ಕುಂದಾಪುರದಲ್ಲಿ ಸಾಧಕರಿಗೆ ಗಜರಾಜನಿಂದ ಗೌರವ : ಅಮರಾವತಿಯ ಅಮರ ವೈಭವಕ್ಕೆ ಕಳೆ ತಂದ ಐರಾವತ

ನಾನು ಉಡುಪಿಯ ಮಗಳು: ಮಂಜಮ್ಮ ಜೋಗತಿ

Team Udayavani, Mar 7, 2022, 11:29 AM IST

ಕುಂದಾಪುರದಲ್ಲಿ ಸಾಧಕರಿಗೆ ಗಜರಾಜನಿಂದ ಗೌರವ : ಅಮರಾವತಿಯ ಅಮರ ವೈಭವಕ್ಕೆ ಕಳೆ ತಂದ ಐರಾವತ

ಕುಂದಾಪುರ : ಯಕ್ಷಕಾಶಿ ಕುಂದಾಪುರದ ನೆಹರೂ ಮೈದಾನದಲ್ಲಿ ಉದ್ಯಮಿ ಮಂಜುನಾಥ್‌ ಪೂಜಾರಿ ಬೆಳ್ಳಾಡಿ ಸಾರಥ್ಯದಲ್ಲಿ ಶನಿವಾರ ಪ್ರದರ್ಶನಗೊಂಡ ಅಮರಾವತಿಯ ಅಮರ ವೈಭವವು ಗಜರಾಜನ ಆಗಮನ ಸಹಿತ ಹತ್ತಾರು ಹೊಸತನಕ್ಕೆ ಸಾಕ್ಷಿಯಾಯಿತು.

ಯಕ್ಷಗಾನಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತೆ, ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ, ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ, ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಉಡುಪಿ ಫುಡ್‌ ಹಬ್‌ನ ಡಾ| ಅಶೋಕ್‌ ಶೆಟ್ಟಿ ಬೆಳ್ಳಾಡಿ ಅವರನ್ನು ದೂರದ ಹರಿಹರ ಮಠದಿಂದ ಆಗಮಿಸಿದ ನಿಜ ಗಜರಾಜನೇ ಸಮ್ಮಾನಿಸಿದ್ದು ವಿಶೇಷವಾಗಿತ್ತು.

ಉಡುಪಿ ತವರು ಮನೆ
ಸಮ್ಮಾನ ಸ್ವೀಕರಿಸಿ ಮಾತನಾಡಿದ ಮಂಜಮ್ಮ ಜೋಗತಿ, ನಾನು ಒಂದು ರೀತಿಯಲ್ಲಿ ಉಡುಪಿಯ ಮಗಳಿದ್ದ ಹಾಗೇ. ರಾಜ್ಯದಲ್ಲಿ ಈ ಜಿಲ್ಲೆಗೆ ಬಂದಷ್ಟು ಬೇರೆ ಯಾವ ಜಿಲ್ಲೆಗೂ ಹೋಗಿಲ್ಲ. ಬಳ್ಳಾರಿಯಿಂದ ಉಡುಪಿಯ ಕುಂದಾಪುರ, ಕೋಟ, ಹೆಬ್ರಿ ಸಹಿತ ಅನೇಕ ಬಾರಿ ಕಾರ್ಯಕ್ರಮಗಳಿಗೆ ಬಂದಿದ್ದೇನೆ. ಇದು ನನ್ನ ತವರೂರು. ಊರಲ್ಲಿ ಇಲ್ಲಿಗೆ ಕೆಲವು ದಿನ ಬರದಿದ್ದರೆ ಕೇಳುತ್ತಾರೆ ನಿನ್ನ ತವರು ಉಡುಪಿಗೆ ಈ ಸಲ ಹೋಗಲ್ವಾ ಎಂದವರು ಇಲ್ಲಿನ ನಂಟಿನ ಬಗ್ಗೆ ಹೇಳಿಕೊಂಡರು.

ಈ ಸಂದರ್ಭದಲ್ಲಿ ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಮುಂಬಯಿನ ಆದರ್ಶ್‌ ಶೆಟ್ಟಿ ಹಾಲಾಡಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ, ಉದ್ಯಮಿಗಳಾದ ಡಾ| ವಿಜಯಕೃಷ್ಣ ಪಡುಕೋಣೆ ಬೆಂಗಳೂರು, ಶರತ್‌ ಶೆಟ್ಟಿ ಬೆಳ್ಳಾಡಿ, ಜಗದೀಶ್‌ ಶೆಟ್ಟಿ ಕುದ್ರುಕೋಡ್‌, ಅರವಿಂದ್‌ ಪೂಜಾರಿ, ಸದಾಶಿವ ಪೂಜಾರಿ, ಸಂಘಟಕ ಮಂಜುನಾಥ್‌ ಪೂಜಾರಿ ಬೆಳ್ಳಾಡಿ ಮತ್ತಿತರರು ಉಪಸ್ಥಿತರಿದ್ದರು.

