
ಶಿವಪಾಡಿಯಲ್ಲಿ ಶಿವ ಚಿತ್ತಾರ: ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ
Team Udayavani, Feb 1, 2023, 12:37 PM IST

ಉಡುಪಿ: ಉಡುಪಿ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ʼಶಿವಪಾಡಿಯಲ್ಲಿ ಶಿವ ಚಿತ್ತಾರʼ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.
ಅತಿರುದ್ರ ಮಹಾಯಾಗ ಸಮಿತಿ ಶ್ರೀ ಕ್ಷೇತ್ರ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.22 ರಿಂದ ಮಾರ್ಚ್ 5 ರವರೆಗೆ ಆಯೋಜಿಸುತ್ತಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಫೆ.5 ರಂದು ಉಡುಪಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯು 3 ವಿಭಾಗಗಳಲ್ಲಿ ನಡೆಯುತ್ತಿದ್ದು, ಈ ವಿವರ ಇಂತಿವೆ:
ವಿಭಾಗ 1: 5 ಮತ್ತು 6ನೇ ವರ್ಗ
ವಿಷಯ: ಐಚ್ಛಿಕ
1ನೇ ಬಹುಮಾನ 4000
2ನೇ ಬಹುಮಾನ 3000
3ನೇ ಬಹುಮಾನ 2000
ವಿಭಾಗ 2: 7 ಮತ್ತು 8 ವರ್ಗ
ವಿಷಯ: ಐಚ್ಛಿಕ
1ನೇ ಬಹುಮಾನ 5000
2ನೇ ಬಹುಮಾನ 4000
3ನೇ ಬಹುಮಾನ 3000
ವಿಭಾಗ 3: 9 ಮತ್ತು 10ನೇ ವರ್ಗ
ವಿಷಯ: ತಾಂಡವ ಶಿವ / ಶಾಂತ ಶಿವ / ರುದ್ರ ಶಿವ
1ನೇ ಬಹುಮಾನ 6000
2ನೇ ಬಹುಮಾನ 5000
3ನೇ ಬಹುಮಾನ 4000
ಪ್ರತಿ ವಿಭಾಗದಲ್ಲಿ 3 ನಗದು ಬಹುಮಾನ ಮತ್ತು 10 ಸಮಾಧಾನಕರ ಬಹುಮಾನಗಳಿವೆ.
ಸ್ಪರ್ಧಿಗಳಿಗಿರುವ ನಿಯಮಗಳು ಇಂತಿವೆ:
ಸ್ಪರ್ಧಿಗಳು ಬಳಪ, ಸ್ಕೆಚ್ ಪೆನ್, ವಾಟರ್ ಕಲರ್ ಇತ್ಯಾದಿಗಳನ್ನು ಬಳಸಬಹುದು. ಡ್ರಾಯಿಂಗ್ ಶೀಟ್ ಅನ್ನು ಸ್ಥಳದಲ್ಲೇ ನೀಡಲಾಗುವುದು.
ಬೆಳಿಗ್ಗೆ 9-9.30 ರೊಳಗೆ ಸ್ಪರ್ಧಿಗಳು ನೋಂದಣಿ ಮಾಡಿಕೊಳ್ಳಬೇಕು.
ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಫಲಿತಾಂಶಗಳನ್ನು ತಕ್ಷಣವೇ ಪ್ರಕಟಿಸಲಾಗುವುದು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು.
ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ಎಲ್ಲರಿಗೂ ಊಟದ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗುವುದು.
ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಮತ್ತು ಮಾಹಿತಿಗಾಗಿ ಸಂಘಟಕರನ್ನು ಸಂಪರ್ಕಿಸಲು ಅಧ್ಯಕ್ಷ ಕೆ. ರಘುಪತಿ ಭಟ್, ಮಹೇಶ್ ಠಾಕೂರ್ ಸೂಚಿಸಿದ್ದಾರೆ.
ಸಂಚಾಲಕರ ದೂರವಾಣಿ ಸಂಖ್ಯೆ ಈ ಕೆಳಗಿನಂತಿವೆ:
ರಶ್ಮಿತಾ ಬಾಲಕೃಷ್ಣ ಹೆಗ್ಡೆ: 9110831417
ಸುಚೇತಾ ನಾಯಕ್: 9611800009
ಆಶಾ ಪಾಟೀಲ್: 9900405740
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ದೆಹಲಿ-ಎನ್ಸಿಆರ್ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್