ಈ ಬಾರಿಯ ಕನ್ನಡ ರಾಜ್ಯೋತ್ಸವ ಪುರಸ್ಕಾರ ಅರ್ಹ ಸಾಧಕರಿಗೆ ಸಂದಿದೆ ಎಂಬ ಅಭಿಪ್ರಾಯ ನಿಮ್ಮದೇ?
Team Udayavani, Oct 30, 2019, 4:17 PM IST
ಮಣಿಪಾಲ: ಎಲೆ ಮರೆ ಕಾಯಿಗಳಂತಿರುವ ಹಲವು ಸಾಧಕರು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಸಚಿವ ಸಿ.ಟಿ ರವಿ ನೇತೃತ್ವದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ 64 ಗಣ್ಯರನ್ನು ಆಯ್ಕೆ ಮಾಡಿದೆ. ಇದರಲ್ಲಿ ಬಹುತೇಕರು ಸದ್ದಿಲ್ಲದೆ ತಮ್ಮ ಕಾಯಕದಲ್ಲಿ ತೊಡಗಿಕೊಂಡವರು. ಈ ಹಿನ್ನಲೆಯಲ್ಲಿ “ಈ ಬಾರಿಯ ಕನ್ನಡ ರಾಜ್ಯೋತ್ಸವ ಪುರಸ್ಕಾರ ಅರ್ಹ ಸಾಧಕರಿಗೆ ಸಂದಿದೆ ಎಂಬ ಅಭಿಪ್ರಾಯ ನಿಮ್ಮದೇ?” ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿತ್ತು. ಆಯ್ದ ಅಭಿಪ್ರಾಯಗಳು ಇಂತಿವೆ.
ಲೋಕೇಶ್ ಗೌಡ: ರೂಪೇಶ್ ರಾಜಣ್ಣ ನವರು ಕನ್ನಡ ತಾಯಿಯ ಸೇವೆಗೆ ಅಪಾರವಾದ ಕೋಡುಗೆ ನೀಡಿದ್ದಾರೆ. ಈ ಪುರಸ್ಕಾರ ಅವರಿಗೆ ಕೊಡಬೇಕಿತ್ತು.
ಶ್ರೀಕಾಂತ್ ದರ್ಶನ್: ಕನ್ನಡಿಗ ರೂಪೇಶ್ ರಾಜಣ್ಣನವರಿಗೆ ಕನ್ನಡ ರಾಜ್ಯೋತ್ಸವ ಪುರಸ್ಕಾರ ದೊರಕಬೇಕಿತ್ತು. ಕನ್ನಡವೇ ದೇವರು ಕರ್ನಾಟಕ ದೇವಾಲಯ ಎಂದು ನಂಬಿರುವವರು ಅವರು.
ಪ್ರವೀಣ್ ಕುಮಾರ್: ಬಿಜೆಪಿ ನಾಯಕರ ಬೆಂಬಲಿಗರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.
ಹಬೀಬ್ : ಸಮಾಜಕ್ಕಾಗಿ ಹಗಳಿರುಳು ಯಾವುದೇ ಪಲಾಪೆಕ್ಷೆಯಿಲ್ಲದೇ ದುಡಿಯುವ ಜನರಿಗೆ ನೀಡಿದರೆ ಮಾತ್ರ ಅದಕ್ಕೊಂದು ಮಾರ್ಯದೆ. ಈಗೀಗ ಅದು ಮಾರಾಟದ ವಸ್ತು ಆಗಿ ಹೋಗುತ್ತಿದೆ. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಈ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಿತ್ತು. ಅದೇಷ್ಟೋ ರಕ್ತದಾನಿಗಳನ್ನು ಒಟ್ಟುಗೂಡಿಸಿ ಕ್ಷಿಪ್ರ ಸಮಯಕ್ಕೆ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತವನ್ನು ನೀಡುತ್ತ ಬಂದಿರುವ ಒಂದು ಸಂಸ್ಥೆ ಇದು.
ಪ್ರಶಾಂತ್ ಜೆ.ಎಸ್: ಅರ್ಹರಿಗೆ ಸಲ್ಲಲಿಲ್ಲಾ ಅಂತಾದರೆ, ಪ್ರಜೆಗಳ ಅಭಿಪ್ರಾಯಕ್ಕೆ ಸರ್ಕಾರಗಳು ಮನ್ನಣೆ ಕೊಟ್ಟಿದ್ದು ಯಾವತ್ತಾದರೂ ಇದೆಯಾ ?
ನಾಗಭೂಷಣ ಬಿ ಎಂ : ಪಟ್ಟಿ ನೋಡಿದಾಗ ಅರ್ಹ ಸಾಧಕರಿಗೆ ಸಂದಿದೆ ಎಂಬುದು ತಿಳಿಯುತ್ತದೆ.
ಗಾಯತ್ರಿ ರಮೇಶ್: ನಿಜವಾದ ಸಾಧಕರು ಪ್ರಶಸ್ತಿ ಹಿಂದೆ ಹೋಗಬಾರದು. ಅರ್ಜಿ ಸಲ್ಲಿಸಿ ಲಾಬಿ ಮಾಡಿ ಪ್ರಶಸ್ತಿ ಪಡೆಯುವುದು ಉತ್ತಮ ಬೆಳವಣಿಗೆಯಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?