ಯಕ್ಷ ಕವಿ ಪವನ್‌ ಕಿರಣ್ಕೆರೆ ಪ್ರಸ್ತಾವಿಸಿ, ಅವಿನಾಶ್‌ ಕಾಮತ್‌ ಸಮ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಮಹೇಶ್‌ ವಕ್ವಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ : ಹೃದಯಗಳನ್ನು ಗೆದ್ದ ಫೋಟೋ : ಪಾಕ್ ನಾಯಕಿಯ ಮಗುವಿನೊಂದಿಗೆ ಭಾರತೀಯ ತಂಡ

ಮನೆಯಿಂದ ಹೊರಹಾಕದೆ ಶಿಕ್ಷಣ ಕೊಡಿ
ಇದು ನನಗೆ ಸಿಕ್ಕ ಗೌರವವಲ್ಲ. ನನ್ನಂತೆ ಸಾಕಷ್ಟು ಮಂದಿ ಅನೇಕ ಮನೆಗಳಲ್ಲಿ ಜನಿಸಿ, ಸಂಕಷ್ಟ ಅನುಭವಿಸಿದ್ದಾರೆ. ಅವರೆಲ್ಲರ ಪ್ರತಿನಿಧಿಯಾಗಿ ನಾನು ಈ ಗೌರವ ಸ್ವೀಕರಿಸಿದ್ದೇನೆ. ದಯವಿಟ್ಟು ನಿಮ್ಮ ಮನೆಗಳಲ್ಲಿ ನನ್ನಂತೆ ಯಾರಾದರೂ ಜನಿಸಿದರೆ ಮನೆಯಿಂದ ಹೊರಹಾಕಬೇಡಿ. ಆಗ ಅವರು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಲೇಬೇಕಾಗುತ್ತದೆ. ಅದಕ್ಕಿಂತ ಶಿಕ್ಷಣ ಕೊಡಿಸಿ. ಅವರನ್ನು ವಿದ್ಯಾವಂತರನ್ನಾಗಿಸಿ, ಬದುಕು ಕಟ್ಟಿಕೊಳ್ಳಲು ನೆರವಾಗಿ ಎಂದು ಮಂಜಮ್ಮ ಜೋಗತಿ ಅವರು ತೃತೀಯ ಲಿಂಗಿಗಳ ಶೋಷನೀಯ ಬದುಕಿನ ಬಗ್ಗೆ ಗದ್ಗದಿತರಾಗಿ ನುಡಿದರು.

ವಿಶೇಷತೆಗೆ ಸಾಕ್ಷಿ
ಅಮರಾವತಿಯ ಅಮರ ಚರಿತೆ ಯಕ್ಷಗಾನ ಪ್ರದರ್ಶನವು ಹೊಸಬಗೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಅಮರಾವತಿಯ ಮೆರುಗಿಗೆ ನಿಜ ಗಜರಾಜನೇ ಆಗಮಿಸಿದ್ದು ವಿಶೇಷವಾಗಿತ್ತು. ತೆರೆದ ರಂಗಮಂಟಪದಲ್ಲಿ ಅಮರಾವತಿಯ ಅದ್ದೂರಿ ರಂಗಸಜ್ಜಿಕೆ, ಇಂದ್ರನ ಆಸನ, ಕಿನ್ನರ, ಗಂಧರ್ವರ ಆಸನಗಳು ನೋಡುಗರನ್ನು ಆಕರ್ಷಿಸಿತು. ಪ್ರಮುಖ ಒಂದೇ ದ್ವಾರವಿದ್ದು, ಅದರಲ್ಲಿ ಈಟಿ ಹಿಡಿದು ಇಬ್ಬರು ಸೈನಿಕರು ನಿಂತಿದ್ದರು. ಇನ್ನು ನಾಯಕವಾಡಿಯ ಚೆನ್ನಬಸವೇಶ್ವರ ಯುವಕ ಮಂಡಲದ ಕಂಗಿಲು ಜಾನಪದ ನೃತ್ಯ ನರ್ತನ ಗಮನಸೆಳೆಯಿತು. ಗಾನ ವೈಭವವು ರಂಗು ತಂದಿತ್ತು.

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.