ಶಾಲಾ ಹಂತದಲ್ಲಿಯೇ ಹಾಕಿಗೆ ಪ್ರೋತ್ಸಾಹ

ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಅಣಿ

Team Udayavani, May 24, 2022, 9:21 AM IST

1

ಹುಬ್ಬಳ್ಳಿ: ರಾಷ್ಟ್ರೀಯ ಕ್ರೀಡೆಗೆ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ ಎನ್ನುವ ವಿಷಾದದ ನಡುವೆಯೂ ಇಲ್ಲೊಂದು ಸ್ಪೋರ್ಟ್ಸ್ ಕ್ಲಬ್‌ ಶಾಲೆ ಹಂತದಿಂದಲೇ ಹಾಕಿ ಬೆಳೆಸಬೇಕು ಎನ್ನುವ ಪಣ ತೊಟ್ಟಿದೆ.

ಹಲವು ವರ್ಷಗಳ ನಂತರ ಹಾಕಿ ಟೂರ್ನಿ ಆಯೋಜಿಸುವ ಮೂಲಕ ಈ ಕ್ರೀಡೆಗೆ ಇನ್ನೂ ಆಟಗಾರರ ಒಲವಿದೆ ಎಂಬುದನ್ನು ಮನಗಂಡಿದ್ದು, ಆಸಕ್ತ ಶಾಲೆ ಮಕ್ಕಳನ್ನು ಹಾಕಿಗೆ ಪ್ರೇರೇಪಿಸಿ ಶಾಲಾ ಹಂತದಲ್ಲಿ ಹಾಕಿ ಪ್ರೀತಿ ಬೆಳೆಸುವ ಕಾರ್ಯಕ್ಕೆ ಮುಂದಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿ ಒಂದು ಕಾಲದಲ್ಲಿ ಹಾಕಿ ಟೂರ್ನಿಗೆ ಹೆಸರು ಮಾಡಿತ್ತು. ಕಾಲ ಬದಲಾದಂತೆ ಕ್ರಿಕೆಟ್‌ಗೆ ಮಾರು ಹೋಗುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ಕ್ರೀಡೆ ಹಾಕಿಗೆ ಸೂಕ್ತ ಪ್ರೋತ್ಸಾಹದ ಕೊರತೆಯಿಂದಾಗಿ ಆಟಗಾರರು ಕೂಡ ವಿಮುಖರಾಗುತ್ತಿದ್ದಾರೆ. ಆದರೆ ಇಲ್ಲಿನ ಗಂಗಾಧರ ನಗರ (ಸೆಟ್ಲಮೆಂಟ್‌)ದಲ್ಲಿ ಹಾಕಿಯೇ ಪ್ರಮುಖ ಕ್ರೀಡೆಯಾಗಿ ಉಳಿದಿದೆ. ಇಲ್ಲಿರುವ ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್‌ ಈ ಭಾಗದಲ್ಲಿ ಹಾಕಿಯನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ. ಇತ್ತೀಚೆಗೆ ನಡೆದ ಹಾಕಿ ಟೂರ್ನಿ ಈ ಕ್ರೀಡೆಯ ಪೋಷಣೆಯಲ್ಲಿರುವ ಕ್ಲಬ್‌ಗ ದೊಡ್ಡ ಗೆಲುವು ನೀಡಿದೆ. ಇಂದಿನ ಪರಿಸ್ಥಿತಿಯಲ್ಲಿ ಹಾಕಿ ಕ್ರೀಡೆಗೆ ಯುವಕರು ಮನಸ್ಸು ಮಾಡುತ್ತಿಲ್ಲ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಹಾಕಿಗೆ ಆಟಗಾರರು ಇರಲ್ಲ ಎನ್ನುವ ಕಾರಣದಿಂದ ಶಾಲಾ ಹಂತದಲ್ಲಿ ಹಾಕಿಯನ್ನು ಬೆಳೆಸಬೇಕು ಎನ್ನುವ ಚಿಂತನೆ ಮುಂದಾಗಿದೆ.

