ಇವಿಎಂ ಮೆಷಿನ್ ದುರುಪಯೋಗವಾಗುತ್ತಿದೆ :ಖರ್ಗೆ ಆರೋಪ
Team Udayavani, Sep 24, 2019, 3:03 PM IST
ಬೆಂಗಳೂರು : ಕೆಲವು ಕ್ಷೇತ್ರಗಳಲ್ಲಿ ಇವಿಎಂ ಮೆಷಿನ್ ಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆ, ನಾನು ಸೋತಿದ್ದೇನೆ ಅಂತ ಆರೋಪ ಮಾಡುತ್ತಿಲ್ಲ ಇದಕ್ಕೆ ಸಮರ್ಪಕ ಉದಾಹರಣೆಯೂ ನನ್ನ ಬಳಿ ಇದೆ ಎಂದ ಅವರು ಗುರುಮಿಠ್ಕಲ್ ನಲ್ಲಿ 1952 ನಿಂದ 2019 ವರೆಗೆ ಕಾಂಗ್ರೆಸ್ ಆಡಳಿತ ಇತ್ತು ಈ ಕ್ಷೇತ್ರದಲ್ಲಿ ಹಲವರು ಕಾಂಗ್ರೆಸ್ ನಲ್ಲಿ ಸ್ಪರ್ದಿಸಿ ಗೆದ್ದಿದ್ದಾರೆ ಅಲ್ಲದೆ ಕಾಂಗ್ರೆಸ್ ಸಂಸದರಿಗೆ ಗುರುಮಿಠ್ಕಲ್ ಕ್ಷೆತ್ರ ಲೀಡ್ ಕೊಟ್ಟಿದೆ ನಾನು ಶಾಸಕನಾಗಿದ್ದಾಗಲೂ ಅಲ್ಲಿ ಕಾಂಗ್ರೆಸ್ ಇತ್ತು,
ನನ್ನ ಕ್ಷೆತ್ರವನ್ನು ಚಿತ್ತಾಪುರಕ್ಕೆ ಬದಲಾವಣೆ ಮಾಡಿದ ಮೇಲೂ ಅಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು ಇಂತಹ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಬರುತ್ತೆ ಅಂದ್ರೆ ಹೇಗೆ ಸಾಧ್ಯ, ಇದೆಲ್ಲ ಬಿಜೆಪಿಯವರ ವ್ಯವಸ್ಥಿತವಾದ ಷಡ್ಯಂತರ ಅಲ್ಲದೆ ಬೇರೇನೂ ಇಲ್ಲ ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರಕ್ಕೆ ಆರ್ ಎಸ್ ಎಸ್ ನವರು ಎರಡು ವರ್ಷ ಮೊದಲೇ ಬರುತ್ತಾರೆ, ಪ್ರಧಾನಿ ಮೋದಿ ಅವರು ಕೂಡ ಹೆಚ್ಚಿನ ಒತ್ತು ನನ್ನ ಕ್ಷೇತ್ರಕ್ಕೆ ನೀಡುತ್ತಾರೆ ಅಂದರೆ ಅನುಮಾನ ಬರುವುದು ಸಹಜ ಇದು ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.