ಗುರುಪೂರ್ಣಿಮೆ ಬಗ್ಗೆ ಸಿಂಪಲ್ ಸುನಿ ಹೇಳಿದ್ದೇನು ಗೊತ್ತಾ?
Team Udayavani, Jul 6, 2020, 8:52 AM IST
“ಚಮಕ್’ ನಿರ್ದೇಶಕ ಸಿಂಪಲ್ ಸುನಿ ಸದ್ಯ ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ನಿರ್ದೇಶಿಸಲು ಅಣಿಯಾಗುತ್ತಿದ್ದಾರೆ. ಅಲ್ಲದೇ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರವನ್ನು ಅನೌನ್ಸ್ ಕೂಡಾ ಮಾಡಿದ್ದಾರೆ. ಈ ನಡುವೆ “ಗುರುಪೂರ್ಣಿಮೆ’ಯ ಪ್ರಯುಕ್ತ ಟ್ವೀಟರ್ನಲ್ಲಿ ಗುರುನಮನವನ್ನು ಸಲ್ಲಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ “ಮನೆಯೆ ಮೊದಲ ಪಾಠಶಾಲೆ.. ಗುರುಗಳಾದ ಅಪ್ಪ ಅಮ್ಮನಿಂದಿಡಿದು…ಅಂಗನವಾಡಿ ಟೀಚರ್ …ಶಾಲಾ, ಕಾಲೇಜು ಗುರುವರ್ಯರಿಗೆ, ಸಿನಿಮಾ ಕಲಿಸಿಕೊಟ್ಟ ತಂತ್ರಜ್ಞರಿಗೆ, ಮಗಾ ಎಂದಾಗ ಗುರು ಎಂದ ಗೆಳೆಯರಿಗೆ…ಅಚಾನಾಕ್ ಆಗಿ ಕಷ್ಟಕೊಟ್ಟೋ. ಪಾರು ಮಾಡೋ ಬದುಕು ಕಲಿಸಿಕೊಟ್ಟ ಪ್ರತಿಯೊಬ್ಬರಿಗೂ ಗುರುಪೂರ್ಣಿಮೆಯ ನಮನಗಳು..’ ಎಂದು ಟ್ವೀಟ್ ಮಾಡಿದ್ದಾರೆ.
ಮನೆಯೆ ಮೊದಲ ಪಾಠಶಾಲೆ..ಗುರುಗಳಾದ ಅಪ್ಪ ಅಮ್ಮನಿಂದಿಡಿದು…ಅಂಗನವಾಡಿ ಟೀಚರ್ …ಶಾಲಾ,ಕಾಲೇಜು ಗುರುವರ್ಯರಿಗೆ ,,ಸಿನಿಮ ಕಲಿಸಿಕೊಟ್ಟ ತಂತ್ರಜ್ಞರಿಗೆ,, ಮಗಾ ಎಂದಾಗ ಗುರು ಎಂದ ಗೆಳೆಯರಿಗೆ…ಅಚಾನಾಕ್ ಆಗಿ ಕಷ್ಟಕೊಟ್ಟೋ.ಪಾರುಮಾಡೋ ಬದುಕು ಕಲಿಸಿಕೊಟ್ಟ ಪ್ರತಿಯೊಬ್ಬರಿಗೂ ಗುರುಪೂರ್ಣಿಮೆಯ ನಮನಗಳು..
— ಸುನಿ/SuNi (@SimpleSuni) July 5, 2020
ಇನ್ನು ನಟ ಗಣೇಶ್ಗೆ ನಿರ್ದೇಶಕ ಸುನಿ “ಸಖತ್’ ಚಿತ್ರ ಮಾಡುತ್ತಿರೋದು ಗೊತ್ತೇ ಇದೆ. ಆ ಚಿತ್ರ ಇನ್ನು ಬಿಡುಗಡೆಯಾಗದೇ ಇರುವಾಗಲೇ ಇಬ್ಬರ ಕಾಂಬಿನೇಷನ್ನಲ್ಲಿ “ದಿ ಸ್ಟೋರಿ ಆಫ್ ರಾಯಗಢ’ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಈ ಹಿಂದೆ ಸುನಿ ಮತ್ತು ಗಣೇಶ್ ಕಾಂಬಿನೇಷನ್ನಲ್ಲಿ “ಚಮಕ್’ ಮೂಡಿಬಂದಿತ್ತು. ಅದಾದ ನಂತರ ಅವರು “ಸಖತ್’ ಚಿತ್ರ ಶುರುಮಾಡಿದರು ಈಗ “ದಿ ಸ್ಟೋರಿ ಆಫ್ ರಾಯಗಢ’ ಚಿತ್ರಕ್ಕೆ ಕೈ ಹಾಕಿದ್ದಾರೆ. ಸದ್ಯಕ್ಕೆ “ಸಖತ್’ 15 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಂತರ “ಅವತಾರ ಪುರುಷ’ ಚಿತ್ರದ ಹಾಡು, ಫೈಟ್ಸ್ ಬಾಕಿ ಇದೆ ನಂತರದ ದಿನಗಳಲ್ಲಿ ಈ ಚಿತ್ರಕ್ಕೆ ಕೈ ಹಾಕುವುದಾಗಿ ಸುನಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!