ನೈಋತ್ಯ ರೈಲ್ವೆ : ಮುಂದಿನ ನಾಲ್ಕು ವರ್ಷದಲ್ಲಿ ಎಲ್ಲಾ ಮಾರ್ಗದಲ್ಲಿ ವಿದ್ಯುತ್‌ ರೈಲು!


Team Udayavani, Oct 19, 2020, 12:52 PM IST

ಮುಂದಿನ ನಾಲ್ಕು ವರ್ಷದಲ್ಲಿ ಎಲ್ಲ ಮಾರ್ಗದಲ್ಲಿ ವಿದ್ಯುತ್‌ ರೈಲು!

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಮಾರ್ಗಗಳಲ್ಲಿ ವಿದ್ಯುದೀಕರಣಕ್ಕೆ ಮುಂದಾಗಿದ್ದು, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 322 ಕಿಮೀ ವಿದ್ಯುದೀಕರಣ ಮಾಡುವ ಗುರಿ ಹಾಕಿಕೊಂಡಿದೆ. ಮುಂದಿನ ನಾಲ್ಕು ವರ್ಷದಲ್ಲಿ ಮಂಜೂರಾಗಿರುವ ಎಲ್ಲಾ ಮಾರ್ಗಗಳಲ್ಲಿ ವಿದ್ಯುತ್‌ ರೈಲುಗಳನ್ನು ಓಡಿಸುವ ಯೋಜನೆ ರೂಪಿಸಿದ್ದಾರೆ.
ಡೀಸೆಲ್‌ ಎಂಜಿನ್‌ ರೈಲುಗಳನ್ನು ಓಡಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುವುದರ ಜತೆಗೆ ವೆಚ್ಚದಾಯಕವಾಗಿರುವ ಡೀಸೆಲ್‌ ಕೂಡ ಉಳಿತಾಯವಾಗಲಿದೆ. ಇದಕ್ಕೆ ಪರ್ಯಾಯವಾಗಿ ಭಾರತೀಯ ರೈಲ್ವೆ ಇಲಾಖೆ ವಿದ್ಯುತ್‌ ಎಂಜಿನ್‌ಗಳ ಬಳಕೆಗೆ ಮುಂದಾಗಿದ್ದು, ಇದಕ್ಕೆ ಬೇಕಾಗುವ ವಿದ್ಯುತ್‌ ದೇಶದಲ್ಲೇ ಉತ್ಪಾದಿಸಬಹುದಾಗಿದ್ದು, ಆಗ ಡೀಸೆಲ್‌ಗಾಗಿ ಅನ್ಯ ದೇಶಗಳ ಮೇಲೆ ಅವಲಂಬನೆ ಆಗುವುದನ್ನು ತಡೆಗಟ್ಟಬಹುದಾಗಿದೆ. ಅದಕ್ಕಾಗಿ ರೈಲ್ವೆ ಇಲಾಖೆ ತನ್ನ ಮಾರ್ಗಗಳಲ್ಲಿ ವಿದ್ಯುದೀಕರಣ ಕಾಮಗಾರಿ ಕೈಗೊಳ್ಳುತ್ತಿದೆ.

ನೈಋತ್ಯ ರೈಲ್ವೆಯು 2019-20ನೇ ಸಾಲಿನಲ್ಲಿ ಹುಬ್ಬಳ್ಳಿ ವಿಭಾಗದ ತೋರಣಗಲ್ಲು-ರಂಜಿತಪುರ (ಸಿಂಗಲ್‌ ಲೈನ್‌) ನಡುವೆ ಮಂಜೂರಾದ 34 ಟ್ರಾಕ್‌ ಕಿಮೀನಲ್ಲಿ 22.93 ರೂಟ್‌ ಕಿಮೀ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಳ್ಳಾರಿ – ರಾಯದುರ್ಗ (ಸಿಂಗಲ್‌ ಲೈನ್‌) ನಡುವಿನ 58.66 ಟ್ರಾಕ್‌ ಕಿಮೀನಲ್ಲಿ 52.64 ರೂಟ್‌ ಕಿಮೀ ಹಾಗೂ ತೋರಣಗಲ್ಲು-ಹೊಸಪೇಟೆ ನಡುವಿನ
34 ಟ್ರಾಕ್‌ ಕಿಮೀನಲ್ಲಿ 32ರೂಟ್‌ ಕಿಮೀ ಹಾಗೂ ಬೈಯ್ಯಪ್ಪನಹಳ್ಳಿ-ಆನೆಕಲ್ಲ ರಸ್ತೆಯ 37.4 ಟ್ರಾಕ್‌ ಕಿ.ಮೀ.ನಲ್ಲಿ 34.5ರೂಟ್‌ ಕಿ.ಮೀ. ಹಾಗೂ ಮೈಸೂರು ವಿಭಾಗದ ರಾಯದುರ್ಗ-ಥಳಕು ನಡುವಿನ 53 ಟ್ರಾಕ್‌ ಕಿ.ಮೀ.ನಲ್ಲಿ 48ರೂಟ್‌ ಕಿ.ಮೀ. ಕಾಮಗಾರಿ ಪೂರ್ಣಗೊಳಿಸಿದೆ.

