ಚಿಂತನೆಯೊಂದಿಗೆ ಮನಗೆಲ್ಲುವ ತೇಜಸ್ವಿ ಮಂಟೂರ ಶರಣರು

ಬಸವ ಧರ್ಮ ಪ್ರಚಾರಕ, ಪ್ರವಚನಕಾರ ಶರಣ ಈಶ್ವರ ಮಂಟೂರ ಇನ್ನಿಲ್ಲ

Team Udayavani, Dec 9, 2021, 5:35 PM IST

ಬಸವ ಧರ್ಮ ಪ್ರಚಾರಕ, ಪ್ರವಚನಕಾರ ಶರಣ ಈಶ್ವರ ಮಂಟೂರ ಇನ್ನಿಲ್ಲ

ರಬಕವಿ-ಬನಹಟ್ಟಿ : ನಾಡು, ದೇಶವಷ್ಟೇ ಅಲ್ಲದೆ ಬಹರೇನ್, ದುಬೈ ಸೇರಿದಂತೆ ಹಲವಾರು ದೇಶಗಳಲ್ಲಿ ಬಸವ ತತ್ವ ಪ್ರಸಾರದ ಮೂಲಕ ಬಸವ ಧರ್ಮ ಬೆಳೆಸುವಲ್ಲಿ ಹುನ್ನೂರ-ಮಧುರಖಂಡಿಯ ಬಸವಜ್ಞಾನ ಗುರುಕುಲದ ಶರಣ ಈಶ್ವರ ಮಂಟೂರರ ಪರಿಶ್ರಮ ಅವಿರತವಾದುದು, ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಶಿವಯೋಗ ಸಾಧನೆ ಮಾಡಿ, ಓರ್ವ ಅಸಾಧಾರಣ ಶರಣಜೀವಿಯಾಗಿ 49ನೇ ವಯಸ್ಸಿನಲ್ಲಿಯೇ ಜೀವ ತ್ಯಾಗ ಮಾಡಿರುವದು ನಿಜಕ್ಕೂ ಬೇಸರ ತರುವಂಥದ್ದು ಎಂದು ಹಿರಿಯ ಸಾಹಿತಿ, ಕವಿ ಸಿದ್ಧರಾಜ ಪೂಜಾರಿ ವಿಷಾದ ವ್ಯಕ್ತಪಡಿಸಿದರು.

ನಗರದ ಬಸವ ಸಂಪದ ನಿವಾಸದಲ್ಲಿ ಶರಣ ಈಶ್ವರ ಮಂಟೂರ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಚನಗಳ ಪ್ರಸ್ತುತಿಗಾಗಿ ಸಂಗೀತ ಅಧ್ಯಯನ ಮಾಡಿದ್ದರು .ನಾನೂ ಕೂಡ ಅವರಿಗೆ ಸಂಗಿತದ ಒಳಸುಳಿಗಳ ಬಗ್ಗೆ ಪಾಠಮಾಡಿದ್ದೆ.ವಚನಗಳ ಕುರಿತು ಆಳವಾಗಿ ಪರಸ್ಪರ ಚರ್ಚಿಸುತ್ತಿದ್ದೆವು. ಸಂಗೀತಕ್ಕೆ, ಪ್ರವಚನಕ್ಕೆ ಹೇಳಿ ಮಾಡಿಸಿದ ಧ್ವನಿ.ಅಸ್ಖಲಿತ ವಾಣಿ. ಅವರ ಧ್ವನಿಮುದ್ರಿಕೆಗಳನ್ನು ನನ್ನ ಹಸ್ತದಿಂದಲೇ ಲೋಕಾರ್ಪಣೆ ಮಾಡಿಸಿದ್ದರು. ಆಳವಾದ ಚಿಂತನ,ಮನಗೆಲ್ಲುವ ತೇಜಸ್ವಿ ಅವರಾಗಿದ್ದರು. ನಾನು ಅವರನ್ನು ಜ್ಯೂನಿಯರ್ ಸಿದ್ಧೇಶ್ವರಶ್ರೀ ಎಂದೆಲ್ಲ ಸಂಬೋಧಿಸುತ್ತಿದ್ದೆ. ಜನರನ್ನು ಮಂತ್ರ ಮುಗ್ಧ ಗೊಳಿಸುವ ವ್ಯಕ್ತಿತ್ವ ಅವರದಾಗಿತ್ತು. ಈಗ ಅದೆಲ್ಲ ಬರೀ ನೆನಪಾಗಿ ಉಳಿಯುತ್ತದೆ. ಅವರ ಈ ಅಕಾಲಿಕ ಸಾವಿಗಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಮನಸ್ಸಿಗೆ ಬಹಳ ದುಃಖವಾಗಿದೆ. ಇಡೀ ನಾಡಿನ ದುಃಖದಲ್ಲಿ ನಾನೂ ಕಂಬನಿ ಮಿಡಿಯುತ್ತಿರುವೆ. ಬಸವಾದಿ ಶಿವಶರಣರ ಸಾಲಿನಲ್ಲಿ ಅವರು ಸೇರಿ ಹೋಗಿದ್ದಾರೆ. ಭಾರವಾದ ಹೃದಯದಿಂದ ಅವರಿಗೆ ಶ್ರದ್ಧಾಂಜಲಿ ಸಲ್ಲಸುವೆ ಎಂದರು.

ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಮಾತನಾಡಿ, ಸಂಗೀತಕ್ಕೆ, ಪ್ರವಚನಕ್ಕೆ ಹೇಳಿ ಮಾಡಿಸಿ ಧ್ವನಿ, ಅಸ್ಖಲಿತ ವಾಣಿ, ಅವರ ಧ್ವನಿ ಮುದ್ರಿಕೆಗಳನ್ನು ಲೋಕಾರ್ಪಣೆಗೊಂಡು ಬಸವ ತತ್ವ ಗಟ್ಟಿಯಾಗುವಲ್ಲಿ ಕಾರಣರಾದವರು ಈಶ್ವರ ಮಂಟೂರ ಅವರು, ಆಳವಾದ ಚಿಂತನ, ಮನಗೆಲ್ಲುವ ತೇಜಸಿ ಅವರದಾಗಿತ್ತು. ಶರಣ ಲೋಕ ಪತ್ರಿಕೆ ಹೊರತರುವ ಸಂದರ್ಭದಲ್ಲಿಯೇ ಆಘಾತಕಾರಿ ವಿಷಯ ತುಂಬಾ ನೋವಾಗಿದೆ ಎಂದರು.

ಇದನ್ನೂ ಓದಿ : ದುರಂತದಲ್ಲಿ ಬದುಕುಳಿದಿರೋ ಕ್ಯಾ.ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ

ಮಕ್ಕಳ ಸಂಗಮದ ಅಧ್ಯಕ್ಷ ಜಯವಂತ ಕಾಡದೇವರ ಮಾತನಾಡಿ, ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳ ಹೋಲಿಕೆಯಂತೆಯೇ ಪ್ರವಚನ ಪಟುವಾಗಿ ಬೆಳೆದು ಲಕ್ಷಾಂತರ ಭಕ್ತರನ್ನು ಗಳಿಸಿದ ಕೀರ್ತಿ ಇವರದಾಗಿ, ಜನರನ್ನು ಮಂತ್ರ ಮುಗ್ಧಗೊಳಿಸುವ ವ್ಯಕ್ತಿತ್ವ ಅವರದಾಗಿತ್ತು. ಈಗ ಅದೆಲ್ಲ ಬರೀ ನೆನಪಾಗಿ ಉಳಿಯುತ್ತದೆ. ಅವರ ಅಕಾಲಿಕ ಸಾವಿಗಿಂತ ದೊಡ್ಡ ದುರಂತ ಇನ್ನೊಂದಿಲ್ಲವೆಂದು ಕಂಬನಿ ಮಿಡಿದರು.

ಸದಾಶಿವ ಗಾಯಕವಾಡ, ಮಹಾಂತ ಚೆಟ್ಟೇರ, ಶಂಕರ ಸೊರಗಾಂವಿ, ರವಿಂದ್ರ ಕರಲಟ್ಟಿ, ರಾಜು ಬಾಣಕಾರ, ಶ್ರೀಶೈಲ ಬೀಳಗಿ, ಬಸವರಾಜ ಕೊಕಟನೂರ ಸೇರಿದಂತೆ ಅನೇಕರಿದ್ದರು.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.