ಎಂಟು ತಂಡಗಳ ಯೋಜನೆ: ವರ್ಷದಿಂದ ವರ್ಷಕ್ಕೆ ಈ ಭಾಗದಲ್ಲಿ ಹಾಕಿ ಪಂದ್ಯಾವಳಿಗಳು ಕ್ಷೀಣಿಸುತ್ತಿವೆ. ಇದರಿಂದಾಗಿ ಹಾಕಿ ಕ್ರೀಡೆ ಕ್ಷೀಣಿಸುತ್ತಿದೆ. ಪಂದ್ಯಾವಳಿಗಾಗಿ ಬೆಂಗಳೂರು ಸೇರಿದಂತೆ ಇತರೆ ಭಾಗಗಳಿಗೆ ತೆರಳುವಂತಾಗಿದೆ. ಹೀಗಾಗಿ ನಗರದ ಎಂಟು ಶಾಲೆಗಳನ್ನು ಗುರುತಿಸಿ ಪ್ರತಿಯೊಂದು ಶಾಲೆಯಲ್ಲಿ ಒಂದು ತಂಡ ಕಟ್ಟುವುದು. ಹಾಕಿ ಕ್ರೀಡೆ ಬಯಸುವ ಹಾಗೂ ಆಸಕ್ತ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರಂಭಿಕ ತರಬೇತಿ ನೀಡುವುದು. ನಂತರದಲ್ಲಿ ಮುಂದುವರಿಯುವ ವಿದ್ಯಾರ್ಥಿಗಳಿಗೆ ಸಮರ್ಪಕ ತರಬೇತಿ ದೊರೆಯಲಿದೆ. ಎಂಟು ಶಾಲೆಗಳ ತಂಡಗಳು ರಚನೆಯಾದ ನಂತರ ಅಂತರ ಶಾಲಾ ಹಾಕಿ ಟೂರ್ನಿ ಮೂಲಕ ಮತ್ತಷ್ಟು ಜನಪ್ರಿಯಗೊಳಿಸುವುದು, ಇದರ ಮೂಲಕ ಇನ್ನಷ್ಟು ಶಾಲೆಗಳ ಮಕ್ಕಳನ್ನು ಸೆಳೆಯುವ ಯೋಚನೆಯಿದೆ. ಇದರಿಂದ ಭವಿಷ್ಯದ ಹಾಕಿ ಪಟುಗಳನ್ನು ಹುಟ್ಟಾಕುವ ಕೆಲಸವಾಗಿದೆ. ಕ್ಲಬ್‌ನ ಹಿರಿಯ ಆಟಗಾರರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಿದ್ಧರಿದ್ದಾರೆ. ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕವಿಲ್ಲದೆ ತರಬೇತಿ ನೀಡುವುದು ವಿಶೇಷವಾಗಿದೆ. ಗುರುತಿಸಿದ ಶಾಲೆಯಲ್ಲಿ ಮೈದಾನವಿದ್ದರೆ ಅಲ್ಲಿಯೇ ತರಬೇತಿ ನಡೆಯಲಿದೆ. ಒಂದು ವೇಳೆ ಮೈದಾನದ ಕೊರತೆಯಿದ್ದರೆ ಕ್ಲಬ್‌ನ ಮೈದಾನದಲ್ಲಿ ತರಬೇತಿ ನೀಡಲಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಬೆಳಿಗ್ಗೆ ಅಥವಾ ಸಂಜೆ ವೇಳೆಯಲ್ಲಿ ತರಬೇತಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ಕಿಟ್‌ ಖರೀದಿಸಲು ಸಾಧ್ಯವಾಗದಿದ್ದರೆ ಕ್ಲಬ್‌ನಲ್ಲಿರುವ ಕಿಟ್‌ ಬಳಕೆ ಮಾಡಬಹುದು. ಇದಕ್ಕಾಗಿ ಒಂದಿಷ್ಟು ಕಿಟ್‌ ಖರೀದಿಗೂ ಚಿಂತನೆ ಮಾಡಿದ್ದಾರೆ. ಇನ್ನು ತರಬೇತಿ ನೀಡುವ ಕೋಚ್‌ಗಳಿಗೆ ಆಯಾ ಶಾಲೆಗಳಿಂದ ಕನಿಷ್ಟ ಗೌರವಧನ ಕೊಡಿಸುವ ಯೋಚನೆಯಿದೆ. ಒಂದು ವೇಳೆ ಶಾಲೆಯಿಂದ ಆಗದಿದ್ದರೆ ಕ್ಲಬ್‌ ಮೂಲಕ ದಾನಿಗಳ ನೆರವು ಪಡೆಯಲಾಗುವುದು. ರಾಷ್ಟ್ರೀಯ ಕ್ರೀಡೆ ಹಾಕಿಗೆ ಪ್ರೋತ್ಸಹ ನೀಡಲು ದಾನಿಗಳ ಕೊರತೆಯಿಲ್ಲ. ಅಂತಹವರ ನೆರವು ಪಡೆದು ಸಾಧ್ಯವಾದರೆ ವಿದ್ಯಾರ್ಥಿಗಳಿಗೆ ಕಿಟ್‌ ಇನ್ನಿತರೆ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ.