ಇದನ್ನೂ ಓದಿ:ಚಿಕ್ಕೋಡಿ ಪುರಸಭೆ: ಬಿಜೆಪಿ ಮಡಿಲಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ

2019-20ನೇ ಸಾಲಿನಲ್ಲಿ ಒಟ್ಟು 217 ಟ್ರಾಕ್‌ ಕಿ.ಮೀ.ನಲ್ಲಿ 191ರೂಟ್‌ ಕಿ.ಮೀ.ನಷ್ಟು ಕಾಮಗಾರಿ ಮುಗಿಸಿದೆ.
2020-21ನೇ ಸಾಲಿನಲ್ಲಿ ಹೊಸಪೇಟೆ – ಹುಬ್ಬಳ್ಳಿ-ವಾಸ್ಕೋ (346 ಕಿ.ಮೀ.) ಮಾರ್ಗದ 193 ಕಿ.ಮೀ. ಗುರಿಯಲ್ಲಿ 161ಕಿ.ಮೀ. ರೂಟ್‌
ಕಾಮಗಾರಿ ಪೂರ್ಣಗೊಂಡಿದೆ. ಹೊಸೂರು ಮಾರ್ಗವಾಗಿ ಬೆಂಗಳೂರು-ಒಮಲೂರ (196 ಕಿ.ಮೀ.) ಮಾರ್ಗದ 85 ಕಿ.ಮೀ. ಗುರಿಯಲ್ಲಿ 38ಕಿ. ಮೀ. ರೂಟ್‌ ಹಾಗೂ ಚಿಕ್ಕಬಾಣಾವರ-ಹುಬ್ಬಳ್ಳಿ  (455 ಕಿ.ಮೀ.) ಮಾರ್ಗದ 105 ಕಿ.ಮೀ. ಗುರಿಯಲ್ಲಿ
72 ಕಿ.ಮೀ. ರೂಟ್‌ ಹಾಗೂ ಬಳ್ಳಾರಿ-ಚಿಕ್ಕಜಾಜೂರ (184ಕಿಮೀ) ಮಾರ್ಗದಲ್ಲಿನ 50 ಕಿ.ಮೀ. ಗುರಿ ಪೂರ್ಣಗೊಳಿಸಿದೆ.

ಗದಗ-ಹೂಟಗಿ (284ಕಿಮೀ) ಇದರಲ್ಲಿ 128 ಕಿ.ಮೀ.ವರೆಗೆ ಹೂಟಗಿ ಮಾರ್ಗದಲ್ಲಿ ಟಿಎಸ್‌ಎಸ್‌ನ ಅವಶ್ಯಕತೆಯಿದೆ ಹಾಗೂ
ಯಲಹಂಕ-ಬಂಗಾರಪೇಟೆ (149ಕಿಮೀ), ಲೋಂಡಾ-ಮಿರಜ್‌(189ಕಿಮೀ) ನಡುವೆ ಕೈಗೊಳ್ಳಬೇಕಿದ್ದ ಕಾಮಗಾರಿಯಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಹಾಗೂ ಕೋವಿಡ್‌-19 ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು, ಹೀಗಾಗಿ ಈ ಮಾರ್ಗಗಳಲ್ಲಿ ಕೈಗೊಳ್ಳಬೇಕಿದ್ದ ವಿದ್ಯುದೀಕರಣ ಕಾಮಗಾರಿ ಗುರಿ ತಲುಪಲು ಸಾಧ್ಯವಾಗಿಲ್ಲ.

