗಮಿಸಿ ಉಡುಪಿಯಲ್ಲಿ ಕ್ವಾರಂಟೈನ್ನಲ್ಲಿದ್ದು, ಅವಧಿ ಮುಕ್ತಾಯವಾದ ಬಳಿಕ ಬೆಳ್ತಂಗಡಿಗೆ ತೆರಳಿದ್ದರು. 30 ವರ್ಷದ ಯುವಕ ಜೂ. 2ರಂದು ಸೌದಿ ಅರೇಬಿಯಾದಿಂದ ಮಂಗಳೂರಿಗೆ ಆಗಮಿಸಿದ್ದು, ಹೊಟೇಲ್ನಲ್ಲಿ ಕ್ವಾರಂಟೈನ್ನಲ್ಲಿದ್ದರು. ಈ ಎಲ್ಲರಿಗೂ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಮೂವರು ಬಿಡುಗಡೆ
ಕೋವಿಡ್-19 ದೃಢಪಟ್ಟು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮೂವರು ಗುಣಮುಖರಾಗಿ ಶನಿವಾರ ಬಿಡುಗಡೆಗೊಂಡಿದ್ದಾರೆ. 30 ವರ್ಷದ ಯುವಕ, 46 ವರ್ಷದ ವ್ಯಕ್ತಿ ಹಾಗೂ 36 ವರ್ಷದ ವ್ಯಕ್ತಿ ಬಿಡುಗಡೆಗೊಂಡವರು.
30ರ ಪೈಕಿ 24 ಪಾಸಿಟಿವ್
ವೆನ್ಲಾಕ್ ಆಸ್ಪತ್ರೆಯಲ್ಲಿ ಶನಿವಾರ ಸ್ವೀಕರಿಸಿದ್ದ 30 ವರದಿಗಳ ಪೈಕಿ 24 ಪಾಸಿಟಿವ್, 6 ನೆಗೆಟಿವ್ ಆಗಿದೆ. ಹೊಸದಾಗಿ 54 ಮಾದರಿಗಳನ್ನು ಕಳುಹಿಸಲಾಗಿದೆ. ಹಿಂದೆ ಕಳುಹಿಸಿದ್ದ ಒಟ್ಟು 20 ವರದಿಗಳು ಸ್ವೀಕರಿಸಲು ಬಾಕಿ ಇದೆ. 2 ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