ರಾಷ್ಟ್ರ, ರಾಜ್ಯದ ಪಟುಗಳಿದ್ದಾರೆ: ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್‌ ವತಿಯಿಂದ ಈಗಾಗಲೇ ಎಲ್ಲಾ ವಯೋಮಾನದ ತಂಡಗಳನ್ನು ಮಾಡಿ ತರಬೇತಿ ನೀಡಲಾಗುತ್ತಿದೆ. ಇದೇ ಆಧಾರವಾಗಿಟ್ಟುಕೊಂಡು ಸೆಟ್ಲಮೆಂಟ್‌ ಹೊರತಾಗಿಯೂ ಇತರೆ ಶಾಲೆಗಳಲ್ಲಿ ತಂಡಗಳನ್ನು ಕಟ್ಟುವ ಸಾಹಸವಾಗಿದೆ. ಬ್ರಿಟೀಷರ ಕಾಲದಿಂದಲೂ ಈ ಭಾಗದಲ್ಲಿ ಹಾಕಿ ಮೈಗೂಡಿಸಿಕೊಂಡು ಇದರಲ್ಲಿ ರಾಷ್ಟ್ರ, ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್‌ ಕೊಡುಗೆ ದೊಡ್ಡದು. ಇತ್ತೀಚೆಗೆ ನಡೆದ ಐಪಿಎಲ್‌ನಲ್ಲಿ ವಿನಾಯಕ ಬಿಜವಾಡ, ನವೀನ, ಇನ್ನೂ ರಾಜ್ಯ ತಂಡದಲ್ಲಿ ಮಣಿಕಂಠ ಭಜಂತ್ರಿ, ದೀಪಕ ಬಿಜವಾಡ, ಬಿಜು ಹೆರಕಲ್ಲ, ಸಹಾದೇವ ಹೆರಕಲ್ಲ ಆಡಿದ್ದಾರೆ. ಪುಂಡಲಿಕ ಬಳ್ಳಾರಿ ಇದೇ ಮೈದಾನದಿಂದ ಬೆಳೆದು ರಾಷ್ಟ್ರ ತಂಡ ಪ್ರತಿನಿಧಿಸಿದ್ದರು. ಮಂಜು ಬಳ್ಳಾರಿ, ಶ್ರೀಕಾಂತ ಗೋಕಾಕ, ಶಶಿಧರ ಕೊರವರ ಹಾಕಿ ಕೋಚ್‌ಗಳಾಗಿ ಹೆಸರು ಮಾಡಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಹಾಕಿ ಪಟುಗಳು ಈ ಭಾಗದಿಂದ ರಾಜ್ಯ ಸೇರಿದಂತೆ ಇನ್ನಿತರೆ ಟೂರ್ನಿಗಳಲ್ಲಿ ಆಡಿದ ಕೀರ್ತಿ ಹೊಂದಿದ್ದಾರೆ. ಇಷ್ಟೊಂದು ದೊಡ್ಡ ಹಾಕಿ ಬಳಗವನ್ನು ಸದ್ಬಳಕೆ ಮಾಡಿಕೊಂಡು ಇವರ ಮೂಲಕ ಹಾಕಿಗೆ ಒಂದಿಷ್ಟು ಜೀವ ತುಂಬುವ ಹಾಗೂ ಹೊಸ ಚೈತನ್ಯ ಮೂಡಿಸುವ ಕಾರ್ಯ ಕ್ಲಬ್‌ನಿಂದ ಆಗಲಿದೆ.

ಮಕ್ಕಳ ಹಾಗೂ ಶಾಲೆ ಆಸಕ್ತಿ ಗಮನಿಸಿ ಆಯ್ಕೆ ಮಾಡಿಕೊಳ್ಳಲಾಗುವುದು. ಯಂಗ್ ಸ್ಟಾರ್ಸ್ ಕ್ಲಬ್‌ ಮೂಲಕ ಸಾಕಷ್ಟು ಪಟುಗಳು ರಾಷ್ಟ್ರ, ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರೆಲ್ಲರ ಆಸಕ್ತಿ ಹಾಕಿಯನ್ನು ಮತ್ತಷ್ಟು ಬೆಳೆಸಬೇಕು ಎಂಬುದಾಗಿದೆ. ಅವರ ಅನುಭವ ಸದ್ಬಳಕೆ ಮಾಡಿಕೊಂಡು ಶಾಲೆ ಹಂತದಲ್ಲೇ ಹಾಕಿ ಬೆಳೆಸುವ ಕೆಲಸ ಆಗಲಿದೆ. ಮಕ್ಕಳಲ್ಲಿ ಆಸಕ್ತಿಯಿದ್ದರೆ ಸಾಕು ಬೇಕಾಗುವ ಕಿಟ್‌ ಬಳಕೆಯನ್ನು ಕ್ಲಬ್‌ ಒದಗಿಸಲಿದೆ. ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ತರಬೇತಿ ನೀಡಬೇಕು ಎಂಬುದು ಕ್ಲಬ್‌ ಉದ್ದೇಶವಾಗಿದೆ. ಹಾಕಿ ಕ್ರೀಡೆಗೆ ಸಹಾಯ, ನೆರವು ನೀಡಲು ಕ್ರೀಡಾಸಕ್ತರಿಗೆ ಕೊರತೆಯಿಲ್ಲ. –ಚಂದ್ರಶೇಖರ ಗೋಕಾಕ, ಪ್ರಧಾನ ಕಾರ್ಯದರ್ಶಿ, ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್‌   

ಹೇಮರಡ್ಡಿ ಸೈದಾಪುರ

 

 

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.