ಮನವನು ಕೆಡಿಸಿಕೊಳ್ಳಬೇಡಿ…


Team Udayavani, Jun 2, 2020, 5:10 AM IST

o manasse

ವ್ಯಾವಹಾರಿಕವಾಗಿ ನಡೆದುಕೊಳ್ಳುವವರ ಜೊತೆ, ಎಮೋಷನಲ್‌ ಅಟ್ಯಾಚ್‌ಮೆಂಟ್‌ ಬೆಳೆಸಿಕೊಳ್ಳಬಾರದು. ಇದು ಸಂಬಂಧಗಳಲ್ಲೂ, ಕಂಪನಿಗಳಲ್ಲೂ ಅಪ್ಲೈ ಆಗುತ್ತದೆ…

ಲಾಕ್‌ಡೌನ್‌, ಕೋವಿಡ್‌ 19… ಈ ಪದಗಳನ್ನು ಕೇಳುವ ಮನಸ್ಸುಗಳು  ಕಲ್ಲವಿಲಗೊಳ್ಳುತ್ತವೆ. ಈ ಮೂರು ತಿಂಗಳಲ್ಲಿ, ಆ ಮಟ್ಟದ ಭಯಾನಕ ವಾತಾವರಣ ಸೃಷ್ಟಿಯಾಗಿದೆ. ಮುಂದೇನು, ನಮ್ಮ ಭವಿಷ್ಯ ಹೇಗೆ, ಕೆಲಸ ಇರುತ್ತಾ… ಇಂಥವೇ  ಯೋಚನೆಗಳು ಎಲ್ಲರನ್ನೂ ಹಣ್ಣುಮಾಡಿವೆ. ಪರಿಣಾಮ; ಮನಸ್ಸು ಭಯದ ಗೂಡಾಗಿದೆ. “ಭವಿಷ್ಯ ಕುರಿತು ಯೋಚಿಸಿಯೇ, ಟೆಕ್ಕಿಯೊಬ್ಬರು ಮಾನಸಿಕವಾಗಿ ತಲ್ಲಣಗೊಂಡಿದ್ದಾರೆ.

ಯೋಚಿಸಿ ಯೋಚಿಸಿ ಅವರಿಗೆ ರಾತ್ರಿ ನಿದ್ದೆಬಾರದು. ಕಣ್ಣುಗಳೆಲ್ಲ ಊದಿಕೊಂಡಿವೆ’- ಎಂದು ಪರಿಚಯದ ವೈದ್ಯರೊಬ್ಬರು ಹೇಳಿದರು. ಟೆಕ್ಕಿಗೆ ಅಂಥಾ ಸ್ಥಿತಿ ಯಾಕೆ ಬಂತು ಎಂದು ವಿಚಾರಿಸಿದಾಗ ತಿಳಿದದ್ದು: ಅವರು ಪ್ರತಿ ತಿಂಗಳೂ 80 ಸಾವಿರದಷ್ಟು ಸಾಲ ಕಟ್ಟಬೇಕು. ಈಗ ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಮೂರು ತಿಂಗಳ ನೋಟಿಸ್‌ ಕೈಯಲ್ಲಿ ಇದೆ. ಪರಿಣಾಮವಾಗಿ, ಮುಂದಿನ ದಾರಿಯ ಬಗ್ಗೆ ತಿಳಿಯದೆ ಕಂಗಾಲಾಗಿದ್ದಾರೆ.

