ಶಿರಸಿ : ಈ ಇಬ್ಬರಲ್ಲಿ ಯಾರಿಗೆ ಒಲಿಯಲಿದೆ ಕೆಡಿಸಿಸಿ ಗದ್ದುಗೆ?
Team Udayavani, May 8, 2022, 8:14 PM IST
ಶಿರಸಿ: ಕೆಡಿಸಿಸಿ ಬ್ಯಾಂಕ್ ಗೆ ಸಿದ್ದಾಪುರ ತಾಲೂಕಿನ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಪ್ರತಿನಿಧಿ ಸ್ಥಾನಕ್ಕೆ ಮರು ಚುನಾವಣೆ ಮೇ 9ರಂದು ನಡೆಯಲಿದ್ದು, ನೇರ ಹಣಾಹಣಿ ನಡೆದಿದೆ. ಇಬ್ಬರು ಅಭ್ಯರ್ಥಿಗಳ ನಡುವೆ ತುರುಸಿನ ಸ್ಪರ್ಧೆ ನಡೆಯಲಿದೆ.
ಈ ಹಿಂದೆ ಆಯ್ಕೆ ಆಗಿದ್ದ ಷಣ್ಮುಖ ಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಈಗ ಚುನಾಚಣೆ ನಡೆಯಲಿದೆ. ಸಮ ಮತಗಳನ್ನು ಪಡೆದು ಚೀಟಿ ಎತ್ತಿದಾಗ ಸೋಲುಂಡ ಷಣ್ಮುಖ ಗೌಡರ ಒಂದು ಕಾಲದ ಪಟ್ಟಾ ಶಿಷ್ಯನಾಗಿದ್ದ ವಿವೇಕ ಭಟ್ಟ ಗಡಿಹಿತ್ಲುವಿಗೆ ನೇರವಾಗಿ ಸ್ಪರ್ಧೆ ಒಡ್ಡಿದೆ.
ಬಿಳಗಿ ಸೊಸೈಟಿಯ ರಾಘವೇಂದ್ರ ಶಾಸ್ತ್ರೀ ಅಖಾಡದಲ್ಲಿ ಬಿಸಿ ಏರಿಸಿದ್ದಾರೆ. ಶಿರಸಿಯ ಕೆಡಿಸಿಸಿ ಬ್ಯಾಂಕ್ ನಲ್ಲಿ ಮೇ 9ಕ್ಕೆ ನಡೆಯುವ ಚುನಾವಣೆಯಲ್ಲಿ ಈ ಇಬ್ಬರಲ್ಲಿ ಒಬ್ಬರು ಗೆಲುವಿನ ನಗೆ ಬೀರಲಿದ್ದಾರೆ.
ಸಿದ್ದಾಪುರ ತಾಲೂಕಿನ ಒಟ್ಟೂ 24 ಪ್ರಾಥಮಿಕ ಪತ್ತಿನ ಸೊಸೈಟಿಯಲ್ಲಿ ಕಳೆದ ಬಾರಿ ಗಡಿಹಿತ್ಲು ಗುರುವಿಗೇ ಸಡ್ಡು ಹೊಡೆದು 12 ಮತ ಪಡೆದಿದ್ದರು. ಈ ಬಾರಿ ಕೂಡ ನೇರ ಸ್ಪರ್ಧೆ ನಡೆಯಲಿದೆ.
ಇದನ್ನೂ ಓದಿ : ಮದುವೆ ಮೆರವಣಿಗೆ ವೇಳೆ ವಾಹನ ಢಿಕ್ಕಿ: ನಾಲ್ವರ ಸಾವು
ತಾಲೂಕು ಪಂಚಾಯ್ತಿ ಜನ ಪ್ರತಿನಿಧಿ ಆಗಿದ್ದ ವಿವೇಕ ಹಾಗೂ ಕಾಳುಮೆಣಸು ವಹಿವಾಟಿನಲ್ಲಿ ಹೆಸರು ಮಾಡಿದ ರಾಘವೇಂದ್ರ ಶಾಸ್ತ್ರೀ ಈಗ ಬಲವಾಗಿ ಪೈಪೋಟಿ ನೀಡುತ್ತಿದ್ದಾರೆ.
ನೆಲಮಾವ ಸೊಸೈಟಿಯ ಗಣಪತಿ ಭಟ್ಟ, ಬಿದ್ರಕಾನ್ ಸೊಸೈಟಿಯ ಸುಬ್ರಹ್ಮಣ್ಯ ಭಟ್ಟ, ಹೀನಗಾರ ಸೊಸೈಟಿಯ ಅಶೋಕ ಹೆಗಡೆ ಆಕಾಂಕ್ಷಿತರಾಗಿ ನಾಮ ಪತ್ರ ಸಲ್ಲಿಸಿ ವಾಪಸ್ ಪಡೆದಿದ್ದರು. ಅವರು ವಾಪಸ್ ಪಡೆದದ್ದು ಯಾರುಲಿಗೆ ಹಿತ ಎಂಬುದೂ ಕಾದು ನೋಡಬೇಕಾಗಿದೆ.
ಈ ಮಧ್ಯೆ ಪ್ರಮುಖ ನಾಯಕರಲ್ಲಿ ಇಬ್ಬರು ಯಾರನ್ನು ಬೆಂಬಲಿಸುವರು ಎಂಬುದೂ ಪ್ರಶ್ನೆಯಾಗಿದೆ. ಅವರ ಬೆಂಬಲವೂ ಸೊಸೈಟಿ ಪ್ರತಿನಿಧಿಗಳ ನಡುವೆ ಎಷ್ಟು ಪರಿಣಾಮ ಬೀರುತ್ತವೆ ಎಂಬುದೂ ಮುಖ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