ಇದನ್ನೂ ಓದಿ:ಕೆಕೆಆರ್ ತಂಡದಿಂದ ಅಲಿ ಖಾನ್ ಔಟ್: ಕಿವೀಸ್ ಕೀಪರ್ ಸೀಫರ್ಟ್ ಸೇರ್ಪಡೆ

2020-21ನೇ ಸಾಲಿನಲ್ಲಿ ಹೊಂದಲಾಗಿದ್ದ 630  ಕಿ.ಮೀ. ಗುರಿಯಲ್ಲಿ ನಿರೀಕ್ಷಿಸಲಾಗಿದ್ದ 322 ಕಿ.ಮೀ. ರೂಟ್‌ ಕಾಮಗಾರಿ ಪೂರ್ಣಗೊಂಡಿದೆ. ಜೋಡು ಮಾರ್ಗ ಕಾಮಗಾರಿ ಜತೆ ಜತೆಯಲ್ಲಿಯೇ ವಿದ್ಯುದೀಕರಣ ಕಾಮಗಾರಿಯನ್ನು ನೈಋತ್ಯ ರೈಲ್ವೆ
ಕೈಗೊಳ್ಳುತ್ತಿದೆ. ಈಗಾಗಲೇ ಬಳ್ಳಾರಿ-ಕಾರಿಗನೂರು ಮತ್ತು ತೋರಣಗಲ್ಲು-ರಂಜಿತಪುರ ನಡುವಿನ 89.5 ಕಿ.ಮೀ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ತೋರಣಗಲ್ಲುವರೆಗೆ ರೈಲುಗಳು ಸಂಚರಿಸುತ್ತಿವೆ. ಆಣೆಕಲ್ಲು- ಹೊಸೂರು-ಪೆರಿಯಾನಗಥುನೈ ವಿಭಾಗದಲ್ಲಿ 38 ಕಿ.ಮೀ. ರೂಟ್‌ ಇಲೆಕ್ಟ್ರಿಫೈಡ್‌ ಕಾಮಗಾರಿ ಕೈಗೊಳ್ಳಲು ಕೇಂದ್ರ ರೈಲ್ವೆ ವಿಭಾಗವು (ಸಿಆರ್‌ಎಸ್‌) ಯೋಜಿಸಿ
ಸೆಪ್ಟೆಂಬರ್‌ನಲ್ಲಿ ಪರಿಶೀಲನೆ ಮಾಡಿದೆ.

ಈ ಯೋಜನೆಯ ಭಾಗವಾಗಿ ಈ ವರ್ಷ ಹೂಟಗಿ-ಕಲಗುರ್ಕಿ (128 ಕಿಮೀ), ಘಟಪ್ರಭಾ-ಕುಡಚಿ (47 ಕಿಮೀ), ಚಿಕ್ಕಬಾಣಾವರ-ಬಾಣಸಂದ್ರ (105ಕಿಮೀ), ಹುಬ್ಬಳ್ಳಿ-ಲೋಂಡಾ (90ಕಿಮೀ), ಕಾರಿಗನೂರು-ಹುಲಕೋಟಿ (102 ಕಿಮೀ), ಕಾರಿಗನೂರು-ಹರ್ಲಾಪುರ (71ಕಿಮೀ) ಯೋಜನೆಯನ್ನು ಸಿಆರ್‌ಎಸ್‌ ಪರಿಶೀಲಿಸಿದೆ. ಥಳಕು-ಚಿತ್ರದುರ್ಗ (50ಕಿಮೀ), ಪೆರಿಯಾನಗಥುನೈ-ಪಾಲಕ್ಕೋಡ (50ಕಿಮೀ), ಯಲಹಂಕ-ದೇವನಹಳ್ಳಿ (23ಕಿಮೀ) ನಡುವೆ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ.
ಕೋವಿಡ್‌-19 ಲಾಕ್‌ಡೌನ್‌ ಘೋಷಣೆ ಆಗುವುದಕ್ಕಿಂತಲೂ ಮೊದಲು ನೈಋತ್ಯ ರೈಲ್ವೆಯು ವಿಜಯವಾಡ-ಹುಬ್ಬಳ್ಳಿ-ವಿಜಯವಾಡ ಹಾಗೂ ತಿರುಪತಿ-ಹುಬ್ಬಳ್ಳಿ-ತಿರುಪತಿ ಈ ಎರಡು ರೈಲುಗಳನ್ನು ಬಳ್ಳಾರಿ-ಗುಂತಕಲ್ಲ ನಡುವೆ ವಿದ್ಯುದೀಕರಣ ಎಂಜಿನ್‌ ರೈಲು ಓಡಿಸುತ್ತಿತ್ತು. ನಂತರ ಕೋವಿಡ್‌-19 ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದ ಹಿನ್ನೆಲೆಯಲ್ಲಿ ವಿದ್ಯುದ್ದೀಕರಣ ಇಂಜಿನ್‌ ರೈಲುಗಳ ಓಡಾಟ
ಸ್ಥಗಿತಗೊಳಿಸಿದೆ. ಮುಂದಿನ ದಿನಗಳಲ್ಲಿ ಮತ್ತೆ ಇವುಗಳನ್ನು ಆರಂಭಿಸುವ ನಿರೀಕ್ಷೆಗಳಿವೆ ಎಂದು ಮೂಲಗಳು ತಿಳಿಸಿವೆ.

– ಶಿವಶಂಕರ ಕಂಠಿ

ಟಾಪ್ ನ್ಯೂಸ್

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.