ಕೋವಿಡ್‌ 19 ತಂದ ಸಂಕಷ್ಟಗಳು ಒಂದೆರಡಲ್ಲ. ಕೋವಿಡ್‌ 19ದ ರಿಣಾಮಕ್ಕಿಂತ, ಕಂಪನಿಗಳು ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳುವ ತೀರ್ಮಾನ ಇದೆಯಲ್ಲ; ಅದು, ಇಡೀ ಸಮಾಜದ ಸೈಕಾಲಜಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನೀವು ಗಮನಿಸಿರಬಹುದು. ಎಷ್ಟೋ ಜನ, ಆಫೀಸಿನ ಬಗ್ಗೆ ಅತೀ  ಅನ್ನುವಂಥ ಅಟ್ಯಾಚ್‌ಮೆಂಟ್‌ ಬೆಳೆಸಿಕೊಂಡಿರುತ್ತಾರೆ. ಎಲ್ಲ ಜವಾಬ್ದಾರಿಯನ್ನೂ ತಮ್ಮ ಹೆಗಲ ಮೇಲೆ ಇಟ್ಟುಕೊಂಡು ಓಡಾಡುತ್ತಿರುತ್ತಾರೆ.

ಆದರೆ, ಕೆಲಸ ಬಿಡಬೇಕಾಗಿ ಬಂದಾಗ- “ಕಂಪನಿಗೆ ಎಷ್ಟೆಲ್ಲಾ ದುಡಿದೆ, ಕೊನೆಗೆ ಸಿಕ್ಕ ಮರ್ಯಾದೆ ಇದು…’ ಅನ್ನೋ ಬೇಸರದ  ಮಾತು, ಅವರ ಬಾಯಿಂದಲೇ ಬರುತ್ತದೆ. ಗಮನಿಸಿ: ಅವರ ಸಂಕಟದ ಮಾತಿನ ಹಿಂದೆ ಎಮೋಷನಲ್‌ ಅಟ್ಯಾಚ್‌ ಮೆಂಟ್‌ ಕೆಲಸ ಮಾಡುತ್ತಿರುತ್ತದೆ. ಕೆಲಸದ ಕುರಿತು ಉತ್ಸಾಹ, ಕರ್ತವ್ಯಪರತೆ ತಪ್ಪಲ್ಲ. ಆದರೆ, ಅತಿಯಾದ ಅಟ್ಯಾಚ್‌ಮೆಂಟ್‌ ಅಗತ್ಯವಿಲ್ಲ. ಇದೇ ಉತ್ಸಾಹವನ್ನು ಬದುಕುವುದರ ಕಡೆ ತೋರಿಸಿದರೆ, ಪಿಂಕ್‌ ಸ್ಲಿಪ್‌ ಸಿಕ್ಕರೂ ಮನಸ್ಸು ನಿರಾಳವಾಗಿರುತ್ತಿತ್ತು, ಅಲ್ಲವೇ? ಇಂಥ ಸಂದರ್ಭದಲ್ಲಿ ಮನಸ್ಸನ್ನು ಕೆಡಿಸಿಕೊಳ್ಳಬಾರದು.

ಕಷ್ಟದ ಸಂದರ್ಭವನ್ನು ಎದುರಿಸಲು ಸಜ್ಜಾಗಬೇಕು. ಸಾಲದ ಹೊರೆ ಕಡಿಮೆ ಮಾಡಿಕೊಳ್ಳುವ  ದಾರಿಗಳನ್ನು ನೋಡಬೇಕು. ಮೂರು ತಿಂಗಳು ಕಷ್ಟವಾಗಬಹುದು. ಆಮೇಲೆ ಯಾವುದಾದರೂ ಒಂದು ದಾರಿ ತೆರೆದುಕೊಳ್ಳುತ್ತದೆ. ಅಲ್ಲಿಯ ತನಕ ತಾಳ್ಮೆ ಬೇಕು. ಅನಗತ್ಯವಾಗಿ ಏನೇನೋ ಊಹಿಸಲು ಹೋಗದೆ, ಮನಸ್ಸೇ ರಿಲ್ಯಾಕ್ಸ್ ಪ್ಲೀಸ್‌, ಅಂತ ನಿಮಗೆ ನೀವೇ ಹೇಳಿಕೊಳ್ಳುತ್ತಿರಬೇಕು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.